Author: admin
Advertisement ಸ್ಥಾಪಕ ಅಧ್ಯಕ್ಷರಾಗಿ ಹೊಟೇಲ್ ರಂಗೋಲಿಯ ಮಾಲೀಕ ಚಂದ್ರಹಾಸ ಡಿ. ಶೆಟ್ಟಿ Advertisement ಬಂಟ್ವಾಳ: ನೂತನ ಬಂಟ್ವಾಳ ತಾಲೂಕು ಹೊಟೇಲ್ ಅಸೋಸಿಯೇಷನ್ (BTHA) ಅಸ್ತಿತ್ವಕ್ಕೆ ಬಂದಿದ್ದು ಇದರ ಸ್ಥಾಪಕ ಅಧ್ಯಕ್ಷರಾಗಿ ಹೊಟೇಲ್ ರಂಗೋಲಿಯ ಮಾಲೀಕ ಚಂದ್ರಹಾಸ ಡಿ. ಶೆಟ್ಟಿ ಆಯ್ಕೆಯಾಗಿದ್ದಾರೆ. Advertisement ಉಪಾಧ್ಯಕ್ಷರಾಗಿ ಮತ್ಯಸಾಗರ್ ಹೊಟೇಲ್ ನ ನಾರಾಯಣ್ ಸಿ. ಪೆರ್ನೆ ಕಾರ್ಯದರ್ಶಿಯಾಗಿ ಆನಿಯಾ ದರ್ಬಾರ್ ಹೊಟೇಲ್ ನ ಹಂಝ ಬಸ್ತಿಕೋಡಿ ಕೋಶಾಧಿಕಾರಿಯಾಗಿ ಚಂದ್ರ ವಿಲಾಸ ಹೊಟೇಲ್ ನ ಬಿ. ಧರ್ಮೇಂದ್ರ ಬಂಟ್ವಾಳ ಉಪಾಧ್ಯಕ್ಷರಾಗಿ ಮತ್ಯಸಾಗರ್ ಹೊಟೇಲ್ ನ ನಾರಾಯಣ್ ಸಿ. ಪೆರ್ನೆ, ಕಾರ್ಯದರ್ಶಿಯಾಗಿ ಆನಿಯಾ ದರ್ಬಾರ್ ಹೊಟೇಲ್ ನ ಹಂಝ ಬಸ್ತಿಕೋಡಿ, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ರೈಯವರು , ಕೋಶಾಧಿಕಾರಿಯಾಗಿ ಚಂದ್ರ ವಿಲಾಸ ಹೊಟೇಲ್ ನ ಬಿ. ಧರ್ಮೇಂದ್ರ ಬಂಟ್ವಾಳರವರು ಆಯ್ಕೆಯಾದರು. ವಲಯ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಟ್ಟು 27 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು
ಮಂಚಿ – ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಬಂಟ್ವಾಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆಯಕ್ಷ ಧ್ರುವ – ಯಕ್ಷ ಶಿಕ್ಷಣ ಎನ್ನುವ ಯಕ್ಷಗಾನ ನಾಟ್ಯ ತರಬೇತಿ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು ಇಲ್ಲಿ ಸಂಯೋಜನೆ ಮಾಡಲಾಯಿತು. ಯಕ್ಷಗಾನ ನಾಟ್ಯ ತರಬೇತಿ ಶಿಕ್ಷಣದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಹಾಗೂ ಹಿರಿಯ ವಿದ್ಯಾರ್ಥಿಯಾಗಿರುವ ರೇಖಾ ಜೆ ಶೆಟ್ಟಿ ನೆರವೇರಿಸಿ ಪ್ರಸ್ತುತ ಕಾಲಘಟ್ಟದಲ್ಲಿ ಅವಕಾಶಗಳು ಹೆಚ್ಚು – ಹೆಚ್ಚು ಸೃಷ್ಟಿಯಾಗುತ್ತಾ ಇದೆ. ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯತ್ತ ಮುಖ ಮಾಡಿದ್ದು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಆಸಕ್ತರಾಗಬೇಕು ಎಂದರು. Advertisement ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಸತೀಶ್ ಪಟ್ಲ ಮಾತನಾಡಿ, ಯಕ್ಷಗಾನ ಎನ್ನುವುದು ಒಬ್ಬ ವ್ಯಕ್ತಿಯಲ್ಲಿ ಸಂಸ್ಕಾರ ತುಂಬುವ ಕಲೆ. ಸರ್ವಧರ್ಮೀಯರು ಇಷ್ಟಪಡುವ ಯಕ್ಷಗಾನವು ಎಲ್ಲಾ ಜಾತಿಯ ಕಲಾವಿದರನ್ನು ಒಲಿಸಿಕೊಂಡಿದೆ. ವಿದೇಶಿಗರಿಗಿರುವ ಯಕ್ಷಗಾನದ ಮೇಲಿನ ಒಲವು ತನ್ನ ಮೇಲೆ ವಿಶೇಷವಾದ ಪ್ರಭಾವ ಬೀರಿದೆ.…
ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮ ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮವನ್ನು ಮಂಗಳವಾರ ಕಿನ್ನಿಬೆಟ್ಟುವಿನಲ್ಲಿ ಆಚರಿಸಲಾಯಿತು. ಜೆಸಿಐ ವಲಯ 15ರ ವಲಯ ಕಾರ್ಯಕ್ರಮ ವಿಭಾಗದ ನಿರ್ದೆಶಕಿ ಅಕ್ಷತಾ ಗಿರೀಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋಗ್ರೀನ್ ವಿಭಾಗದ ವಲಯಾಧಿಕಾರಿ ನವೀನ್ ಕೋಡ್ಲಕ್ಕೆ ಕಾರ್ಯಕ್ರಮ ಉದ್ಘಾಟಿಸಿದರು. Advertisement ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮ ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮ Advertisement ಕಾರ್ಯಕ್ರಮದಲ್ಲಿ ಹಿರಿಯ ಜೇನು ಕೃಷಿ ತರಬೇತುದಾರ ಲಕ್ಷಣ ಗೌಡ ಹಾಗೂ ಭೂ ಸೇನೆಯ ಯೋಧ ಸುಧಾಕರ ಶೆಟ್ಟಿ ಅವರನ್ನು ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜೆಸಿಯ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಘಟಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ಕಾರ್ಯಕ್ರಮ ಸಂಯೋಜಕ…
ಬೆಂಗಳೂರಿನ ಕೆನರಾ ಅಸೋಸಿಯೇಷನ್ ಆಶ್ರಯದಲ್ಲಿ ಆಟಿಡೊಂಜಿ ಕೂಟ ಸಂಭ್ರಮ Advertisement ಬೆಂಗಳೂರು: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೆನರಾ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಇತ್ತೀಚೆಗೆ ಆಟಿಡೊಂಜಿ ಕೂಟವನ್ನು ಆಚರಿಸಲಾಯಿತು.ಹಿಂಗಾರ ಅರಳಿಸಿ, ದೀಪ ಬೆಳಗಿಸುವ ಮೂಲಕ ಸಂಘದ ಹಿರಿಯ ಸದಸ್ಯ ಆರ್. ಎಸ್. ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸತೀಶ್ ಸುವರ್ಣ ಆಟಿ ಅಮಾವಾಸ್ಯೆ ಹಾಗೂ ಆಟಿ ತಿಂಗಳಿನ ವಿಶೇಷತೆಯ ಬಗ್ಗೆ ಮಾತನಾಡಿ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಡಾ. ಸುಹಾಸ್ ಸಾಗರ್ ರವರು ವೈದ್ಯಕೀಯ ತುರ್ತು ಪರಿಸ್ಥಿತಿ ಯ ಬಗ್ಗೆ ವಿವರ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಯಂ.ವಿಜಯ್ ಕುಲಾಲ್ ಸ್ವಾಗತಿಸಿದರು. ಕೋಶಾಧಿಕಾರಿ ವಿಠ್ಠಲ್ ಗೊಲ್ಲ ಸಂಘದ 2022-23 ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು. ಉಪಾಧ್ಯಕ್ಷ ನವೀನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ವಂದಿಸಿದರು. Advertisement ಮಕ್ಕಳಿಗೆ ಕೃಷ್ಣ,ರಾಧೆ ಛದ್ಮವೇಷ ಸ್ಪರ್ಧೆಏರ್ಪಡಿಸಲಾಗಿತ್ತು. ಪುಟ್ಟ ಮಕ್ಕಳು ಕೃಷ್ಣ ರಾಧೆ ವೇಷ ಧರಿಸಿ ಪ್ರೇಕ್ಷಕರ…
ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆರೂ 16.72 ಲಕ್ಷ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಣೆ Advertisement ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಿಲ್ಲೆಯಲ್ಲಿ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ ದಡಿ ಈಗಾಗಲೇ 70 ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಸುಜ್ಞಾನ ನಿಧಿ ಕಾರ್ಯಕ್ರಮ ದಡಿ 411 ಮಂದಿ ವಿದ್ಯಾರ್ಥಿಗಳಿಗೆ ರೂ 20.52ಲಕ್ಷ ಶಿಷ್ಯ ವೇತನ ನೀಡಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು ೯೬ ಮಂದಿ ವಿದ್ಯಾರ್ಥಿಗಳಿಗೆ ರೂ 16.72 ಲಕ್ಷ ಶಿಷ್ಯ ವೇತನ ವಿತರಿಸಲಾಗುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದ್ದಾರೆ.ಇಲ್ಲಿನ ಬಂಟ್ವಾಳ ಉನ್ನತಿ ಸೌಧ ಸಭಾಂಗಣದಲ್ಲಿ ಗುರುವಾರ ನಡೆದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಕಾರ್ಯಕ್ರಮ ದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. Advertisement ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಯೋಚನೆಯಿಂದ ಸಮಾಜಮುಖಿ ಯೋಜನೆ ಮುನ್ನಡೆಯುತ್ತಿದೆ ಎಂದರು. Advertisement ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ…
ಬಂಟ್ವಾಳ ಬಿಜೆಪಿಯಿಂದ ತಿರಂಗ ಯಾತ್ರೆ Advertisement ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಿರಂಗ ಯಾತ್ರೆ ಬಿ. ಸಿ. ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಶ್ರೀ ರಕ್ತೇಶ್ವರಿ ದೇವಸ್ಥಾನದ ವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ಮಾತನಾಡಿ ದೇಶದ ಆಡಳಿತದಲ್ಲಿ ಪರಿವರ್ತನೆಯಾಗಿದೆ, ಭಾರತ ಆರ್ಥಿಕವಾಗಿ ವಿಕಸಿತಗೊಂಡಿದೆ, ಸ್ವಾಭಿಮಾನ, ಸ್ವಾವಲಂಬಿ, ಸ್ವದೇಶಿ ಚಿಂತನೆಗಳೊಂದಿಗೆ ಪರಿವರ್ತನೆಯ ಭಾರತ ಎದ್ದು ನಿಲ್ಲುತ್ತಿದೆ ಎಂದು ತಿಳಿಸಿದರು. Advertisement Advertisement ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ದೇಶಕ್ಕೆ ಉತ್ತಮ ನಾಯಕತ್ವ ಸಿಕ್ಕಿದ್ದು ಜಗತ್ತಿನ ಶಕ್ತಿಶಾಲಿ ದೇಶವಾಗಿ ಭಾರತ ಹೊರಹೊಮ್ಮುತ್ತಿದೆ ಎಂದು ತಿಳಿಸಿದರು.ಬಿಕೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಾಜಿ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ. ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ…
ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ Advertisement ಬಂಟ್ವಾಳ: ಸರಕಾರಿ ಪ್ರೌಢಶಾಲೆ ಸುರಿಬೈಲ್ನಲ್ಲಿ ನಡೆದ ಮಂಚಿವಲಯ ಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ತಂಡವು ಪ್ರಥಮ ಸ್ಥಾನ ಪಡೆದು ಬಂಟ್ಟಾಳ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತದೆ. ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ತಂಡವನ್ನು ನಿರಂತರ ಶ್ರಮದಿಂದ ತರಬೇತುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ರಫೀಕ್, ತಂಡದ ವ್ಯವಸ್ಥಾಪಕಿ ಭಾರತಿ ಕೈರಂಗಳ್, ಮುಖ್ಯ ಶಿಕ್ಷಕಿ ಲತಾ, ಸಹಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ, ತಂಡದ ನಾಯಕಿ ಶಿಫಾನ ಉಪಸ್ಥಿತರಿದ್ದರು. Advertisement Advertisement
ಶ್ರೀ ಗೋಪಾಲಕೃಷ್ಣ ಸೇವಾಸಂಘ ಕಟ್ಟತ್ತಿಲ ಮಠ ಇದರ ಅಧ್ಯಕ್ಷರಾಗಿ ಹರೀಶ್ ಜೋಗಿ ಆಯ್ಕೆ Advertisement ಬಂಟ್ವಾಳ: ಕಟ್ಟತ್ತಿಲ ಗೋಪಾಲಕೃಷ್ಣ ಮಠ, ಸಾಲೆತ್ತೂರು ಇಲ್ಲಿನ ಶ್ರೀ ಗೋಪಾಲಕೃಷ್ಣ ಸೇವಾಸಂಘ ಕಟ್ಟತ್ತಿಲ ಮಠ ಇದರ ಅಧ್ಯಕ್ಷರಾಗಿ ಹರೀಶ್ ಜೋಗಿ ಕಟ್ಟತ್ತಿಲ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಿತ್ಯಾನಂದ ಕಟ್ಟತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಬಂಗೇರ ತೋಯಿಲಚ್ಚಿಲ್, ಕೋಶಾಧಿಕಾರಿಯಾಗಿ ಉಮೇಶ್ ನಾಯ್ಕ ಕಟ್ಟತ್ತಿಲ ಮಠ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ನಾಯ್ಕ ಕಟ್ಟತ್ತಿಲ ಮಠ ಆಯ್ಕೆಗೊಂಡರು. Advertisement
ಬಂಟ್ವಾಳ:ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಬಿ.ಸಿ ರೊಡ್ ಸಿಟಿ ಇದರ ಸಹಯೋಗದೊಂದಿಗೆ ಭಾರತಾಂಬೆಗೆ ನಮನ ಎಂಬ ಪರಿಕಲ್ಪನೆಯಲ್ಲಿಸ್ವಾತಂತ್ರ್ಯ ದಿನಾಚರಣೆಯನ್ನು ಆಚರಸಲಾಯಿತು. Advertisement Advertisement ಯುವ ವೇದಿಕೆಯ ಗೌರವ ಸಲಹೆಗಾರ ಟಿ. ಶೇಷಪ್ಪ ಮೂಲ್ಯ ಧ್ವಜಾರೋಹಣಗೈದರು.ಮುಖ್ಯ ಅತಿಥಿಗಳಾಗಿ ಸುಕುಮಾರ್ ಬಂಟ್ವಾಳ, ಸತೀಶ್ ಕುಮಾರ್,ಸಂತೋಷ್ ಕುಮಾರ್ ಮರ್ತಾಜೆ, ಸುಧೀರ್ ಶೆಟ್ಟಿ,ಮಾಧವ ಬಿ.ಸಿ.ರೋಡ್, ಜನಾರ್ದನ ಚಂಡ್ತಿಮಾರ್,ವಿಠಲ ಪಲ್ಲಿಕಂಡ,ವಸಂತ ಜಕ್ರಿಬೆಟ್ಟು,ಪುಷ್ಪವತಿ ಟೀಚರ್, ಮೇಲ್ವಿಚಾರಕಿ ಶಾಲಿನಿ, ಒಡ್ರಿನ್ ಭಾಗವಹಿಸಿದ್ದರು..ಪ್ರಮುಖರಾದ ಪುನೀತ್ ಕಾಮಾಜೆ,ಕಾರ್ತಿಕ್ ಮಯ್ಯರಬೈಲು,ರಾಮ ಪಿಟ್ಟರ್,ರಾಮಚಂದ್ರ ದೈಪಲ,ಕಿಶೋರ್ ಬಂಗೇರ,ಸಂತೋಷ್ ಮಯ್ಯರಬೈಲು,ಭಾಸ್ಕರ ಪಿಟ್ಟರ್,ದಿನೇಶ್ ವರಕಾಯಿ ಶ್ರೀಕಾಂತ್ ,ಮನೋಜ್,ಅಶೋಕ್ ಭಂಡಾರಿಬೆಟ್ಟು ಸ್ಥಳೀಯರಾದ ಸದಾನಂದ ನಾಯಕ್,ಪ್ರಮೋದ್,ಪ್ರಕಾಶ್ ಸಪಲ್ಯ ಹಾಗೂ ಮಕ್ಕಳ ಪೋಷಕರು ಹಾಜರಿದ್ದರು. ರೇವತಿ ವಂದಿಸಿದರು, ಯುವ ವೇದಿಕೆಯ ಕಾರ್ಯದರ್ಶಿ ನಿತೀಶ್ ಕುಲಾಲ್ ಪಲ್ಲಿಕಂಡ ಕಾರ್ಯಕ್ರಮ ನಿರೂಪಿಸಿದರು.
ನೂರುಲ್ ಹುದಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ Advertisement ಕಾರ್ಕಳ: ತಾಲೂಕಿನ ಬಜಗೋಳಿಯ ನೂರುಲ್ ಹುದ ಮಸೀದಿಯಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಧ್ವಜಾರೋಹಣ ಜಮಾಅತ್ ಅಧ್ಯಕ್ಷ ಪುತ್ತಾಕ ನೆರವೇರಿಸಿದರು. ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಹುಮೈದಿ ಸ್ವಾತಂತ್ರ್ರೋತ್ಸವದ ಬಗ್ಗೆ ಮಾತನಾಡಿದರು .ಕಾರ್ಯಕ್ರಮದಲ್ಲಿ ನೆಲ್ಲಿಕಾರು ಮಸೀದಿಯ ಅಧ್ಯಕ್ಷ ಅಬ್ಧುರ್ರಹ್ಮಾನ್ ಮುಸ್ಲಿಯಾರ್ ದುಅ ನೆರವೇರಿಸಿದರು .ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಕಮೀಟಿಯ ಸದಸ್ಯರು ಹಾಗೂ ಜಮಾಅತ್ ಬಾಂಧವರು ಪಾಲ್ಗೊಂಡರು. Advertisement Advertisement