Author: admin
ಗುಣಶ್ರೀ ವಿದ್ಯಾಲಯದ ಲಹರಿಗೆ 609 ಅಂಕ ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ದಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಲಹರಿ ಎಂ.ರಾಯಿ ಇವರು ಒಟ್ಟು 625ರಲ್ಲಿ 609 ಅಂಕ ಗಳಿಸುವ ಮೂಲಕ ಶೇ. 97.44% ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ಶಿಕ್ಷಕಿ ರಮಾ ಮೋಹನ್ ಇವರ ಪುತ್ರಿ. ಗುಣಶ್ರೀ ವಿದ್ಯಾಲಯಕ್ಕೆ ಕೀರ್ತಿ ತಂದ ಇವರ ಸಾಧನೆಗೆ ಶಾಲಾ ಮುಖ್ಯಶಿಕ್ಷಕ ಗಿಲ್ಬರ್ಟ್ ಡಿಸೋಜ ಮತ್ತು ಆಡಳಿತ ಸಮಿತಿ ಅಧ್ಯಕ್ಷ , ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. Advertisement Advertisement
ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಭಿಕ್ಷಾಗೆ 612 ಅಂಕ ಬಂಟ್ವಾಳ: ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಭಿಕ್ಷಾ 612 (ಶೇ.97.92)ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ. ಈಕೆ ಕೊಡ್ಮಾಣ್ ಕಾಪಿಕಾಡಿನ ಪುರುಷೋತ್ತಮ ಬಂಗೇರ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿ Advertisement Advertisement
https://youtu.be/YUe_X23Gj48 ಬಂಟ್ವಾಳ: ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈಯವರ ಚುನಾವಣಾ ಪ್ರಚಾರದ ಭಾಗವಾಗಿ ಮೆಗಾ ರೋಡ್ ಶೋ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆಯಿತು.ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯಿಂದ ಆರಂಭಗೊಂಡ ಮೆರವಣಿಗೆ ಬಿ.ಸಿ.ರೋಡಿನ ಮುಖ್ಯ ರಸ್ತೆಯಲ್ಲಿ ಸಾಗಿ ಕೈಕಂಬದ ಪೊಳಲಿ ದ್ವಾರದ ಬಳಿ ಸಮಾಪನ ಗೊಂಡಿತು. ಪಕ್ಷದ ಅಭ್ಯರ್ಥಿ ಬಿ. ರಮನಾಥ ರೈ ತೆರೆದ ವಾಹನದಲ್ಲಿ ಸಾಗಿ ಮತಯಾಚನೆ ಮಾಡಿದರು. ಸಾವಿರಾರು ಸಂಕ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ರಮನಾಥ ರೈ ಅಭಿಮಾನಿಗಳು ಹಾಗೂ ಹಿತೈಷಿಗಳು ರೋಡ್ಶೋನಲ್ಲಿ ಹೆಜ್ಜೆಹಾಕಿದರು. ಬಳಿಕ ಕೈಕಂಬದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿ. ರಮಾನಾಥ ರೈ ಮಾತನಾಡಿಜನರು ನೀಡಿದ ಪ್ರೀತಿ ನನಗೆ ಶಕ್ತಿ. ಎಲ್ಲಾ ಜಾತಿ ಧರ್ಮವನ್ನು ಸಮಾನವಾಗಿ ನೋಡಿ ಕೊಂಡು ರಾಜಕೀಯ ಮಾಡಿದ ಹೆಮ್ಮೆ ನನಗಿದೆ ಎಂದರು. ಅನೇಕ ಅಭಿವೃದ್ಧಿ ಕೆಲಸಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಆಗಿದೆ. ಎಷ್ಟೇ ಕೆಲಸ ಮಾಡಿದರೂ ಅಪಪ್ರಚಾರದ ಮೂಲಕ ಕಳೆದ ಬಾರಿ ಸೋಲಿಸಲಾಗಿದೆ.…
ರೈ ಗೆಲುವಿಗಾಗಿ ಕಾಂಗ್ರೆಸ್ಗೆ ಮತ ನೀಡಿ: ಹೊನ್ನಪ್ಪ ಕುಂದರ್ ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮನಾಥ ರೈ ಅವರನ್ನು ಗೆಲ್ಲಿಸುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ಘಟಕದ ಮಾಜಿ ಸಂಚಾಲಕ ಹೊನ್ನಪ್ಪ ಕುಂದರ್ ಆಗ್ರಹಿಸಿದರು. Advertisement ಅವರು ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಮಾನಾಥ ರೈ ಅವರು ತನ್ನ ಅಧಿಕಾರವಧಿಯಲ್ಲಿ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ೩ ಕೋಟಿಗೂ ಮಿಕ್ಕಿದ ಅಂಬೇಡ್ಕರ್ ಭವನವನ್ನು ನಿರ್ಮಿಸಿರುವುದು ಅವರಿಗೆ ದುರ್ಬಲ ವರ್ಗದ ಜನರ ಮೇಲಿರುವ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ. ಪ.ಜಾ. ಮತ್ತು ಮಂಗಡಕ್ಕೆ ಡಿಸಿ ಮನ್ನಾ ಜಮೀನು ಹಂಚಬೇಕೆಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒತ್ತಾಯ ಮಾಡಲಾಗಿದೆ. ಸತ್ಯ ಸಾರಮಾನಿ ಮೂಲ ಕ್ಷೇತ್ರದ ಬಗ್ಗೆಯೂ ರೈಯವರು ಮುಂಚೂಣಿ ನಾಯಕತ್ವ ವಹಿಸಿ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖವಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಬಂಟ್ವಾಳದ ನಿಕಟಪೂರ್ವ ಶಾಸಕರು ತನ್ನ ೫ ವರ್ಷದ ಆಡಳಿತದಲ್ಲಿ ೩ ತಿಂಗಳಿಗೊಮ್ಮೆ ನಡೆಯುವ ಎಸ್ಸಿ ಎಸ್ ಟಿಯವರ ಅಭಿವೃದ್ದಿ ಸಭೆಗೆ ಒಂದು ಸಲವೂ…
120 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ: ವಿಶ್ವಾಸ ವ್ಯಕ್ತಪಡಿಸಿದ ಕೆ.ಹರಿಕೃಷ್ಣ ಬಂಟ್ವಾಳ ಬಂಟ್ಚಾಳ: ಅಧಿಕಾರ ಪಡೆಯುವುದೊಂದೆ ಬಿಜೆಪಿ ತಂತ್ರಗಾರಿಕೆ ಅಲ್ಲ. ಗುಲಾಮಗಿರಿಯಂತಹ ವಿಷ ಬೀಜ ತೆಗೆದು ದೇಶವನ್ನು ಸ್ವಾವಲಂಬಿ, ವಿಶ್ವಗುರು ಮಾಡುವ ಅಜೆಂಡ ಬಿಜೆಪಿಯಲ್ಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದರು.ಕ್ರಿಮಿನಲ್ ದಂದೆಯ ಅಜೆಂಡ ಬಿಜೆಪಿಯಲ್ಲಿಲ್ಲ ಎಂದ ಅವರು ರಾಜ್ಯದಲ್ಲಿ ಜನತೆ ಮೋದಿ ಅಮಿತ್ ಷಾ ಅವರ ಮಾತಿಗೆ ಬೆಲೆ ನೀಡುತ್ತಾರೆ, ಬಿಜೆಪಿ 120 ಸ್ಥಾನವನ್ನು ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ದೇಶ ವಿರೋಧಿ ಶಕ್ತಿಗಳು ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದೆ. ಪ್ರತ್ಯೇಕವಾದಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಉಚಿತ ಕೊಡುಗೆಗಳ ಘೊಷಣೆ ಮಾಡುವುದರಲ್ಲಿ ಮೊದಲು, ಕೊಡುವುದರಲ್ಲಿ ಕೊನೆ ಎಂದು ಛೇಡಿಇಸದರು. Advertisement ಕರ್ನಾಟಕ ದಲ್ಲಿ ಐದು ಕಾಂಗ್ರೆಸ್ ಕೋಟೆ ಇದೆ. ಸಿದ್ದರಾಮಯ್ಯ ಟಿಪ್ಪುವಿನ ಕಲ್ಲಿನಲ್ಲಿ ಡಿಕೆಶಿ ಭ್ರಷ್ಠಾಷಾರದ ಕಲ್ಲಿನಲ್ಲಿ, ಮಲ್ಲಿಕಾರ್ಜುನ ಕರ್ಗೆ ಪ್ರಧಾನಿಯನ್ನು ನಿಂದಿಸಿ ಕೋಟೆ ಕಟ್ಟಿದ್ದಾರೆ. ಮೋದಿ ಕರ್ನಾಟಕಕ್ಕೆ…
ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ: ಹಾರೂನ್ ರಶೀದ್ ಬಂಟ್ವಾಳ: ರಾಜ್ಯ ಕಂಡ ಅತ್ಯಂತ ಭ್ರಷ್ಠ ಹಾಗೂ ಸಂವಿಧಾನ ವಿರೋಧಿ ಸರಕಾರ ಬೊಮ್ಮಾಯಿ ಸರಕಾರ. 40 ಪರ್ಸೆಂಟ್ ಸರಕಾರ ಎಂದು ಕುಖ್ಯಾತಿ ಪಡೆದಿದೆ. ಅಲ್ಪಸಂಖ್ಯಾತ ವಿರೋಧಿ ಧೋರಣೆಗಳಿಂದಲೇ ಕಾಲ ಕಳೆದ ಸರಕಾರ ಎಂದು ಜಾತ್ಯಾತೀತ ಜನತಾದಳದ ದ.ಕ. ಜಿಲ್ಲಾ ಅಲ್ಪಸಂಕ್ಯಾತ ಘಟಕದ ಅಧ್ಯಕ್ಷ ಹಾರೂನ್ ರಶೀದ್ ಹೇಳಿದರು. Advertisement ಅವರು ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರು. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀರಿಸಿದ ಬಳಿಕ ಅನೈತಿಕ ಪೊಲೀಸ್ಗಿರಿ ಪ್ರಕರಣ ಹೆಚ್ಚಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಕೋಮು ವೈಷಮ್ಯದ ಘಟನೆಗಳಲ್ಲೂ ತುಷ್ಟೀಕರಣ ನೀತಿ ಅನುಸರಿಸಿ ಬೊಮ್ಮಾಯಿ ಸರಕಾರ ಮೃತರಿಗೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು. ಆಝಾನ್, ಹಿಜಬ್, ಜಾತ್ರೆಯಲ್ಲಿ ವ್ಯಾಪಾರದಲ್ಲೂ ಕೋಮುವಾದ ಮೊದಲಾದ ಕ್ಷುಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೋಮು ಆಧಾರಿತ ರಾಜಕೀಯ ಮಾಡುತ್ತಿರುವುದು ಖಂಡನೀಯ, ಅಧಿಕಾರದಲ್ಲಿ ರಾಜಧರ್ಮ ಪಾಳಿಸಬೇಕಾದ ಬೊಮ್ಮಾಯಿ ಒಂದು ವರ್ಗವನ್ನು ಓಲೈಸಿ…
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2023: ಇತ್ತೀಚಿನ ಅಧಿಸೂಚನೆಯ ಪ್ರಕಾರ, ಎಸ್ಎಸ್ಎಲ್ಸಿ ಫಲಿತಾಂಶವು (ಮೇ 08) ಬೆಳಿಗ್ಗೆ10 ಗಂಟೆಗೆ ಪ್ರಕಟವಾಗಲಿದೆ. ರಿಸ್ಟಲ್ ನೋಡುವುದು ಹೇಗೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ. Advertisement Advertisement ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEEB) ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2023 (Karnataka SSLC Result 2023) ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದ್ದು, (May 08) ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಲಿದೆ. ಬೆಳಗ್ಗೆ 11 ಗಂಟೆಗೆ ಅಧಿಕೃತ ವೆಬ್ಸೈಟ್ ಅಲ್ಲಿ ಫಲಿತಾಂಶ ಪ್ರಕಟವಾಗಲಿದೆ. sslc.karnataka.gov.in ಮತ್ತು kseab.karnataka.gov.in. ಫಲಿತಾಂಶವನ್ನು ಪರಿಶೀಲಿಸಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಕರ್ನಾಟಕ SSLC ಫಲಿತಾಂಶ 2023: ಪರಿಶೀಲಿಸುವುದು ಹೇಗೆ? ಅಧಿಕೃತ ವೆಬ್ಸೈಟ್-sslc.karnataka.gov.in ಗೆ ಹೋಗಿ ಕಾಣಿಸಿಕೊಂಡ ಮುಖಪುಟದಲ್ಲಿ, ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ ಹೊಸ ಲಾಗಿನ್ ಪುಟ ತೆರೆಯುತ್ತದೆ…
ಸಾಲೆತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮತಯಾಚನೆ ಬಂಟ್ವಾಳ: ಬಿಜೆಪಿ ಅಭ್ಯರ್ಥಿ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಸಾಲೆತ್ತೂರು ವರೆಗೆ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.ಚುನಾವಣೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಾರ್ಯಕರ್ತರು ಮೈಮರೆಯದೆ ಮನೆಮನೆ ಬೇಟಿ ಮಾಡಿ ಮತಯಾಚನೆ ನಡೆಸಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲು ರಾತ್ರಿ ಹಗಲು ನಿರಂತರವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದರು .ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಬರುವುದು ನೂರಕ್ಕೆ ನೂರು ಸತ್ಯ.ಆದರೆ ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಶಕ್ತಿ ನೀಡಲು ಬಂಟ್ವಾಳ ದಲ್ಲಿ ಪ್ರತಿಯೊಬ್ಬರು ಬಿಜೆಪಿಗೆ ಮತ ನೀಡಿ ಎಂದು ತಿಳಿಸಿದರು. Advertisement ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ,ಮಾಧವ ಮಾವೆ, ಪುಷ್ಪರಾಜ್ ಚೌಟ, ಶಿವಪ್ರಸಾದ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಪುಷ್ಪಾಕಾಮತ್, ರಮೇಶ್ ರಾವ್ ಪತ್ತುಮುಡಿ, ಲೋಹಿತ್ ಅಗರಿ, ಬಾಲಕೃಷ್ಣ ಸೆರ್ಕಳ,ರಾಜೇಶ್ ಶೆಟ್ಟಿ ಮಂಚಿ, ಪ್ರಮೋದ್ ನೂಜಿಪ್ಪಾಡಿ, ರಾಜಾರಾಮ್ ಹೆಗ್ಡೆ, ಅಭಿಷೇಕ್…
https://youtu.be/IbnyJeqwoBk ರಮಾನಾಥ ರೈ ಅವರ ಶ್ರಮ ವ್ಯರ್ಥವಾಗಬಾರದೆಂದಿದ್ದರೆ ಅವರಿಗೆ ಮತನೀಡಿ ಗೆಲ್ಲಿಸಿ: ಬಿ. ಜನಾರ್ದನ ಪೂಜಾರಿ ಬಂಟ್ವಾಳ: ರಮಾನಾಥ ರೈ ಒಳ್ಳೆಯ ಮನುಷ್ಯ.. ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.. ಅವರು ಚುನಾವಣೆಯಲ್ಲಿ ಸೋತರೆ ನಾನು ಸತ್ತಂತೆ.. ನಾನು ಸಾಯಬಾರದೆಂದಿದ್ದರೆ ಅವರನ್ನು ಗೆಲ್ಲಿಸಿ..ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಪರವಾಗಿ, ಭಾವನಾತ್ಮಕವಾಗಿ ಮೆಚ್ಚುಗೆಯ ಮಾತಗಳನ್ನಾಡಿದ್ದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ. ಭಾನುವಾರ ಬಿ.ಸಿ.ರೋಡಿನ ಬಸ್ತಿಪಡ್ಪುವಿನಲ್ಲಿರುವ ತನ್ನ ನಿವಾಸ ಚೆನ್ನಮ್ಮ ಕುಟೀರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನನಗೆ ವಯಸ್ಸಾದ ಕಾರಣ ದೇಹದ ಶಕ್ತಿ ಕುಂದಿದೆ. ಜನರು ನನನ್ನು ಕ್ಷಮಿಸಬೇಕು. ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಲು ಅಸಾಧ್ಯವಾಗಿರುವುದರಿಂದ ಮಾಧ್ಯಮದ ಮೂಲಕ ಮತದಾರರಲ್ಲಿ ಮತ ಯಾಚಿಸುತ್ತೇನೆ ಎಂದರು. advertisement Advertisement ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ ರೈಯವರು ಹಲವಾರು ವರ್ಷಗಳಿಂದ ಮತಯಾಚಿಸುತ್ತಿದ್ದು ಅವರಿಗೆ ಸಂಪೂರ್ಣ ಬೆಂಬಲಕೊಟ್ಟು ಗೆಲ್ಲಿಸಿದ್ದೀರಿ. ಅವರು ನಿಮ್ಮನ್ನು ಮರೆಯದೆ ನಿಮ್ಮ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಯಾವ…
https://youtu.be/RUZ-HZhMjQ0 ಬಿ.ಸಿ.ರೋಡಿನಲ್ಲಿ ಯೋಗಿ ಆದಿತ್ಯನಾಥ್ ಅವರಿಂದ ಬೃಹತ್ ರೋಡ್ ಶೋ ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಜೆಪಿಯ ಸ್ಟಾರ್ ಪ್ರಚಾರಕಲ್ಲೋರ್ವರಾದ ಯೋಗಿ ಆದಿತ್ಯನಾಥ್ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಬೃಹತ್ ರೋಡ್ಶೋ ನಡೆಸಿ ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾಗಿ ಮತಯಾಚನೆ ನಡೆಸಿದರು. ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ರಥದ ಮಾದರಿಯ ವಾಹನದ ಮೂಲಕ ಆಗಮಿಸಿದ ಯೋಗಿ ಆದಿತ್ಯನಾಥ್ ಅವರಿಗೆ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಮೇಲ್ಸೆತುವೆಯ ಮೇಲಿಂದ ಪುಷ್ಪವೃಷ್ಠಿ ಹರಿಸಿ ಅದ್ದೂರಿಯ ಸ್ವಾಗತ ಕೋರಲಾಯಿತು. ಯೋಗಿ ಆದಿತ್ಯನಾಥ್ ಅವರು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಬೃಹತ್ ಜನಸ್ತೋಮಕ್ಕೆ ಕೈ ಬೀಸಿ ನಮಿಸಿದರು. ಶಾಸಕ ರಾಜೇಶ್ ನಾಯ್ಕ್ ಅವರು ಯೋಗಿ ಆದಿತ್ಯನಾಥ ಅವರಿಗೆ ಶ್ರೀ ಆಂಜನೇಯನ ಕಂಚಿನ ವಿಗ್ರಹವನ್ನು ನೆನೆಪಿನ ಕಾಣಿಕೆಯಾಗಿ ನೀಡಿದರು.ಬಳಿಕ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಬಜರಂಗದಳ ಭಾರತದ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ. ಇದನ್ನು ಯಾರಿಂದಲೂ ನಿಷೇಧಿಸಲು ಸಾಧ್ಯವಿಲ್ಲ ಎಂದರು. ಪ್ರಭು…








