Author: admin
https://youtu.be/wV74isvO_iI ನಾವೂರಿನ ಕೂಡಿಬೈಲುವಿನಲ್ಲಿ ಬಂಟ್ವಾಳ ಕಂಬಳ (ಮೂಡೂರು-ಪಡೂರು)ಕ್ಕೆ ಅದ್ಧೂರಿ ಚಾಲನೆ ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಕೂಡಿಬೈಲುವಿಲ್ಲಿ ಬಂಟ್ವಾಳ ಕಂಬಳ ಹೆಸರಿನಲ್ಲಿ ನಡೆಯುತ್ತಿರುವ 12ನೇ ವರ್ಷದ ಮೂಡೂರು ಪಡೂರು ಜೊಡುಕರೆ ಬಯಲು ಕಂಬಳಕ್ಕೆ ಮಾಜಿ ಸಚಿವ, ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ಶನಿವಾರ ಬೆಳಿಗ್ಗೆ ಅದ್ದೂರಿಯ ಚಾಲನೆ ನೀಡಿದರು.ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಸಾಮಾಜಿಕ ಕಾರ್ಯಕ್ರಮ ಎಲ್ಲಾ ವರ್ಗದ ಜನರನ್ನು ಕೈ ಬೀಸಿ ಕರೆಯುವಂತಿರಬೇಕು, ಆ ನಿಟ್ಟಿನಲ್ಲಿ ಮೂಡುರು ಪಡೂರು ಕಂಬಳ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ನಡೆಯುತ್ತಿರುವುದು ಗಮನಾರ್ಹ. ಕೂಡಿಬೈಲಿನಲ್ಲಿ ಕೂಡಿ ಬಾಳುವ ಎನ್ನುವ ಸಂದೇಶವನ್ನು ನೀಡುವ ಮೂಲಕ ಈ ಕಂಬಳ ನಡೆಯುತ್ತಿದೆ ಎಂದರು. ಅಲ್ಲಿಪಾದೆ ಸಂತ ಅಂಥೋನಿ ಚರ್ಚ್ ಧರ್ಮಗುರು ವಂದನೀಯ ಫೆಡ್ರಿಕ್ ಮೊಂತೆರೋ ಅವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ ಜಾತಿ ಧರ್ಮದ ಚೌಕಟ್ಟನ್ನು ಮೀರಿ ಎಲ್ಲಾ ಸಮುದಾಯದ ಜನರು ಬರುವ ಕಂಬಳ ಮೂಡುರು ಪಡೂರು ಕಂಬಳ. ಕಂಬಳ ಸಮಿತಿ…
ಬಂಟ್ವಾಳ: ಇಚ್ಚಾಶಕ್ತಿಯ ಮೂಲಕ ಕೆಲಸ ಮಾಡಿದ್ದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಜನರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ. ರಾಜಕೀಯವಾಗಿ ಯಾರಲ್ಲೂ ವೈಯಕ್ತಿಕ ದ್ವೇಷವಿಲ್ಲ, ಪಕ್ಷದ ತತ್ವ ಸಿದ್ದಾಂತದ ಮೂಲಕ ರಾಜಕೀಯ ಮಾಡಿದ್ದು ಈ ಹಿಂದಿಗಿಂತ ನಾಲ್ಕು ಪಾಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಈಗ ಕ್ಷೇತ್ರದಲ್ಲಿ ಆಗಿದೆ ಎಂದು ಬಂಟ್ವಾಳ ಆಸಕ ರಾಜೇಶ್ ನಾಯ್ಕ್ ಹೇಳಿದರು. ಪಿತ್ತಿಲು ಅಶ್ವತ್ಥ ಕಟ್ಟೆ ಎಂಬಲ್ಲಿ ನಡೆದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದ ಸುಮಾರಿ 10 ಕೋಟಿ ರೂಪಾಯಿ ಅನುದಾನದ ವಿವಿಧ ರಸ್ತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಲೋಕರ್ಪಾಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾಂಗ್ರೆಸ್ ನೀರಿನಿಂದ ಮೇಲೆತ್ತಿದ್ದ ಮೀನಿನಂತೆ ಅಧಿಕಾರವಿಲ್ಲದೆ ಒದ್ದಾಡುತ್ತಿದೆ. ಇತ್ತೀಚಿನ ಸರ್ವೆಯಂತೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾಯಛ ನಿರಂತರವಾದುದು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳು ಆಗಲಿದೆ ಎಂದು ತಿಳಿಸಿದರು. ಹೆಚ್ಚಿನ ಬೇಡಿಕೆಯ…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರಿಂದ 121ನೇ ರಕ್ತದಾನ ಶಿಬಿರ ಮಾ.5ರಂದು ಭಾನುವಾರ ಬೆಳಿಗ್ಗೆ 9 ರಿಂದ 1ರವರೆಗೆ ಫರಂಗಿಪೇಟೆಯ ಸೇವಂಜಲಿ ಸಭಾಗೃಹದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ಸಿಂಗ್ ಥೋರಾಟ್ ಭಾಗವಹಿಸಲಿದ್ದಾರೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ತಿಳಿಸಿದ್ದಾರೆ
ಮೂಡೂರು – ಪಡೂರು ಜೋಡಕರೆ ಬಯಲು ಕಂಬಳ ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ಮೂಡೂರು – ಪಡೂರು ಜೋಡಕರೆ ಬಯಲು ಕಂಬಳ ಕಳೆದ ವರ್ಷದಿಂದ ಬಂಟ್ವಾಳ ಕಂಬಳವಾಗಿ ಪುನಾರಂಭಗೊಂಡಿದ್ದು ಮಾಜಿ ಸಚಿವ ಬಿ. ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಅವರ ಕಾರ್ಯಧ್ಯಕ್ಷತೆಯಲ್ಲಿ ಪದ್ಮಶೇಖರ್ ಜೈನ್ ಅವರ ಸಂಚಾಲಕತ್ವದಲ್ಲಿ 12ನೇ ವರ್ಷದ ಹೊನಲು ಬೆಳಕಿನ ಮೂಡೂರು- ಪಡೂರು ಜೋಡುಕರೆ ಬಯಲು ಕಂಬಳ ನಾಳೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲುವಿನಲ್ಲಿ ನಡೆಯಲಿದೆ. ಕಂಬಳಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು ಬೆಳಿಗ್ಗೆ ಗಂಟೆ 8.45ಕ್ಕೆ ಕಂಬಳ ಉದ್ಘಾಟನೆಗೊಳ್ಳಲಿದೆ. ಕೂಟದಲ್ಲಿ ಪೀಠಾಧಿಪತಿಗಳು, ಧರ್ಮಗುರುಗಳು, ರಾಜಕೀಯ ನಾಯಕರು, ಸಾಮಾಜಿಕ ಕ್ಷೇತ್ರದ ಸಾಧಕರು, ಭಾಗವಹಿಸಲಿದ್ದಾರೆ. ಸಂಜೆ 7.೦೦ ರಿಂದ ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ವಿಧಾನ ಪರಿಷತ್…
ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ರಾಮಲ್ ಕಟ್ಟೆ ನಿವಾಸಿ ಮೈಮುನಾ ಎಂಬವರ ಮನೆಗೆ ಯಾರು ಇಲ್ಲದ ವೇಳೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ವಾಚುಗಳು ಹಾಗೂ ನಗದು ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಮೈಮೂನಾ ಅವರು ಫೆ.27 ರಂದು ತನ್ನ ತಂಗಿ ಮಗಳ ಹುಟ್ಟುಹಬ್ಬದ ನಿಮಿತ್ತ ಮದ್ಯರಾತ್ರಿ 12.30 ಗಂಟೆಗೆ ಉಪ್ಪಿನಂಗಡಿ ಮೂರುಗೋಳಿಗೆ ಮನೆಯವರೊಂದಿಗೆ ಹೋಗಿ ಅಲ್ಲೇ ಉಳಿದುಕೊಂಡಿದ್ದು, ಮಾ.1 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗವನ್ನು ತೆರೆಯಲು ನೋಡಿದಾಗ ಬಾಗಿಲಿಗೆ ಅಳವಡಿಸಿದ ಲಾಕ್ ಮುರಿದಿದ್ದು ಕಂಡು ಬಂದಿದ್ದು ಬಾಗಿಲನ್ನು ದೂಡಿದಾಗ ಬಾಗಿಲು ಒಳಗೆ ಹೋಗಿದೆ. ಇದರಿಂದ ಗಾಬರಿಗೊಂಡು ಮೈಮೂನಾ ವಿಷಯವನ್ನು ಗಂಡ ಮತ್ತು ತಾಯಿಗೆ ಹೇಳಿ ಎಲ್ಲರೂ ಒಟ್ಟಿಗೆ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಗೆ ಮಲಗುವ ಕೋಣೆಯಲ್ಲಿದ್ದ 4 ಗೋದ್ರೇಜ್ ಕಪಾಟಿನ ಬೀಗವನ್ನು ತೆರೆದು ಅದರೊಳಗಿದ್ದ ಬಟ್ಟೆ ಬರೆಗಳು ಇತ್ಯಾದಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಮಂಚದ ಮೇಲೆ ಬಿಸಾಡಿದ ಸ್ಥಿತಿಯಲ್ಲಿತ್ತು.…
ಬಂಟ್ವಾಳ : ವೀರಕಂಬ ಗ್ರಾಮದ ಬಳ್ಳಮಲೆ ರಕ್ಷಿತಾರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿ ಅರಣ್ಯವಿಡಿ ವ್ಯಾಪಿಸಿಕೊಂಡಿದೆ. ಬಂಟ್ವಾಳ ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಊರ ನಾಗರಿಕರು ಬೆಂಕಿನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. https://youtu.be/cfY0RaXrVLI ಬಲ್ಲಮಲೆ ರಕ್ಷಿತಾರಣ್ಯದಲ್ಲಿ ಬೆಂಕಿ Remembrance Space for paid advertisement
ಅಡೆಪಿಲ ವಾರ್ಷಿಕ ನೇಮೋತ್ಸವದ ಗೊನೆ ಮುಹೂರ್ತ ಬಂಟ್ವಾಳ: ಮಾ. 9,10 ಮತ್ತು 11 ರಂದು ನಡೆಯಲಿರುವ ಅಡೆಪಿಲ ಅಲಂಗಾರ ಮಾಡ -ಶ್ರೀ ಧರ್ಮರಸು ಚಿತ್ತ ದೈವದ ಮೂಲಸ್ಥಾನ ಹಾಗೂ ದಿಂಡಿಕೆರೆ ಜೋಡುಸ್ಥಾನ ಶ್ರೀ ವೈದ್ಯನಾಥ ದೈವದ ಮೂಲಸ್ಥಾನ ದ ನೇಮೋತ್ಸವಕ್ಕೆ ಗುರುವಾರ ಗೊನೆ ಮುಹೂರ್ತ ಮತ್ತು ಕೋರಿಗುಂಟ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಒಂದನೇ ಗುತ್ತಿನ ಯಜಮಾನರಾದ ವಿಶ್ವನಾಥ ಇರಂತಬೆಟ್ಟು , ಬಾವಗುತ್ತಿನ ಮನೋಹರ, ಬರ್ಕೆ ಗುತ್ತಿನ ಮೋನಪ್ಪ, ಕೊಲ್ಲೂರು ಗುತ್ತಿನ ಕ್ರಷ್ಣಪ್ಪ, ದೈವದ ಪ್ರಧಾನ ಅರ್ಚಕರಾದ ಜಗನ್ನಾಥ ಪೂಜಾರಿ,ಶೇಖರ ಕೋಟ್ಯಾನ್ ಸೀತರಾಮ ಪೂಜಾರಿ, ಅಡೆಪಿಲ ಭಂಡಾರದ ಮನೆಯ ಡಾ.ನವೀನ್ ಬಪ್ಪಳಿಗೆ ಸ್ಥಾನದ ಮನೆಯ ಸಂಜೀವ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು. Remembrance Space for paid advertisement
ಬಂಟ್ವಾಳ: ಆರಂಭದ ದಿನಗಳಲ್ಲಿ ನೆರೆ ಸಮಸ್ಯೆ ಮತ್ತು ಕೋವಿಡ್ ನಿಂದ ತತ್ತಿರಿಸಿದರೂ ಕಳೆದ ಎರಡು ವರ್ಷದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ್ಯಂತ ಸಾಕಷ್ಡು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಶಾಸಕನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ನನ್ನ ಕರ್ತವ್ಯ. ಈಗ ಆಗಿರುವ ಅಭಿವೃದ್ಧಿ ಕಾರ್ಯದಲ್ಲಿ ತೃಪ್ತಿ ಇದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಕರ್ಪೆ ಗ್ರಾಮದಲ್ಲಿ 8.34 ಕೋಟಿ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕಕರ್ಪೆ ಗುತ್ತಿಗೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಈಗ ಆಗಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು. ಕಳೆದ ನಾಲ್ಕು ವರ್ಷ ಹತ್ತು ತಿಂಗಳಿನಲ್ಲಿ ನನ್ನ ಕ್ಷೇತ್ರ ಗಲಭೆ, ದೊಂಬಿಗಳಿಲ್ಲದೆ ಶಾಂತಿ, ಅಭಿವೃದ್ಧಿಯ ಕ್ಷೇತ್ರವಾಗಿ ಪರಿವರ್ತಿತವಾರುವುದು ಖುಷಿ ನೀಡಿದೆ ಎಂದರು. ವೇದಿಕೆಯಲ್ಲಿ ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ ಅಳಕ್ಕೆ, ಉಪಾಧ್ಯಕ್ಷೆ ವಿಮಾಲ…
ತಲೆ ಮರೆಸಿಕೊಂಡಿದ್ದ ಆರೋಪಿ ಮಣಿ ಅಲಿಯಾಸ್ ಮಣಿಕಂಠ (41) ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಆರೋಪಿ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಮೂಲತಃ ಬೆಳ್ತಂಗಡಿ ತಾಲೂಕು ಉಜಿರೆ ಟಿ ಕ್ರಾಸ್ ಹಳೆಪೇಟೆ, ಪ್ರಸ್ತುತ ಕೇರಳ ತಾಲೂಕಿನ ಕುಂಬ್ಲೆ ನೀರ್ಜಾಲ್ ನಿವಾಸಿ ನರಸಿಂಹ ಎಂಬವರ ಪುತ್ರ ಮಣಿ ಅಲಿಯಾಸ್ ಮಣಿಕಂಠ (41) ಎಂಬಾತನನ್ನು ಬುಧವಾರ ನಗರ ಪೊಲೀಸರು ಬಂಧಿಸಿದ್ದಾರೆ.ಠಾಣಾ ಸಿಬ್ಬಂದಿಗಳಾದ ಗಣೇಶ್, ರಾಜೇಶ್, ಪ್ರವೀಣ್ ಅವರ ತಂಡ ಮಾಹಿತಿ ಸಂಗ್ರಹಿಸಿ ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ಸಮೀಪದ ಶಿಬಾಜೆ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. Remembrance
ಬಂಟ್ವಾಳ: ಪಕ್ಷ ಅವಕಾಶ ನೀಡಿದರೆ ಈ ಬಾರಿ ಕೊನೆಯ ಸ್ಪರ್ಧೆ ಮಾಡುತ್ತೇನೆ. ಶಾಸಕನಾಗಿ ಆಯ್ಕೆಯಾದರೆ ಮುಂದಿನ ಐದು ವರ್ಷದಲ್ಲಿ ಅದ್ಭುತ ಕೆಲಸ ಮಾಡಿ ತೋರಿಸುತ್ತೇನೆ. ಅಧಿಕಾದಲ್ಲಿದ್ದಾಗ ಹೇಳಿದ್ದನ್ನೇ ಮಾಡಿದ್ದೇನೆ, ಮಾಡಿದ್ದನೇ ಹೇಳಿದ್ದೇನೆ. ನನ್ನ ಬಟ್ಟೆಯಷ್ಟೇ ಮನಸ್ಸು ಕೂಡ ಶುಭ್ರವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ನಾನು ಚುನಾವಣೆಯಲ್ಲಿ ಸ್ಪರ್ಧಿಸಲೆಂದು ಬಂಟ್ವಾಳಕ್ಕೆ ಬಂದವನಲ್ಲ. ಬಂಟ್ವಾಳ ತಾಲೂಕಿನಲ್ಲಿಯೇ ಬೆಳೆದವನು. ಪಕ್ಷದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ ಹಿನ್ನಲೆಯಲ್ಲಿ ನನಗೆ ಪಕ್ಷ ಅವಕಾಶ ನೀಡಿದಾಗ ಅವಕಾಶವನ್ನು ನಾನು ಸರಿಯಾಗಿ ಉಪಯೋಗ ಮಾಡಿದ್ದೇನೆ. ಕಳೆದ ಅವಧಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿದ್ದ ೫ ಸಾವಿರ ಕೋಟಿಗೂ ಮಿಕ್ಕಿದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು.ನಮ್ಮ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುತ್ತಿದೆ ಎನ್ನುವ ಆರೋಪ ನಮ್ಮ ಪಕ್ಷದ ಶಾಸಕರೇ ಮಾಡುತ್ತಿದ್ದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನ ಸೌಧ, ಕೆಎಸ್ಆರ್ಟಿಸಿ…