Author: admin
ಬಂಟ್ವಾಳ: ಬೈಂದೂರಿನ ಜೆಎನ್ಆರ್ ಕಲಾಮಂದಿರದಲ್ಲಿ ಭಾನುವಾರ ನಡೆದ ಜೆಸಿಐ ವಲಯ 15ರ ಲೇಡಿ ಜೇಸಿ ಮತ್ತು ಜೂನಿಯರ್ ಜೇಸಿ ಸಮ್ಮೇಳನದಲ್ಲಿ ವಲಯದ ಟಾಪ್ 10 ಲೇಡಿ ಜೇಸಿ ತಂಡಗಳ ಪೈಕಿ ಬಂಟ್ವಾಳ ಲೇಡಿ ಜೇಸಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಲಯ ವಿಭಾಗದಲ್ಲಿ 13 ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಟಾಪ್ 1 ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಲೇಡಿ ಜೇಸಿ ತಂಡಕ್ಕೆ ಫೆಮಿ ಸರ್ಚ್ ಪ್ರಶಸ್ತಿ, ಪ್ರಯಾಸ್ ಡೇ ಅವಾರ್ಡ್, ಪ್ರಾಗ್ನೆನ್ಸ್ ಆಫ್ ಲವ್ ಅವಾರ್ಡ್, ತಾಯಿ ಮತು ನಾನು ಪೊಟೋ ಪ್ರಶಸ್ತಿ, ಜೋಡಿ ನಂ. 1 ಪ್ರಶಸ್ತಿ, ಸೆರೋಸ್ ಡೇ ಪ್ರಶಸ್ತಿ, ಜೂನಿಯರ್ ಜೇಸಿ ವಿಭಾಗದಲ್ಲಿ ಜೆಜೆಸಿ ಸಿಕ್ಸರ್ ಅವಾರ್ಡ್, ದ್ವಿತೀಯ ರನ್ನರ್ ಅಪ್ ಅವಾರ್ಡ್, ಯುವ ಪುರಸ್ಕಾರ ಅವಾರ್ಡ್, ಜೆಸಿಐ ಘಟಕಕ್ಕೆ ಗೋಲ್ಡನ್ ಎಲ್ಓ ಪ್ರೆಸಿಡೆಂಟ್, ಸಿಲ್ವರ್ ಡೋನರ್ ಪ್ರೆಸಿಡೆಂಟ್ ಅವಾರ್ಡ್, ಚಾಂಪಿಯನ್ ಎಲ್ಓ ಅವಾರ್ಡ್ ಲಭಿಸಿದೆ. ಲೇಡಿ ಜೇಸಿ ಮತ್ತು ಜೂನಿಯರ್ ಜೇಸಿ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ…
ಬಂಟ್ವಾಳ: ರೋಟರಿ ಕ್ಲಬ್ ಆಫ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇದರ ನೂತನ ಅಧ್ಯಕ್ಷೆ ಗೀತಾ ಬಳ್ಳಾಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲೊರೆಟ್ಟೊ ಪದವಿನ ಗ್ರೀನ್ ಸಿಟಿಯಲ್ಲಿರುವ ರೋಟರಿ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷೆಯಾಗಿ ಗೀತಾ ಬಳ್ಳಾಲ್, ಕಾರ್ಯದರ್ಶಿಯಾಗಿ ರೂಪವಾಣಿ ಶೆಟ್ಟಿ, ಕೋಶಾಧಿಕಾರಿಯಾಗಿ ರಮೇಶ್ ನಾಯಕ್ ರಾಯಿ ಸಹಿತ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ಪೂರ್ವ ಗವರ್ನರ್ ಡಾ.ಕೆ.ರವಿ ಅಪ್ಪಾಜಿ ಮಾತನಾಡಿ ಇಲ್ಲಿನ ಸದಸ್ಯರ ಟೀಮ್ ಸ್ಪಿರಿಟ್ ಉತ್ತಮವಾಗಿದೆ. ಪ್ರತಿ ಕ್ಲಬ್ ನಲ್ಲೂ ತಂಡ ಸ್ಪೂರ್ತಿ ಅತೀ ಮುಖ್ಯ. ಅದಕ್ಕಾಗಿ ಒಂದು ಉತ್ತಮ ವಾತವರಣವನ್ನು ಕ್ಲಬ್ ನಲ್ಲಿ ನಿರ್ಮಿಸಬೇಕು. ನಾವು ಏನೇ ಕಾರ್ಯಕ್ರಮ ಮಾಡುವುದಿದ್ದರೂ ಜನರಿಗೆ ಅದರಿಂದ ಉಪಯೋಗ ಆಗಬೇಕು ಎಂದರು. ಸಹಾಯಕ ಗವರ್ನರ ಶೃತಿ ಮಾಡ್ತ ಮಾತನಾಡಿ ವಿಜಯ ಫೆರ್ನಾಂಡೀಸ್ ಅವರ ಅವಧಿಯಲ್ಲಿ ಉತ್ತಮ ಕಾರ್ಯಗಳು ನಡೆದು ಡೈಮಂಡ್ ಪ್ಲಸ್ ಪ್ರಶಸ್ತಿ ಬಂದಿದೆ. ಗೀತಾ ಬಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ಈ ಕ್ಲಬ್ ಅತ್ಯುತ್ತಮ ಸ್ಥಾನಕ್ಕೆ ತಲುಪಲಿದೆ…
ಬಂಟ್ವಾಳ: ಒಂದು ಸಾವಿರ ವರ್ಷದ ಬಳಿಕ ಪ್ರಕಟಗೊಂಡಿರುವ ಶ್ರೀ ಸೋಮನಾಥ ಜ್ಯೋತಿರ್ಲಿಂಗವು ಜುಲೈ 14 ರಂದು ಮಂಗಳವಾರ ಬಂಟ್ವಾಳ ತಾಲೂಕಿಗೆ ಆಗಮಿಸಲಿದ್ದು ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಮಧುಕರ ಸಭಾಭವನದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವೆರೆಗೆ ಹಾಗೂ ಮಧ್ಯಾಹ್ನ 3.30ರಿಂದ ಸಂಜೆ 7.30ರವೆರೆಗೆ ಭಕ್ತಾದಿಗಳ ದಿವ್ಯವದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭ ರುದ್ರಪೂಜೆ, ಸತ್ಸಂಗ ಹಾಗೂ ದೇವರ ದರ್ಶನ ಇರಲಿದೆ ಎಂದು ಆರ್ಟ್ ಆಪ್ ಲಿವಿಂಗ್ ಬಂಟ್ಬಾಳ ಘಟಕದ ಶಿಕ್ಷಕರಾದ ಮುರಳೀಕೃಷ್ಣ ಸೋಮಯಾಜಿ, ಶಿವಶಂಕರ್ ರಾವ್ ಹಾಗೂ ರಂಜಿತ್ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏನಿದರ ವಿಶೇಷತೆ? ಸೋಮನಾಥ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಿರುವ ಸುಮಾರು ಮೂರು ಅಡಿ ಎತ್ತರದ ಶಿವಲಿಂಗವು ಅತ್ಯಂತ ವಿಶೇಷವಾದ ಗುಣವನ್ನು ಹೊಂದಿದ್ದು ಗುರುತ್ವಾಕರ್ಷಣೆಯ ಶಕ್ತಿಯನ್ನು ಮೀರಿ, ನೆಲದಿಂದ ಎರಡು ಅಡಿ ಮೇಲೆ ತೇಲಾಡುತ್ತಿತ್ತು. ವಿಜ್ಞಾನಿಗಳ ಪ್ರಕಾರ ಈ ಲಿಂಗದ ಶಿಲೆಯಲ್ಲಿದ್ದ ಕಾಂತೀಯ ಗುಣದಿಂದಾಗಿ ಇದು ಸಾಧ್ಯವಾಗಿರುವುದು. ಸುಮಾರು ಒಂದು ಸಾವಿರ ವರ್ಷಗಳಿಗೂ ಹಿಂದೆ ಈ ಸೋಮನಾಥ…
ಬಂಟ್ವಾಳ: ಸಂಕಷ್ಟದ ಕಾಲದಲ್ಲಿ ಕ್ಷಯ ರೋಗಿಗಳ ಕೈ ಹಿಡಿಯುವ ಕಾರ್ಯವನ್ನು ಕೇಂದ್ರ ಸರಕಾರದ ಮಾಡುತ್ತಿದ್ದು ಸೇವಾಂಜಲಿ ಸಂಸ್ಥೆ ಅದನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಸೇವಾಂಜಲಿಯ ಈ ಸೇವಾ ಕಾರ್ಯ ಸದ್ಬಳಕೆಯಾಗಬೇಕು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಕ್ಷಯ ರೋಗಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಕೈಕಂಬದ ಸೂರ್ಯವಂಶ ಫೌಂಡೇಶನ್ ಅಧ್ಯಕ್ಷ ಡಾ. ಗೋವರ್ಧನ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಉಳ್ಳವರು ಬಡವರಿಗೆ ನೀಡಿದಾಗ ಬಡತನ ನಿರ್ಮೂಲನವಾಗಲು ಸಾಧ್ಯವಿದೆ. ಅಂತಹ ಕಾರ್ಯವನ್ನು ಕೃಷ್ಣಕುಮಾರ್ ಪೂಂಜ ಅವರು ಮಾಡುತ್ತಿದ್ದಾರೆ ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 46 ತಿಂಗಳುಗಳಿಂದ ಸೇವಾಂಜಲಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸುತ್ತಿದ್ದು ಈವರೆಗೆ ಒಟ್ಟು 16 ಲಕ್ಷ ರೂ.…
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ನೂತನ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಯಾಜಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. 2026-27 ಸಾಲಿನ ಅಧ್ಯಕ್ಷರಾಗಿ ರವಿಚಂದ್ರ ಬಂಟ್ವಾಳ, ಕಾರ್ಯದರ್ಶಿಯಾಗಿ ರವಿರಾಜ್ ಶೆಟ್ಟಿ, ಕೋಶಾಧಿಕಾರಿಯಾಗಿ ಐತಪ್ಪ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಪೂರ್ವ ರಾಜ್ಯಪಾಲ ವಿಕ್ರಂ ದತ್ತ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿ ಎಲ್ಲಾ ರೋಟರಿ ಸದಸ್ಯರು ಜೊತೆಯಾಗಿ ಕಾರ್ಯನಿರ್ವಹಿಸಿದಾಗ ರೋಟರಿ ಸಂಸ್ಥೆ ಔನತ್ಯಕ್ಕೆ ಹೋಗಲು ಸಾಧ್ಯವಿದೆ.ಮುಂದಿನ ವರ್ಷ ರೋಟರಿ ಕ್ಲಬ್ ಬಂಟ್ವಾಳಕ್ಕೆ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಹಾಯಕ ಗವರ್ನರ್ ಶಶಿಧರ್ ಡೋಂಗ್ರೆ ಕ್ಲಬ್ ಬುಲೆಟಿನ್ ರೋಟ್ವಾಲ್ ಬಿಡುಗಡೆಗೊಳಿಸಿ ಮಾತನಾಡಿ ನೂತನ ಅಧ್ಯಕ್ಷರ ಅವಧಿಯ ವರ್ಷ ಸುಗಮವಾಗಿ ನಡೆಯಲಿ, ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.ಝೋನಲ್ ಲೆಪ್ಟಿನೆಂಟ್ ಬೇಬಿ ಕುಂದರ್ ಮಾತನಾಡಿ ಪ್ರಶಸ್ತಿಗಾಗಿ ಕೆಲಸ ಮಾಡುವುದು ಬೇಡ ಕೆಲಸಕ್ಕಾಗಿ ಪ್ರಶಸ್ತಿಗಳು ಬರಲಿ ಎಂದರು. ನೂತನ…
ಬಂಟ್ವಾಳ: ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಪ್ರಾರಂಭಿಸಲಾಯಿತು . ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 130 ರಲ್ಲಿಯ ಬಿ.ಮೂಡ ಗ್ರಾಮದ ಬಸ್ತಿಪಡ್ಪು ಚೆನ್ನಮ್ಮ ಕುಟೀರ ನಿವಾಸದಲ್ಲಿ ವಾಸ್ತವ್ಯ ಇರುವ ಕೇಂದ್ರ ಸರಕಾರದ ಮಾಜಿ ಹಣಕಾಸು ಸಚಿವ ಬಿ.ಜನಾರ್ಧನ ಪೂಜಾರಿಯವರಿಗೆ ಮೊದಲನೇ ಎನಿಮೇಷನ್ ಫಾರ್ಮ್ ವಿತರಿಸಲಾಯಿತು. ಈ ಸಮೀಕ್ಷೆ ಯ ಬಗ್ಗೆ ಜನಾರ್ದನ ಪೂಜಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಬಂಟ್ವಾಳ ತಹಶೀಲ್ದಾರರಾದ ಮಂಜುನಾಥ್, ಚುನಾವಣೆ ಶಾಖೆಯ ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಬಿ ಎಲ್ ಎ ಸುನೀಲ್ ಕುಮಾರ್ ಭಂಡಾರಿಬೆಟ್ಟು , ಮೇಲ್ವಿಚಾರಕಿ, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಮತಗಟ್ಟೆ ಅಧಿಕಾರಿ ದಾಮೋದರ ಪಡಿಯಾರ್, ಕಚೇರಿ ಸಿಬ್ಬಂದಿ ಸದಾಶಿವ ಕೈಕಂಬ, ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.
ಬಂಟ್ವಾಳ: ಇತ್ತೀಚಿಗೆ ನಿಧನರಾದ ಕುರ್ನಾಡು ಮಿತ್ತಕೋಡಿ ನಿವಾಸಿ ಭೋಜ ಬಿ ಯವರ ಶ್ರದ್ದಾಂಜಲಿ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ , ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾರಾಸಂ ಬಂಟ್ವಾಳ ಮತ್ತು ಮುಡಿಪು ಕುಲಾಲ ಸಂಘ ಗಳ ಸಂಯೋಜನೆಯೊಂದಿಗೆ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು. ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ರಮೇಶ್ ಸಂಚಯಗಿರಿ, ಹಿರಿಯ ನಾಗರಿಕರ ಸಂಘದ ಸೇಸಪ್ಪ ಮಾಸ್ಟರ್ , ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸಂಘದ ಮಾಜಿ ಅಧ್ಯಕ್ಷ ಮಚೇಂದ್ರ ಸಾಲಿಯಾನ್ , ಸಂಘದ ಮಾಜಿ ಕಾರ್ಯದರ್ಶಿ ಲಕ್ಷಣ್ ಅಗ್ರಬೈಲ್ , ಮಾಜಿ ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ನುಡಿ ನಮನ ಸಲ್ಲಿಸಿದರು. ನೂರಾರು ಹಿತೈಷಿಗಳು ಕಾರ್ಯಕ್ರಮದಲ್ಲಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಕೇಶವ ಮಾಸ್ಟರ್ ನಿರೂಪಿಸಿ, ರಾರಾಸಂ ಫೌಂಡೇಷನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ವಂದಿಸಿದರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಹಿರಿಯ…
ಬಂಟ್ವಾಳ: ಫರಂಗಿಪೇಟೆ ಬಳಿಯ ಕುಂಪಣಮಜಲುವಿನ ಶ್ರೀ ದುರ್ಗಾಪರಮೇಶ್ವರಿ ವಾರಾಹಿ ಅಮ್ಮನವರ ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ನಡೆಯುತ್ತಿರುವ ಸಂಧ್ಯಾ ಭಜನೆಯ 108 ನೇ ವಿಶೇಷ ಸಂಧ್ಯಾ ಭಜನೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಭಾಗವಹಿಸಿದರು. ಅಂಬುರುಹ ಮಕ್ಕಳ ಕುಣಿತ ಭಜನಾ ತಂಡ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಹವ್ಯಾಸಿ ಭಜಕ ವೃಂದ ಅಂಬ್ಲ ಮೊಗರು ಇವರಿಂದ ಭಜನೆ ನಡೆಯಿತು. ಕುಮಾರ್ ಮಲೆಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.
ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ವತಿಯಿಂದ ಜಿಲ್ಲಾ ಮಟ್ಟದ ಎ ಐ ಕಾರ್ಯಾಗಾರ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ವಲಯಧ್ಯಕ್ಷ ರಾಜೇಂದ್ರ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ ಕೆ ಪಿ ಎ ಜಿಲ್ಲಾ ಧ್ಯಕ್ಷ ನವೀನ್ ರೈ ಪಂಜಲ ಉದ್ಘಾಟಿಸಿದರು. ವೇದಿಕೆ ಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಯನ್. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಗೌರವಾಧ್ಯಕ್ಷ ಕಿಶೋರ್, ಛಾಯಾ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿ ಕಲ್ಪನೆ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ವಂದಿಸಿದರು. ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಪನ್ಮೂಲ ವ್ಯಕ್ತಿ ಸಂದೀಪ್ ಶ್ಯಾಡೋ ರವರು ಸದಸ್ಯ ರಿಗೆ ಎಐ ಕಾರ್ಯಾಗಾರ ನಡೆಸಿ ಕೊಟ್ಟರು.
ಬಂಟ್ವಾಳ: ಮದ್ಯ ವ್ಯಸನಿಗಳ ಮನ ಪರಿವರ್ತನೆಯ ಕಾರ್ಯ ಮದ್ಯವರ್ಜನ ಶಿಬಿರದ ಮೂಲಕ ಆಗುತ್ತಿದೆ. ಸಮಾಜಮುಖಿಯಾಗಿ ಸುಧಾರಣೆಯಾಗಲು ಇದು ಮೊದಲ ಹೆಜ್ಜೆ ಎಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಪಾಂಗಣ್ಣಾಯ ಹೇಳಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು ಇದರ ಆಶ್ರಯದಲ್ಲಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 8 ದಿನಗಳ ಕಾಲ ವಾಮದಪದವು ಬಸ್ತಿಕೋಡಿಯ ಪದ್ಮಾವತಿ ಸಭಾಭವನದಲ್ಲಿ ನಡೆಯಲಿರುವ 2076ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಿಬಿರದ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ, ಉದ್ಯಮಿ ಹರೀಂದ್ರ ಪೈ ನೈನಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ವ್ಯಸನ ಮುಕ್ತ ಜೀವನ ನಡೆಸುವ ನಿಟ್ಟಿನಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ದುಶ್ಚಟವನ್ನು ದೂರ ಮಾಡಿ ಉತ್ತಮ ಜೀವನ ನಡೆಸಲು ಈ ಶಿಬಿರ ಪ್ರೇರಣೆಯಾಗಲಿದೆ ಎಂದರು. ಬಂಟ್ವಾಳ ತಾಲೂಕು ಅಖಿಲ ಕರ್ನಾಟಕ…








