Author: admin

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ಅಂಗಡಿ, ಹೊಟೇಲ್ ಹಾಗೂ ಸಹಕಾರಿ ಸಂಘಗಳ ಬೀಗ ಮುರಿದು ಒಳ ನುಗ್ಗಿ ಕಳ್ಳನೊರ್ವ ನಗದು ಕಳವು ನಡೆಸುತ್ತಿರುವ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.ಶನಿವಾರ ರಾತ್ರಿ ಕಳ್ಳ ಕೈಕಂಬದ ಹೊಟೇಲ್, ಅಂಗಡಿ, ಸಹಕಾರಿ ಸಂಘಗಳ ಬೀಗ ಮುರಿದು ಸಾವಿರಾರು ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ. ಮುಖಕ್ಕೆ ಬಟ್ಟೆ ಸುತ್ತಿ ಅದರ ಮೇಲೆ ಹೆಲ್ಮೆಟ್ ಇಟ್ಟು, ಕೈಯಲ್ಲಿ ಸಣ್ಣ ಕಬ್ಬಿಣದ ರಾಡ್ ಹಿಡಿದುಕೊಂಡು ಕಳವು ನಡೆಸುತ್ತಿರುವ ಹಾಗೂ ಸಿಸಿ ಕ್ಯಾಮಾರಗಳನ್ನು ಹಾನಿ ಮಾಡಿ ತಿರುಗಿಸಿಡುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.ಒಬ್ಬನೇ ಕಳ್ಳ ಎಲ್ಲಾ ಅಂಗಡಿ, ಹೊಟೇಲ್, ಸಹಕಾರಿ ಸಂಘಗಳ ಬೀಗ ಮುರಿದು ಕಳ್ಳತನ ನಡೆಸಿದ್ದು ಪೊಲೀಸರು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.

Read More

ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಎನ್ನುವ ಸಂದರ್ಭದಲ್ಲಿ ಅತೀ ದೊಡ್ಡ ಸಾಧನೆಯನ್ನು ಮಾಡಿ ಇಂದು ಶಾಲೆಯಲ್ಲಿ 1200ಕ್ಕಿಂತಲೂ ಹೆಚ್ಚು ಮಕ್ಕಳನ್ನು ಕರೆತರುವ ಕಾರ್ಯ ದಡ್ಡಲಕಾಡು ಶಾಲೆಯಲ್ಲಿ ನಡೆದಿದೆ ಇದೊಂದು ಅಭೂತಪೂರ್ವ ಹಾಗೂ ಸರಕಾರದ ಕಣ್ತರೆಸುವ ಕೆಲಸ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಅವರು ಶಾಸಕ ರಾಜೇಶ್ ನಾಯ್ಕ್ ಅವರ ಮುತುವರ್ಜಿಯಲ್ಲಿ ಸರಕಾರದ ವಿವೇಕ ಯೋಜನೆಯಡಿ ಮಂಜೂರುಗೊಂಡ 49 ಲಕ್ಷ ಅನುದಾನ, ಎಂಆರ್ ಪಿಎಲ್ ನ 30 ಲಕ್ಷ ಆರ್ಥಿಕ ಸಹಕಾರ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಸಹಕಾರದಿಂದ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ‌ ಶಾಲೆಗೆ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಉದ್ಘಾಟಿಸಿ ಬಳಿಕ ದಡ್ಡಲಕಾಡು ಚಿಣ್ಣರೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದರು.ತನ್ನ ಸಂಸದ ನಿಧಿಯಿಂದ 10 ಲಕ್ಷ ಅನುದಾನವನ್ನು ತಕ್ಷಣ ಕೊಡುವುದಾಗಿ ಭರವಸೆ ನೀಡಿದ ನಳಿನ್ ಕುಮಾರ್ ಸರಕಾರಿ ಶಾಲೆಯ ಮಕ್ಕಳಲ್ಲಿರುವ ಪ್ರತಿಭೆಯನ್ನು ದಡ್ಡಲಕಾಡು ಶಾಲೆಯ ಮಕ್ಕಳು ತೋರಿಸಿ ಕೊಟ್ಟಿದ್ದಾರೆ.ಚಿಣ್ಣರೋತ್ಸವದ ಮೂಲಕ ಪ್ರತಿಭೆಯನ್ನು…

Read More

ಬಂಟ್ವಾಳ: ಸುರಿಯುವ ಮಳೆಯ ಮಧ್ಯೆಯೂ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಚಿಣ್ಣರೋತ್ಸವ ಭಾನುವಾರ ರಾತ್ರಿ ಯಶಸ್ವಿಯಾಗಿ ನಡೆದಿದೆ. ಆಗಾಗ್ಗೆ ಬಿರುಸಿನ ಮಳೆ ಸುರಿಯುತ್ತಿದ್ದರೂ ಕೂಡ ಮಳೆಯನ್ನು ಲೆಕ್ಕಿಸದೇ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷರಿಂದ ಸೈ ಎನಿಸಿ ಕೊಂಡರು. ನಭದಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆಯೇ ದಡ್ಡಲಕಾಡು ಶಾಲಾ ಮೈದಾನದ ಸುತ್ತ ಹಾಕಲಾಗಿದ್ದ ಗ್ಯಾಲರಿ ಪ್ರೇಕ್ಷಕರಿಂದ ತುಂಬಿಕೊಂಡಿತ್ತು. ಶಾಲೆಯ ಎಲ್ ಕೆ ಜಿ ವಿದ್ಯಾರ್ಥಿಗಳ ಸಂಗೀತ ಪ್ರದರ್ಶನದೊಂದಿಗೆ ದಡ್ಡಲಕಾಡು ಚಿಣ್ಣರೋತ್ಸವ ಆರಂಭಗೊಂಡು ನೃತ್ಯ, ನಾಟಕ, ಕರಾಟೆ, ಬೆಂಕಿ ಸಾಹಸ, ಸಹಿತ ವಿವಿಧ ಸಾಮೂಹಿಕ ಚಿತ್ತಾರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಪ್ರೇಕ್ಷಕರ ಮನ ರಂಜಿಸಿದರು. ಮಳೆಯ ನಡುವೆಯೂ ನಿಲ್ಲದ ಉತ್ಸಾಹ:ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿತ್ತಿದ್ದಂತೆಯೆ ಭಾರಿ ಮಳೆ ಸುರಿಯಲಾರಂಭಿಸಿತು. ಅಯ್ಯೋ ಮಳೆ ಬಂತಲ್ಲಾ ಎಂದು ಪ್ರೇಕ್ಷಕರು ನಿರಾಶರಾದರು ವಿದ್ಯಾರ್ಥಿಗಳಲ್ಲಿ ಮಾತ್ರ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಈ ವೇಳೆ ಶ್ರೀ ದೇವಿ ಮಹಿಷಾಸುರನನ್ನು ವಧೆ ಮಾಡುವ ಸನ್ನಿವೇಶದ ನೃತ್ಯ ಪದರ್ಶ ನಡೆಯುತ್ತಿದ್ದು ವಿದ್ಯಾರ್ಥಿಗಳು ಮಳೆಗೆ ಅಂಜದೆ…

Read More

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ಶನಿವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಳ್ಳರು ಇಲ್ಲಿನ ಹೊಟೇಲ್, ಸಹಕಾರಿ ಸಂಘಗಳ ಕಚೇರಿ ಸಹಿತ ಮತ್ತಿತರ ಅಂಗಡಿಗಳಿಗೆ ನುಗ್ಗಿ ಹಣ ಕಳವು ನಡೆಸಿದ್ದಾರೆ. ಶನಿವಾರ ರಾತ್ತಿ ವೇಳೆ ಭಾರಿ ಮಳೆ ಇದ್ದು ಈ ಅವಕಾಶವನ್ನು ಕಳ್ಳರು ಉಪಯೋಗಿಸಿಕೊಂಡಿದ್ದಾರೆ ಎನ್ನಲಾಗಿದೆ.ಕೈಕಂಬ ಪರಿಸರದ ವ್ಯಾಪರಿಗಳು ಆತಂಕ ಗೊಂಡಿದ್ದು ಪೊಲೀಸ್ ಇಲಾಖೆ ತಕ್ಷಣ ಕಳ್ಳರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Read More

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಿರುವುದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ ಇಲ್ಲಿಗೆ ತಾನು ಬಾರದಿದ್ದರೆ ತನ್ನ ಜೀವನದಲ್ಲಿ ನಷ್ಟವಾಗುತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ. ಕುಮಾರ ಸ್ವಾಮಿ ಹೇಳಿದರು.ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ಕ್ರೀಡೋತ್ಸವ ವೀಕ್ಷಿಸಿ ಮಾತನಾಡಿದರು.ಶಾಲೆಯ ಸಂಸ್ಥಾಪಕಾರದ,ಡಾ.ಪ್ರಭಾಕರ ಭಟ್ ಅವರು ಸಮಾಜ ಶಿಕ್ಷಣಕ್ಕೆ ನೀಡಿತ್ತಿರುವ ಕೊಡುಗೆ ಅಪಾರವಾಗಿದೆ. ದೇಶದ ಸಂಸ್ಕೃತಿ ಹೊಂದಿರುವ ಗುರುಕಲ ಪರಂಪರೆ, ಹಿರಿಯರಿಗೆ ಗೌರವ, ಸಂಸ್ಕಾರ,ಮಕ್ಕಳಿಗೆ ಶಿಸ್ತಿನ ಬದುಕು,ದೇಶದ ಸಾಂಸ್ಕೃತಿಕ ಪರಿಚಯವನ್ನು ಈ ವಿದ್ಯಾ ಸಂಸ್ಥೆಯಲ್ಲಿ ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದ ಅವರು ಜ್ಞಾನ ,ಬುದ್ದಿ,ಮಾನವೀಯತೆಯ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ ಎಂದರು. ಬಾಲ್ಯದಲ್ಲಿ‌ತಾನು ಶ್ರೀರಾಮನ ಭಜನೆಯನ್ನು ಮಾಡುತ್ತಿದ್ದ ದಿನವನ್ನು ಕ್ರೀಡೋತ್ಸವ ಮತ್ತೆ ನೆನಪಿಸಿದೆ.ಹಿಂದಿನ ಸಾಂಸ್ಕೃತಿಕ ಕಲೆಗಳಿಂದ ಮೊದಲ್ಗೊಂಡು ಇಂದಿನ ಚಂದ್ರಯಾನ-3 ರವರೆಗಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಅದ್ಬುತವಾಗಿ ಮಕ್ಕಳು ಪ್ರದರ್ಶಿಸಿದ್ದಾರೆ ಎಂದ ಅವರು ಬಾಂಧವ್ಯದ ಕೊರತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದ ದಿನಗಳನ್ನು ಕಾಣಲು ಸಂಸ್ಕೃತಿಯ ಬದುಕನ್ನು ಶಿಕ್ಷಣದ ಮೂಲಕ ಕೊಡುತ್ತಿರುವ ಹಾಗೂ ಸರಕಾರದ…

Read More

ಬಂಟ್ವಾಳ: ಬಿ.ಸಿ.ರೋಡಿನ ಮುನ್ಸಿಫ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕಾ ಅದಾಲತ್‌ನಲ್ಲಿ ಬಂಟ್ವಾಳ ಪುರಸಭೆಗೆ ಸಾರ್ವಜನಿಕರಿಂದ ಸುಮಾರು 33,62,284 ರೂಪಾಯಿ ಬಾಕಿ ವಸೂಲಾತಿಯಾಗಿದೆ.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಂಎಫ್‌ಸಿ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಧೀಶ ಚಂದ್ರಶೇಖರ್ ತಳವಾರ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ ಅವರ ಉಪಸ್ಥಿತಿಯಲ್ಲಿ ಲೋಕಾ ಅದಾಲತ್ ನಡೆದಿದ್ದು ಬಂಟ್ವಾಳ ಪುರಸಭೆಗೆ ನೀರಿನ ತೆರಿಗೆ 19,14,881 ರೂಪಾಯಿ, ಮನೆ ತೆರಿಗೆ 5,34,290 ರೂಪಾಯಿ. ಕಟ್ಟಡ ಬಾಡಿಗೆ 9,13,613 ರೂಪಾಯಿ ವಸೂಲಾತಿಯಾಗಿದೆ.ಈ ಹಿಂದೆಯೂ ಲೀನಾಬ್ರಿಟ್ಟೋ ಅವರು ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಸಂದರ್ಭ ಲೋಕಾ ಅದಾಲತ್ ಮೂಲಕ ಸುಮಾರು 10 ಲಕ್ಷ ರೂಪಾಯಿ ತೆರಿಗೆ ಹಣ ವಸೂಲಾತಿಯಾಗಿತ್ತು. ಈ ಬಾರಿ ಅತಿ ಹೆಚ್ಚು ಮೊತ್ತ ಬಾಕಿ ವಸೂಲಾತಿಯಾಗಿದ್ದು ಪುರಸಭೆಯ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಸಮುದಾಯ ಸಂಘಟಕಿ ಉಮಾವತಿ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಸಿಬ್ಬಂದಿಗಳಾದ ಅಬ್ದುಲ್ ರಝಾಕ್, ಜಯಶ್ರೀ, ರಮಣಿ ಮೊದಲಾದವರು ಉಪಸ್ಥಿತರಿದ್ದರು.

Read More

ಬಂಟ್ವಾಳ: ತಾಲೂಕಿನ ತಲಪಾಡಿಯ ಪೊನ್ನೋಡಿಯಲ್ಲಿರುವ ಕರ್ನಾಟಕ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಅನ್ನಭಾಗ್ಯದ ಫಲಾನುಭವಿಗಳಿಗೆ ಸಲ್ಲುವ ಒಟ್ಟು ೩೮೫೦ ಕ್ವಿಂಟಾಲ್ ಅಕ್ಕಿ ಕಳವಾಗಿ ಹಲವು ಸಮಯ ಕಳೆದಿದ್ದು ಇದರ ನೈಜ ಅಪರಾಧಿಗಳನ್ನು ಪತ್ತೆ ಮಾಡುವಂತೆ ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ತಲಪಾಡಿ ಪೊನ್ನೋಡಿಯಲ್ಲಿ ಪಡಿತರ ದಾಸ್ತನಿನಲ್ಲಿ ಕೊರತೆ ಕಂಡು ಬಂದಿರುವ ಬಗ್ಗೆ ಶಾಸಕ ರಾಜೇಶ್ ನಾಕ್ ಅವರು ದ.ಕ. ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಳಿ ನಡೆಸಿ ಪಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ೩೮೫೦ ಕ್ವಿಂಟಲ್ ಅಕ್ಕಿ ಕಳ್ಳತನವಾಗಿರುವುದು ಕಂಡು ಬಂದಿದೆ. ಬಡವರ ಪಡಿತರ ಅಕ್ಕಿಯನ್ನು ಜನರಿಗೆ ನೀಡದೆ ಕಸಿದು ಕಳ್ಳತನದ ಮೂಲಕ ಅವ್ಯವಹಾರ ಮಾಡುವ ಗ್ಯಾಂಗನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ತುಂಗಪ್ಪ ಬಂಗೇರ ಆರೋಪಿಸಿದರು. ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಹ ಅಧಿಕಾರಿಗಳಿಗೆ, ಅದಕ್ಕೆ ಪ್ರೋತ್ಸಾಹಿಸುವ ದಳ್ಳಾಳಿಗಳಿಗೆ ಶಿಕ್ಷೆ ಆಗಲೇ ಬೇಕು ಹಾಗೂ ಅವರನ್ನು…

Read More

ಬಂಟ್ವಾಳ: ತಾಲೂಕು ಸಂಜೀವಿನಿ ಒಕ್ಕೂಟದ ಮುಖ್ಯಪುಸ್ತಕ ಬರಹಗಾರ(ಎಂಬಿಕೆ)ರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್‌ಸಿಆರ್‌ಪಿ)ಗಳ ಯೂನಿಯನ್ ಅಧ್ಯಕ್ಷರಾಗಿ ಕಾವಳಪಡೂರು ಸಂಜೀವಿನಿ ಒಕ್ಕೂಟದ ಎಂಬಿಕೆ ಸೌಮ್ಯ ಯಶವಂತ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೋಳ್ತಮಜಲು ಸಂಜೀವಿನಿ ಒಕ್ಕೂಟದ ಎಂಬಿಕೆ ಭವಾನಿ, ಕಾರ್ಯದರ್ಶಿಯಾಗಿ ರಾಯಿ ಗ್ರಾ.ಪಂ.ಒಕ್ಕೂಟದ ಎಲ್‌ಸಿಆರ್‌ಪಿ ಅಕ್ಷತಾ, ಜತೆ ಕಾರ್ಯದರ್ಶಿ ಕೊಳ್ನಾಡು ಗ್ರಾ.ಪಂ.ಎಲ್‌ಸಿಆರ್‌ಪಿ ಚಂದ್ರಕಲಾ, ಕೋಶಾಧಿಕಾರಿ ಸಜೀಪಮುನ್ನೂರು ಎಂಬಿಕೆ ಸುನೀತಾ ಹಾಗೂ ೧೦ ಮಂದಿ ಮುಖ್ಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

Read More

ಬಂಟ್ವಾಳ: ಸುಮಾರು 100 ವರ್ಷಗಳ ಹಿನ್ನೆಲೆ ಹೊಂದಿರುವ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ ಜೋಡುಕರೆ ಕಂಬಳ ಮಾ.16ರಂದು ನಡೆಯಲಿದ್ದು, ಇದೀಗ ಸಮರ್ಪಕ ಸ್ಥಳಾವಕಾಶ ಕೊರತೆ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಕೊಡಂಗೆ ಎಂಬಲ್ಲಿ ಸುಮಾರು ಐದು ಎಕರೆ ಸರ್ಕಾರಿ ಜಮೀನಿನಲ್ಲಿ ಶಾಶ್ವತ ಕರೆ’ ನಿರ್ಮಿಸಲು ಕಂಬಳ ಸಮಿತಿ ಮಹತ್ತರ ನಿರ್ಧಾರ ಕೈಗೊಂಡಿದೆ ಎಂದು ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಹೇಳಿದ್ದಾರೆ.ಇಲ್ಲಿನ ಹೊಕ್ಕಾಡಿಗೋಳಿ ಕೊಡಂಗೆ ಎಂಬಲ್ಲಿ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳಕ್ಕೆ ಬುಧವಾರ ನಡೆದ ನೂತನ ‘ಶಾಶ್ವತ ಕರೆ ನಿರ್ಮಾಣ’ಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಶಾಶ್ವತ ಕರೆ ನಿರ್ಮಾಣ ಬಳಿಕ ಸ್ಥಳೀಯ ಓಟದ ಕೋಣಗಳಿಗೆ ಕುದಿ ಕಂಬಳ ನಡೆಸಲು ಸಹಕಾರಿಯಾಗಲಿದ್ದು, ಪ್ರೇಕ್ಷಕರಿಗೂ ಸುಸಜ್ಜಿತ ಮೂಲಭೂತ ಸೌಕರ್ಯ ಒದಗಿಸಲು ಸಹಕಾತಿಯಾಗಲಿದೆ ಎಂದರು. ಸ್ಥಳೀಯ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಳದ ಕೃಷ್ಣಪ್ರಸಾದ್ ಅಸ್ರಣ್ಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇಲ್ಲಿನ ಪೂಂಜ ಕ್ಷೇತ್ರ ಮತ್ತು…

Read More

ಬಂಟ್ವಾಳ: ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕ್ರೀಡೋತ್ಸವವು ದಶಂಬರ್ 9 ರಂದು (ಶನಿವಾರ) ಸಂಜೆ ಹನುಮಾನ್ ನಗರದ ವಿಶಾಲ ಮೈದಾನದಲ್ಲಿ ನಿರಂತರ ಎರಡೂವರೆ ತಾಸುಗಳ ಕಾಲ ನಡೆಯಲಿದೆ ಎಂದು ಪುತ್ತೂರು ಶ್ರೀ ವಿವೇಕಾಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ತಿಳಿಸಿದ್ದಾರೆ. ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 40 ವಿಶೇಷ ಚೇತನ ಮಕ್ಜಳು ಸೇರಿದಂತೆ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ತರಗತಿಗಳ ಒಟ್ಟು 3,500 ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಎಂದರು.ವಿದ್ಯಾರ್ಥಿಗಳಿಂದ ಪಥಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್‌ಟಿಕ್‌ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ದ್ವಿಚಕ್ರ-ಏಕಚಕ್ರಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ…

Read More