Author: admin
ಬಂಟ್ವಾಳ: ನದಿ ನೀರಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ. ಮೃತ ಬಾಲಕನನ್ನು ಕೂಡಿಬೈಲು ನಿವಾಸಿ ಪುಟ್ಟಣ್ಣ ನಾಯ್ಕ್ ಎಂಬವರ ಮಗ ಪ್ರಜ್ವಲ್ ನಾಯ್ಕ್ (13) ಎಂದು ಗುರುತಿಸಲಾಗಿದೆ.ಕೂಡಿಬೈಲು ಜಾತ್ರೆಯ ನಿಮಿತ್ತ ಪುಟ್ಟಣ್ಣ ನಾಯ್ಕ್ ಅವರ ಮನೆಗೆ ನೆಂಟರಿಷ್ಟರು ಬಂದಿದ್ದು ಕೆಲವು ಸ್ನೇಹಿತರೊಂದಿಗೆ ಮನೆ ಸಮೀಪದ ನೇತ್ರಾವತಿ ನದಿ ಬಳಿಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಪ್ರಜ್ವಲ್ ಕೂಡ ಅವರೊಂದಿಗೆ ತೆರಳಿದ್ದು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪುಟ್ಟಣ್ಣ ನಾಯ್ಕ್ ಅವರಿಗೆ ಇಬ್ಬರು ಮಕ್ಕಳಿದ್ದು ಪ್ರಜ್ವಲ್ ಬಂಟ್ವಾಳದ ಎಸ್ವಿಎಸ್ ದೇವಳ ಶಾಲೆಯಲ್ಲಿ ೮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಊರಿನ ಜಾತ್ರೆಯ ಪ್ರಯುಕ್ತ ಬುಧವಾರ ಶಾಲೆಗೆ ಬಂದಿರಲಿಲ್ಲ. ಆಕಸ್ಮಿಕ ದುರ್ಘಟನೆಯಿಂದ ಮನೆಯಲ್ಲಿ ದುಃಖದ ವಾತವರಣ ಕಂಡು ಬಂದಿದೆ. ಮೃತದೇಹವನ್ನು ನದಿಯಿಂದ ಮೇಲೆತ್ತಲಾಗಿದ್ದು ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಬಂಟ್ವಾಳ: ಅಯೋಧ್ಯೆಯ ನೂತನ ಮಂದಿರದಲ್ಲಿ ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ಇಡೀ ದೇಶವೇ ಸಂಭ್ರಮದಲ್ಲಿದ್ದರೆ,ಅಯೋಧ್ಯೆ ಕರಸೇವೆಯಲ್ಲಿ 2 ಬಾರಿ ಪಾಲ್ಗೊಂಡರೂ, ಪ್ರಸ್ತುತ ಅಯೋಧ್ಯೆ ನೂತನ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಸಾಧ್ಯವಾಗದ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರು ಇದರ ನೆನಪಿಗಾಗಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಮಧ್ಯದಲ್ಲಿ ಜ 21ರ ರಾತ್ರಿ 7ರ ಬಳಿಕ ಶ್ರೀ ಸತ್ಯನಾರಾಯಣ ಪೂಜಾ ವಿಧಿಯನ್ನು ನಡೆಸಲಿದ್ದಾರೆ. ನದಿನೀರಿನ ಮಧ್ಯೆ ತೆಪ್ಪದ ಮಾದರಿಯನ್ನು ರಚಿಸಿ ವಿದ್ಯುತ್ ಮತ್ತು ಹಣತೆ ಬೆಳಕಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವ ಪ್ರಭು ಅವರು ಇದಕ್ಕೆ ಬೇಕಾದ ಸಕಲ ಸಿದ್ದತೆಗಳು ನೇತ್ರಾವತಿಯಲ್ಲಿ ಭರದಿಂದ ಸಾಗುತ್ತಿದೆ.ಇಂತಹ ವಿಶೇಷ ಕಾರ್ಯಕ್ರಮದ ರೂವಾರಿಯಾಗಿರುವ ಗೋವಿಂದ ಪ್ರಭು ಅವರು ಪೂಜೆ ನಡೆಯುವ ಪಕ್ಕವೇ ನದಿಯಲ್ಲಿ ಭಕ್ತರ ಗಮನಸೆಳೆಯುವ ನಿಟ್ಟಿನಲ್ಲಿ ಶ್ರೀರಾಮನ ಹಾಗೂ ಅಂಜನೇಯನ ವಿಗ್ರಹಗಳನ್ನು ರಚಿಸಲಿದ್ದಾರೆ. ಪೂಜೆಯ ಬಳಿಕ…
ಬಂಟ್ವಾಳ: ಶ್ರೀಮತೀ ಲಕ್ಷ್ಮೀ ದೇವಿ ನರಸಿಂಹ ಪೈ ವಿದ್ಯಾಲಯ,ಪಾಣೆಮಂಗಳೂರು ಇಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನ ಇತ್ತೀಚೆಗೆ ನಡೆಯಿತು. ಚಿತ್ರಕಲಾ ಶಿಕ್ಷಕ ಯಶು ಸ್ನೇಹಗಿರಿ ಅವರ ನಿರ್ದೇಶನದಲ್ಲಿ ನಡೆದ ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ ಶಾರದಾ ಪ್ರೌಢ ಶಾಲೆಯ ಹಿರಿಯ ಕಲಾ ಶಿಕ್ಷಕಿ ಸುಮಿತ್ರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಎಸ್ ಎಲ್ ಎನ್ ಪಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್, ಶ್ರೀ ಶಾರದಾ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಭೋಜ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳ ನಾನಾ ರೀತಿಯ ಕಲಾ ಪ್ರಕಾರಗೊಳನ್ನೊಳಗೊಂಡ ಪ್ರದರ್ಶನದಲ್ಲಿ 400ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಗೊಂಡದ್ದು ವಿಶೇಷವಾಗಿತ್ತು. ವಿದ್ಯಾಲಯದ ವಿದ್ಯಾರ್ಥಿಗಳು, ಶಾರದಾ ಶಾಲೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಆಗಮಿಸಿ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಂಡರು. ವಿದ್ಯಾರ್ಥಿಗಳ ಕಲಾಸಾಧನೆಯನ್ನು ಮೆಚ್ಚಿ ಗಣ್ಯರು ಶುಭ ಹಾರೈಸಿದರು. ವರ್ಣ ವರ್ಣದ ಕಲಾಕ್ಥತಿಗಳು ನೋಡುಗರ ಕಣ್ಮನ ಸೆಳೆಯಿತು.
ಬಂಟ್ವಾಳ: ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರದ ತಂತ್ರಿಗಳಾದ ನಡ್ವಾಂತಾಡಿ ಶ್ರೀಪಾದ ಪಾಂಗಣ್ಣಯರ ನೇತೃತ್ವದಲ್ಲಿ ಜ.31 ಹಾಗೂ ಫೆಬ್ರವರಿ 1ರಂದು ನಡೆಯಲಿದೆ. ಜ.31 ರಂದು ಬುಧವಾರ ಸಂಜೆ 5.30 ರಿಂದ ಸ್ವಸ್ತಿ ಪುಣ್ಯಾಹ ವಾಚನ, ದುರ್ಗಾ ನಮಸ್ಕಾರಪೂಜೆ, ಮಹಾಪೂಜೆ, ಉತ್ಸವ ಬಲಿ, ವಸಂತಕಟ್ಟೆ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಫೆ.1ರಂದು ಬೆಳಿಗ್ಗೆ 8ರಿಂದ 12 ಕಾಯಿ ಗಣಹೋಮ, ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30 ರಿಂದ ಶ್ರೀದೇವರಿಗೆ ರಂಗಪೂಜೆ, ಪ್ರಸಾಧ ವಿತರಣೆ, ಶ್ರೀ ವ್ಯಾಘ್ರ ಚಾಮುಂಡಿ ಕಲ್ಲುರ್ಟಿ, ಗುಳಿಗ ದೈವಗಳಿಗೆ ನೇಮೋತ್ಸವ ಅನ್ನಸಂತರ್ಪರ್ಪಣೆ ನಡೆಯಲಿದೆ. ಫೆ. 2ರಂದು ಸಂಪ್ರೋಕ್ಷಣಾ ಕಲಶ, ಮಂತ್ರಾಕ್ಷತೆ, ಪ್ರಸಾದವಿತರಣೆ ನಡೆಯಲಿದೆ.
ಬಂಟ್ವಾಳ: 2024ರ ಸಾಲಿನ ಜೇಸಿ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾಗಿ ಎಂ.ಸುಬ್ರಹ್ಮಣ್ಯ ಪೈ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳ ಆಯ್ಕೆಯನ್ನು ಘಟಕಾಧಿಕಾರಿಗಳ ಸಭೆಯಲ್ಲಿ ಮಾಡಲಾಗಿದ್ದು, ಅದರಂತೆ ನಿಕಟಪೂರ್ವ ಅಧ್ಯಕ್ಷರಾಗಿ ಗಾಯತ್ರಿ ಲೋಕೇಶ್, ಉಪಾಧ್ಯಕ್ಷರಾಗಿ ರಮ್ಯಾ ಬಿ.ಎಸ್, ರೇಖಾ ರಾವ್, ಪ್ರಕಾಶ್ ಆಳ್ವ, ಜೀವನ್ ಕುಲಾಲ್, ಪ್ರೀತಿ ಪ್ರಕಾಶ್ ಹೆಗ್ಡೆ, ಕಾರ್ಯದರ್ಶಿಯಾಗಿ ಡಾ. ಧೀರಜ್ ಹೆಬ್ರಿ, ಜತೆಕಾರ್ಯದರ್ಶಿಯಾಗಿ ದೀಪ್ತಿ ಶ್ರೀನಿಧಿ ಭಟ್, ಕೋಶಾಧಿಕಾರಿಯಾಗಿ ಡಾ. ವಿನಾಯಕ ಕೆ.ಎಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರವೀಂದ್ರ ಕುಕ್ಕಾಜೆ, ಮಹಿಳಾ ಜೇಸಿ ಕೋಅರ್ಡಿನೇಟರ್ ಆಗಿ ಸೌಮ್ಯಾ ಹರಿಪ್ರಸಾದ್ ಕುಲಾಲ್, ಜ್ಯೂನಿಯರ್ ಜೇಸಿ ಕೋಅರ್ಡಿನೇಟರ್ ಆಗಿ ಸ್ಪರ್ಶ ಜೈನ್ ಹಾಗೂ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಭವಿಷ್, ನಿರ್ದೇಶಕರಾಗಿ ಹರಿಪ್ರಸಾದ್ ಕುಲಾಲ್, ಹರ್ಷರಾಜ್ ಸಿ, ಶ್ರೀನಿಧಿ ಭಟ್, ಹರಿಶ್ಚಂದ್ರ ಆಳ್ವ, ಮನ್ಮಥರಾಜ್ ಜೈನ್ ಆಯ್ಕೆಗೊಂಡಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ: ಟೋಲ್ಗೇಟ್ ಮೂಲಕ ವಾಹನಗಳು ಹಾದು ಹೋದರೆ ಫಾಸ್ಟ್ಯಾಗ್ ಮೂಲಕ ಖಾತೆಯಿಂದ ಹಣ ಕಡಿತಗೊಂಡು ಸುಂಕ ವಸೂಲಿಯಾಗುವುದು ಸಾಮಾನ್ಯ. ಆದರೆ ವಾಹನ ಮನೆಯಲ್ಲಿದ್ದರೂ ಕೂಡ ಟೋಲ್ಗೇಟ್ನಲ್ಲಿ ಹಣ ಪಾವತಿಯಾಗಿ ಖಾತೆಯಿಂದ ಮೊತ್ತ ಕಡಿತವಾದರೆ ಹೇಗೆ?ಇಂತಹವೊಂದು ಅಚಾತುರ್ಯ ನಡೆದಿದ್ದು, ಕಾರು ಚಾಲಕರೊಬ್ಬರು ಈ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಳದ ಉದ್ಯಮಿ ದೇಜಪ್ಪ ಪೂಜಾರಿ ಎಂಬವರು ಮಂಗಳವಾರ ತನ್ನ ಮನೆಯಲ್ಲಿಯೇ ಇದ್ದು ಕಾರನ್ನು ಎಲ್ಲಿಗೂ ಕೊಂಡು ಹೋಗಿರಲಿಲ್ಲ. ಆಧರೂ ಕೂಡ ಮಧ್ಯಾಹ್ನ 12.20 ರ ವೇಳೆಗೆ ಬ್ರಹ್ಮರಕೂಟ್ಲು ಟೋಲ್ ಗೇಟ್ನಿಂದ ಸುಂಕ ವಸೂಲಿಯಾಗಿ 30ರೂಪಾಯಿ ಕಡಿತಗೊಂಡಿರುವ ಮೆಸೆಜ್ ಬಂದಿದೆ. ಈ ಹಿಂದೆಯೊಮ್ಮೆ ಅವರು ಕಾರ್ಯ ನಿರ್ಮಿತ್ತ ಚೆನ್ನೈಗೆ ಹೋಗಿದಾಗಲೂ ಖಾತೆಯಿಂದ ಹಣ ಕಡಿತಗೊಂಡು ಸುಂಕ ಪಾವತಿಯಾಗಿರುವ ಮೆಸೆಜ್ ಬಂದಿತ್ತು. ಆಗಲೂ ಮನೆಯವರನ್ನು ವಿಚಾರಿಸಿದಾಗ ಕಾರು ಮನೆಯಲ್ಲಿಯೇ ಇತ್ತು. ಮಂಗಳವಾರ ಹಣ ಕಡಿತವಾಗುತ್ತಿದ್ದತೆಯೇ ಟೋಲ್ಗೇಟ್ಗೆ ಧಾವಿಸಿದ ಅವರು ಪರಿಶೀಲಿಸುವಂತೆ ತಿಳಿಸಿದಾಗ ಟೋಲ್ ಸಿಬ್ಬಂದಿಗಳು ಹಣ ವಾಪಸು ನೀಡಲು ಬಂದಿದ್ದಾರೆ. ಅದನ್ನು ನಿರಾಕರಿಸಿದ ದೇಜಪ್ಪ ಪೂಜಾರಿಯವರು…
ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ ದ ಆಶ್ರಯದಲ್ಲಿ ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳ ಸಾಂಸ್ಕೃತಿಕ ಸಂಭ್ರಮ ಕಲಾವಳಿ – 2024 ಜ.21ರಂದು ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ್ ಹೇಳಿದರು.ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಹಿರಿಯ ರಂಗ ನಿರ್ದೇಶಕ ರಮಾ ಬಿ.ಸಿ.ರೋಡು ದೀಪ ಪ್ರಜ್ವಲಿಸುವರು, ಚಲನ ಚಿತ್ರ ನಟ ಮನೋಜ್ ಪುತ್ತೂರು ಉಪಸ್ಥಿತರಿರುವರು. ಮಧ್ಯಾಹ್ನ 12 ಗಂಟೆಗೆ ನಡೆಯುವ ಸಭಾ ಕಾರ್ಯಕಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘುಮೂಲ್ಯ, ಪ್ರಮುಖರಾದ ಗಿರೀಶ್ ಬಿ.ಸಾಲ್ಯಾನ್, ಸುನೀಲ್ ಆರ್. ಸಾಲ್ಯಾನ್, ಮಯೂರ್ ಉಳ್ಳಾಲ್, ,ವಿಠಲ ಕನ್ನಿರ್ ತೋಟ ಭಾಗವಹಿಸುವರು, ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ…
ಬಂಟ್ವಾಳ: ಇಲ್ಲಿನ ಬಂಟ್ವಾಳ ಟೈಲರ್ಸ್ ಸಹಕಾರ ಸಂಘ ನಿಯಮಿತ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಶುಭಾರಂಭಗೊಂಡಿತು.ಬಿ.ಸಿ.ರೋಡಿನ ವಕೀಲ ಅಶ್ವನಿ ಕುಮಾರ್ ರೈ ಸಹಕಾರ ಸಂಘವನ್ನು ಉದ್ಘಾಟಿಸಿ ಬಳಿಕ ಬಿ.ಸಿ.ರೋಡಿನ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಉತ್ತಮ ಉದ್ದೇಶಕ್ಕಾಗಿ ಎಲ್ಲರ ಸಹಕಾರದೊಂದಿಗೆ ಟೈಲರ್ಸ್ ಸಹಕಾರ ಸಂಘ ಸ್ಥಾಪನೆಯಾಗಿದೆ. ಟೈಲರ್ ವೃತ್ತಿ ಬಾಂಧವರಿಗೆ ಸಹಯವಾಗುವ ಉದ್ದೇಶದಿಂದ ನಮ್ಮೊಳಗಿನ ಹಣವನ್ನು ಸಂಚಯನ ಮಾಡಿಕೊಂಡು ಟೈಲರ್ಗಳ ಅಗತ್ಯಕ್ಕೆ ಅನುಗುಣವಾಗಿ ಆರ್ಥಿಕ ನೆರವು ಸಿಗಲು ಈ ಸಹಕಾರ ಸಂಘದಿಂದ ಸಾಧ್ಯವಾಗಲಿದೆ ಎಂದರು. ಈ ಸಹಕಾರ ಸಂಘ ನಮ್ಮದು ಎನ್ನುವ ಭಾವನೆಯೊಂದಿಗೆ ಕಾನೂನಿನ ಚೌಕಟ್ಟಿನೊಳಗೆ ಸಂಘವನ್ನು ಮುನ್ನಡೆಸಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲೂ ಸಂಘ ಸ್ಥಾಪನೆಯಾಗಲಿ ಎಂದು ಆಶಿಸಿದರು. ಕೆಎಸ್ಟಿಎ ರಾಜಾಧ್ಯಕ್ಷ ನಾರಾಯಣ ಬಿ.ಎ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಟೈಲರ್ಗಳಿಗೆ ಕನಿಷ್ಟ ಮೊತ್ತದ ಸಾಲ ಪಡೆಯಲು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತುಂಬಾ ಕಷ್ಟ ಪಡಬೇಕಿತ್ತು. ಈಗ ಟೈಲರ್ ಸಹಕಾರ ಸಂಘ ಆರಂಭವಾಗುವ ಮೂಲಕ ವೃತ್ತಿಬಾಂಧವರಿಗೆ…
ಬಂಟ್ವಾಳ ತ್ಯಾಗದ ಪ್ರತಿರೂಪ ಶ್ರೀರಾಮ, ಸೇವೆಯ ಪ್ರತಿರೂಪ ಹನುಮಂತ.ಭಾರತದ ಮೌಲ್ಯ ಆದ್ಯಾತ್ಮ. ಶ್ರೀ ರಾಮ, ಶ್ರೀ ಕೃಷ್ಣರೇ ನಮಗೆ ಆದರ್ಶ. ರಾಮಯಣ ಭಗವದ್ಗೀತೆ ಬದುಕಿನ ದಾರಿ, ಇದರಲ್ಲಿ ಬದುಕಿಗೆ ಬೇಕಾದ ಪರಿಪೂರ್ಣ ವಿಚಾರಗಳು ಇದೆ.ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ಚಾಮೀಜಿ ಹೇಳಿದರು.ಅವರು ಪುದು ಗ್ರಾಮದ ಸುಜೀರು ದತ್ತನಗರದ ಶ್ರೀ ವೀರ ಹನುಮಾನ್ ಮಂದಿರದ 22 ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿ ಬಂಟ್ವಾಳ ಉಪತಹಶೀಲ್ದಾರ್ ನವೀನ್ ಬೆಂಜನಪದವು ಮಾತನಾಡಿ ಸಂಸ್ಕಾರ ಇದ್ದಾಗ ಮನುಷ್ಯನ ಜೀವನ ಬದಲಾಗಲು ಸಾಧ್ಯ, ಸಂಸ್ಕಾರ ಇದ್ದಾಗ ಮನುಷ್ಯನ ಜೀವನಕ್ಕೆ ಮೌಲ್ಯ ಬರುತ್ತದೆ ಎಂದು ತಿಳಿಸಿದರು. ಷೋಡಶ ಸಂಸ್ಕಾರದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ ಮಕ್ಕಳು ದಾರಿ ತಪ್ಪಲು ಸಾಧ್ಯವಿಲ್ಲ, ತುಳುವರ ಸಂಸ್ಕೃತಿ ಶ್ರೇಷ್ಠವಾದ ಸಂಸ್ಕೃತಿ, ಇದು ಮೂಢನಂಬಿಕೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು. Advertisement ವಕೀಲೆ ಶೈಲಜಾ ರಾಜೇಶ್, ವ್ಯವಸಾಯ ಸೇವಾ ಸಹಕಾರಿ ಸಂಘ ಫರಂಗಿಪೇಟೆಇದರ ನಿರ್ದೇಶಕ ಪ್ರತಾಪ್ ಆಳ್ವ,…
ಬಂಟ್ವಾಳ : ಬಂಟ್ವಾಳ ಟೈಲರ್ಸ್ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಜ.15ರಂದು ಸೋಮವಾರ ಬೆಳಿಗ್ಗೆ 9ಕ್ಕೆ ಉದ್ಘಾಟನೆಗೊಳ್ಳಲಿದೆ.ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸುವರು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ ಸೇಫ್ ಲಾಕರ್ ಉದ್ಘಾಟಿಸುವರು.ಸಂಘದ ಅಧ್ಯಕ್ಷ ಎಂ. ನಾಗೇಶ್ ಅಧ್ಯಕ್ಷತೆ ವಹಿಸುವರು. ವಕೀಲ ಅಶ್ವನಿ ಕುಮಾರ್ ರೈ ದೀಪ ಪ್ರಜ್ವಲಿಸುವರು. Advertisement ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಎಚ್ ಎನ್. ರಮೇಶ್, ಕೆಎಸ್ಟಿಎ ರಾಜ್ಯಾಧ್ಯಕ್ಷ ನಾರಾಯಣ ಬಿ. , ದ.ಕ.ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಅಧ್ಯಕ್ಷ ಸುಭಾಷ್ ಚಂದ್ರ ಜೈನ್, ಸಮಾಜ ಸೇವ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಗಣೇಶ ಕಾರಂತ, ಗೀತಾ ಕಲ್ಯಾಣ ಮಂಟಪದ ಅಧ್ಯಕ್ಷ ಸುರೇಶ್ ನಾಯಕ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಮತ್ತು ಕೆಎಸ್ಟಿಎ ರಾಜ್ಯ ಉಪಾಧ್ಯಕ್ಷ ರೋ। ಸುರೇಶ್ ಸಾಲಿಯಾನ್ ಉದ್ಯಮಿ ಹಂಝ ಬಸ್ತಿಕೋಡಿ, ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್…








