Author: admin
ಬಂಟ್ವಾಳ: ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಮಾಡುವ ಸೇವೆ ದೇವರಿಗೆ ಮಾಡಿದ ಸೇವೆಯಂತೆ. ಇಂತಹ ಸೇವೆ ಮಾಡುವ ಅವಕಾಶವನ್ನು ದೇವರು ನಮಗೆ ಕರುಣಿಸಿದ್ದು ಅದನ್ನು ಸೇವಾಂಜಲಿ ಸಂಸ್ಥೆಯ ಮೂಲಕ ಮಾಡೋಣ ಎಂದು ರೋಟರಿ ಕ್ಲಬ್ 3181ನ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಹೇಳಿದರು. ಕ್ಷಯ ಮುಕ್ತ ಭಾರತ ನಿರ್ಮಾಣದಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಭಾನುವಾರ ನಡೆದ ಆಹಾರ ದವಸಧಾನ್ಯ ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿಕ್ಷಯ್ ಮಿತ್ರ ಯೋಜನೆ ಆರಂಭಗೊಂಡಂದಿನಿಂದ ಇಲ್ಲಿಯವರೆಗೆ ನಿರಂತರವಾಗಿ ಸೇವಾಂಜಲಿ ರೋಗಿಗಳಿಗೆ ಆಹಾರದ ಕಿಟ್ ವಿತರಿಸಿಕೊಂಡು ಬಂದಿದೆ, ಇದೊಂದು ಶ್ರೇಷ್ಠ ಕಾರ್ಯ ಎಂದರು.ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಮಾಜಿ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಶಕ್ತರಿಗೆ ನೆರವಾಗುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ. ಕ್ಷಯ ರೋಗ ಸ್ವಯಂಕೃತ ಅಪರಾಧದಿಂದ ಬರುವಂತದಲ್ಲ, ಸರಿಯಾದ…
ಬಂಟ್ವಾಳ: ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಇದರ ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆಯಿತು.ಭಾರತ್ ಬೀಡಿ ವರ್ಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಆನಂದ ಜಿ.ಪೈ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.ರೋಟರಿ ಬಂಟ್ಚಾಳ ಟೌನ್ ನ ಮಾಜಿ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಅಧ್ಯಕ್ಷರಾಗಿ, ನೆಲ್ಸನ್ ಕ್ಯಾಸ್ಟಲಿನೋ ಕಾರ್ಯದರ್ಶಿಯಾಗಿ, ಪ್ರಸನ್ನ ರಾವ್ ಕೋಶಾಧಿಕಾರಿಯಾಗಿ ಶ್ಯಾಮ್ ಲಾಲ್ ಉಪಾಧ್ಯಕ್ಷರಾಗಿ, ಕಿರಣ್ ಕುಮಾರ್, ಬ್ರಿಯಾನ್ ಪಿಂಟೋ, ಕಿಶನ್ ಕುಮಾರ್ ಮತ್ತು ಸಾಯಿಬಾಬ ರಾವ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.ನೂತನ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಆಶಯ ಭಾಷಣ ಮಾಡಿ ಮೂರು ವರ್ಷಗಳ ಹಿಂದೆ ಆರ್ ಎಂ ಬಿ ಸ್ಥಾಪಿಸಿ ರೋಟರಿ ಸದಸ್ಯರಲ್ಲಿಯೇ ವ್ಯವಹಾರ ಉಳಿಸಿಕೊಂಡಿದೆ ಎಂದರು. ವ್ಯವಹಾರಕ್ಕಿಂತಲೂ ಮಿಗಿಲಾಗಿ ನಾವು ಮಾಡುವ ಕೆಲಸದಲ್ಲಿ ಸಂತೃಪ್ತಿ ಭಾವ ಮುಖ್ಯವಾಗುತ್ತದೆ. ಘಟಕದ ಯಶಸ್ಸಿಗೆ ಎಲ್ಲರ ಬೆಂಬಲ, ಸಲಹೆ ಸಹಕಾರ ನೀಡುವಂತೆ ವಿನಂತಿಸಿದರು.ಈ ಸಂದರ್ಭ ನೂತನ ಸದಸ್ಯರನ್ನು ಘಟಕಕ್ಕೆ ಸೇರ್ಪಡೆಗೊಳಿಸಲಾಯಿತು.ಮುಖ್ಯ…
ಬಂಟ್ವಾಳ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದವರು ನಡೆಸಿದ ವಿಶೇಷ, ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಯಲ್ಲಿ ಪುತ್ತೂರಿನ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಬಿ.ಸಿ. ರೋಡ್ ಶಾಖೆಗೆ ಶೇ.100 ಪಲಿತಾಂಶ ಬಂದಿರುತ್ತದೆ. ಜೂನಿಯರ್ ನೃತ್ಯ ವಿಭಾಗದಲ್ಲಿ 10 ವಿದ್ಯಾರ್ಥಿಗಳು, ವಿದ್ವತ್ ಪೂರ್ವ ದಲ್ಲಿ ಓರ್ವ ವಿದ್ಯಾರ್ಥಿ ಹಾಗು ವಿದ್ವತ್ ಅಂತಿಮದಲ್ಲಿ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿ ಗಳು ತೇರ್ಗಡೆ ಹೊಂದಿ ಕಲಾಕೇಂದ್ರಕ್ಕೆ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಜೂನಿಯರ್ ವಿಭಾಗದ ಕುಮಾರಿ ಹಶಿಕಾ ಜೆ. ಶೇಕಡಾ 98 ಅಂಕಗಳನ್ನು ಗಳಿಸಿದ್ದು ಉತ್ತಮ ಸಾಧನೆ ಮಾಡಿರುತ್ತಾಳೆ ಎಂದು ಕಲಾಕೇಂದ್ರದ ನೃತ್ಯ ಗುರು ವಿದುಷಿ ರೋಹಿಣಿ ಉದಯ್ ತಿಳಿಸಿರುತ್ತಾರೆ.
ಬಂಟ್ವಾಳ : ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ಮಾತನಾಡಿ, ತುಳು ನಾಡಿನ ಕೃಷಿಕರ ಜಾನಪದ ಕ್ರೀಡೆಯಾಗಿರುವ ಕಂಬಳ ನಿರಂತರವಾಗಿ ನಡೆಯುವಂತಾಗಲು ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.ಸಿದ್ದಕಟ್ಟೆ ವೈದ್ಯ ಡಾ.ಸುದೀಪ್ ಕುಮಾರ್ ಜೈನ್, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ರಾಜ್ಯ ಭಾಲ ಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಭಟ್ ಜಿ.ಕೆ. ಅವರು ಶುಭ ಹಾರೈಸಿದರು.ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನ ಕುಮಾರ ಚೌಟ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಮೂಡುಬಿದಿರೆ ಉದ್ಯಮಿ…
ಬಂಟ್ವಾಳ :ಇಡಿ ಅಧಿಕಾರಿಗಳೆಂದು ನಂಬಿಸಿ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶದ ಉದ್ಯಮಿಯ ಮನೆಗೆ ದಾಳಿ ನಡೆಸಿದ ತಂಡವೊಂದು ಬರೋಬ್ಬರಿ 30 ಲಕ್ಷ ರೂ. ದೋಚಿದ ಘಟನೆ ಜ.3 ರ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ.ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ದಾಳಿ ನಡೆಸಿದಂತೆ ನಟಿಸಿದೆ.ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದ ನಾಟಕ ಮಾಡಿ ಮನೆಯಲ್ಲಿ ಸಿಕ್ಕಿದ ಸುಮಾರು 30 ಲಕ್ಷ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಉನ್ನತ ಅಧಿಕಾರಿಗಳು ಭೇಟಿ ಪರಿಶೀಲಿಸುತ್ತಿದ್ದಾರೆ.
ಬಂಟ್ವಾಳ: ಕಾರ್ಮಿಕರ ಕೊರತೆ, ಅಕಾಲಿಕ ಮಳೆ, ಪ್ರಾಣಿ, ಪಕ್ಷಿಗಳ ಕಾಟ, ಸರಕಾರದ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆಯ ಕೊರತೆಯಿಂದ ತುಳುನಾಡಿನಲ್ಲಿ ಹೆಕ್ಟೇರ್ಗಟ್ಟಲೆ ಭತ್ತ ಬೇಸಾಯದ ಗದ್ದೆಗಳು ಹಡಿಲು ಬೀಳುತ್ತಿವೆ. ಇನ್ನೂ ಹಲವು ಗದ್ದೆಗಳು ಅಡಿಕೆ ತೋಟಗಳಾಗಿ ಬದಲಾಗಿವೆ. ಇಂತಹ ಕಾಲಘಟ್ಟದಲ್ಲಿ ಲಾಭದ ಉದ್ದೇಶವಿಲ್ಲದೆ, ತುಳುನಾಡಿನ ಸಾಂಪ್ರದಾಯಿಕ ಭತ್ತದ ಬೇಸಾಯವನ್ನು ಉಳಿಸಿ ಬೆಳೆಸಬೇಕೆನ್ನುವ ಸದುದ್ದೇಶದಿಂದ ಮಹಿಳೆಯೊಬ್ಬರು ಕಳೆದ ಹಲವು ವರ್ಷಗಳಿಂದ ಭತ್ತದ ಬೇಸಾಯ ಮಾಡಿ ಗಮನ ಸೆಳೆಯುತ್ತಿದ್ದಾರೆ. ಮಂಗಳೂರು ತಾಲೂಕು ವ್ಯಾಪ್ತಿಯ ಕುಪ್ಪೆಪದವು ಬಳಿಯ ನೋಣಾಲುವಿನ ಪ್ರತಿಭಾ ಹೆಗ್ಡೆ ಕಳೆದ ಹಲವು ವರ್ಷಗಳಿಂದ ತಮ್ಮ ಗದ್ದೆಯ ಜೊತೆಗೆ ಇತರ ಗದ್ದೆಗಳಲ್ಲೂ ಬೇಸಾಯ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಕುಳವೂರು ಗುತ್ತಿನ ಸದಾನಂದ ಶೆಟ್ಟಿ ಎಂಬವರಿಗೆ ಸೇರಿದ ಮೂರುವರೆ ಎಕರೆ ವಿಸ್ತೀರ್ಣದ ವಿಶಾಲವಾದ ಕಂಬಳ ಗದ್ದೆಯಲ್ಲಿ ಭತ್ತದ ಸಾಗುವಳಿ ಮಾಡಿದ್ದಾರೆ. ಬಿಳಿ ಜಯ ತಳಿಯ ನೇಜಿಯನ್ನು ನಾಟಿ ಮಾಡಲಾಗಿದ್ದು ಇನ್ನೂ ಎರಡೂವರೆ ಎಕರೆ ಗದ್ದೆಯಲ್ಲಿ ಎಣೆಲು ಸಾಗುವಳಿ ಮಾಡುವ ಸಿದ್ಧತೆಯಲ್ಲಿದ್ದಾರೆ.ರಾಯಚೂರಿನ ಕಾರ್ಮಿಕರು:ಅವಿಭಜಿತ ದಕ್ಷಿಣ ಕನ್ನಡ…
ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ರಾಜನ್ ದೈವ ಶ್ರೀ ಕೊಡಮಣಿತ್ತಾಯ ಹಾಗೂ ಮಹಿಸಂತಾಯ ಮತ್ತು ಪರಿವಾರ ದೈವಗಳಿಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ಕುಪ್ಪೆಪದವಿನ ಪಡಿಲ್ಪದವು ಮೂಡಾಯಿಗಡಿಯಲ್ಲಿ ಪುರಾತನ ವೈಭವದಿಂದ ನಡೆದುಕೊಂಡು ಬರುತ್ತಿದ್ದ ದೊಂಪದ ಬಲಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.ನೇಮೋತ್ಸವಕ್ಕಿಂತ ಪೂರ್ವಭಾವಿಯಾಗಿ ನೇಮೋತ್ಸವ ನಡೆಯುವ ಸ್ಥಳಕ್ಕೆ ದೈವದ ಭಂಡಾರ ಬರುವುದು ಅತ್ಯಂತ ವಿಶೇಷವಾಗಿತ್ತು. ಕಿಲೆಂಜಾರು ಅರೆಮನೆಯಿಂದ ಶ್ರೀ ಕೊಡಮಣಿತ್ತಾಯ, ಮಹಿಸಂತಾಯ ಸಹಿತ ಪರಿವಾರ ದೈವಗಳ ಭಂಡಾರವೂ ಕೊಂಬು, ವಾದ್ಯದ ಹಿಮ್ಮೆಳದೊಂದಿಗೆ ಪಲ್ಲೆಕಿಯಲ್ಲಿ ಹೊರಟು, ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಬರುವ ದೃಶ್ಯ ಅಪೂರ್ವವಾದುದು. ರಸ್ತೆಯನ್ನು ನೀರಿನಿಂದ ಶುಚಿಗೊಳಿಸಿ, ಅಲ್ಲಲ್ಲಿ ಧರಿಗಳನ್ನು ನಿರ್ಮಿಸಿ ಹಣತೆಯ ದೀಪಗಳನ್ನು ಹಚ್ಚಿ, ಗುತ್ತು, ಬಾಳಿಕೆಯವರು, ಗ್ರಾಮಸ್ಥರು ಗ್ರಾಮ ದೈವದ ಭಂಡಾರವನ್ನು ಭಕ್ತಿ ಶ್ರದ್ದೆಯಿಂದ ಸ್ವಾಗತಿಸುವ ಸಂಪ್ರದಾಯ ವಿಶೇಷವಾದುದು. ಕುಪ್ಪೆಪದವು ಮುಖ್ಯ ರಸ್ತೆಗೆ ಭಂಡಾರ ಬರುವ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಾರೆ. ಅಲ್ಲಿಂದ ನೇಮೋತ್ಸವ ನಡೆಯುವ ಸ್ಥಳಕ್ಕೆ ತೆರಳಿ ಭಂಡಾರ ಏರಿ ದೈವದ ದೊಂಪದ ಬಲಿ ನೇಮೋತ್ಸವ…
ಬಂಟ್ವಾಳ: ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಕ್ಲಬ್ ನ 2025 ಸಾಲಿನ ನೂತನ ಅಧ್ಯಕ್ಷ ಜಯರಾಜ್ ಎಸ್ ಬಂಗೇರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.4 ರಂದು ಬಿ.ಸಿ.ರೋಡಿನ ರೋಟರಿ ಗೋಲ್ಡನ್ ಜುಬಿಲಿ ಹಾಲ್ ನಲ್ಲಿನಡೆಯಲಿದೆ.ಬುಧವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿನೀಡಿದ ಅಧ್ಯಕ್ಷ ಜಯರಾಜ್ ಬಂಗೇರ ಅವರು ಮಂಗಳೂರು ಕೆನರಾ ವಾಣಿಜ್ಯ ಮತ್ತುಕೈಗಾರಿಕೆಗಳ ಸಂಸ್ಥೆಯ ಅಧ್ಯಕ್ಷ ಆನಂದ ಜಿ.ಪೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು,ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರು ಪದಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.2013 ರಲ್ಲಿ ಆರಂಭವಾದ ಫೆಲೋಶಿಫ್ ಗುಂಪು ಇದೀಗ ಎಲ್ಲಾ ಖಂಡಗಳಿಗೆ ವಿಸ್ತರಿಸಿದೆ.ಪ್ರಸ್ತುತ 300 ಕ್ಕು ಹೆಚ್ಚು ಕ್ಲಬ್ ಗಳಿವೆ.ಭಾರತದಲ್ಲೇ 100 ಕ್ಲಬ್ ಗಳನ್ನು ಹೊಂದಿದೆ ಎಂದ ಅವರು 2021 ರಂದು ರೋಟರಿಯನ್ ಕಿರಣ್ ಕುಮಾರ್ ಅವರು ಮಂಗಳೂರು ಕ್ಲಬ್ ನ್ನು ಆರಂಬಿಸಿದ್ದರು ಎಂದರು.ಕ್ಲಬ್ ನ ನೂತನ ಕಾರ್ಯದರ್ಶಿಯಾಗಿ ನೆಲ್ಸನ್ ಕ್ಯಾಸ್ಟಲಿನೋ,ಖಜಾಂಚಿಯಾಗಿ…
ಎಡಪದವು: ಉಡುಪಿಯ ನಂದಿಕೂರಿನಿಂದ ಕಾಸರಗೋಡಿಗೆ 400 ಕೆ.ವಿ ವಿದ್ಯುತ್ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಎಸ್ಒಪಿ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಜಮೀನು ಮಾಲಿಕರ ಒಪ್ಪಿಗೆಯನ್ನು ಪಡೆಯದೆ, ಗುತ್ತಿಗೆ ಸಂಸ್ಥೆ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಿ, ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು, ಟವರ್ ನಿರ್ಮಿಸಲು ಹೊಂಡಗಳನ್ನು ತೋಡಿದ ಘಟನೆ ಮಂಗಳೂರು ತಾಲೂಕು ವ್ಯಾಪ್ತಿಯ ಎಡಪದವಿನ ಕೋರ್ಡಲ್ ಎಂಬಲ್ಲಿ ನಡೆದಿದೆ. ಟವರ್ ನಿರ್ಮಿಸುವ ಬಗ್ಗೆ ಯಾವುದೇ ನೋಟೀಸ್ ನೀಡದೆ, ತಮ್ಮ ಅನುಮತಿಯನ್ನು ಪಡೆಯದೇ ಖಾಸಗಿ ಜಮೀನಿನಲ್ಲಿ ಹೊಂಡ ತೋಡಿ, ಖಾಸಗಿ ಜಮೀನಿಗೆ ಸೇರಿದ ಖದೀಂ ಕುಮ್ಕಿ ಜಮೀನಿನಲ್ಲಿ ರಸ್ತೆ ನಿರ್ಮಿಸಿರುವುದರಿಂದ ಜಮೀನಿನ ಮಾಲಕರು ಹೊಂಡಗಳನ್ನು ಮುಚ್ಚಿ ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಡಪದವಿನ ಕೋರ್ಡೆಲ್ ನಿವಾಸಿಗಳಾದ ಶಿವಪ್ರಸಾದ್ ಹಾಗೂ ಜಯಚಂದ್ರ ಸಂತ್ರಸ್ತ ರೈತರು. ಶಿವಪ್ರಸಾದ್ ಅವರ ಖಾಸಗಿ ಜಮೀನಿನಲ್ಲಿ ಅವರ ಅನುಮತಿಯನ್ನು ಪಡೆಯದೇ ಮರಗಳನ್ನು ಕಡಿದು, ಟವರ್ ನಿರ್ಮಿಸಲು ಹೊಂಡಗಳನ್ನು ತೋಡಿದ್ದಾರೆ. ಜಯಚಂದ್ರ ಅವರ ಖದೀಂ ಕುಮ್ಕಿ ಜಮೀನಿನಲ್ಲಿ ಯಾವುದೇ ಅನುಮತಿಯನ್ನು ಪಡೆಯದೆ…
ಬಂಟ್ವಾಳ: ಪುತ್ತೂರು ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರದ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ನೃತ್ಯ ಧಾರ ಸಮಾರಂಭದಲ್ಲಿ ಯಕ್ಷಗಾನದ ಹಾಸ್ಯ ಕಲಾವಿದ ರಸಿಕರತ್ನ ದಿ| ನಯನಕುಮಾರ್ ಸ್ಮರಣಾರ್ಥ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಮರಣೋತ್ತರ ಕಲಾನಯನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮಂಗಳೂರಿನ ಧ್ವನಿ ಮತ್ತು ಬೆಳಕು ಸಂಯೋಜಕ ಮೋಹನ್ ದಂಪತಿಯನ್ನು ಸಮ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಮಾತನಾಡಿ, ನೃತ್ಯ, ಸಂಗೀತ, ಯಕ್ಷಗಾನ ಹಾಗೂ ಭಜನೆಯು ಭಾರತೀಯ ಸಂಸ್ಕೃತಿಯ ಪ್ರಮುಖ ಕಲೆಗಳಾಗಿದ್ದು, ಇದನ್ನು ಮಕ್ಕಳಿಗೆ ಕಲಿಸಿದಾಗ ಅವರು ಸಂಸ್ಕಾರಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆಯನ್ನು ಪೋಷಕರು ಯಾವತ್ತೂ ಕೂಡ ಅರ್ಧದಲ್ಲಿ ನಿಲ್ಲಿಸದೆ ಉತ್ತಮ ಕಲಾವಿದರಾಗಿ ರೂಪಿಸಿ ರಂಗಪ್ರವೇಶ ಮಾಡಿಸಬೇಕು. ಜತೆಗೆ ಮಕ್ಕಳನ್ನು ನಿರಂತರವಾಗಿ ದೇವಸ್ಥಾನಕ್ಕೆ ಹೋಗುವಂತೆ ಪ್ರೇರಣೆ ನೀಡಬೇಕು ಎಂದರು. ಮುಖ್ಯಅತಿಥಿಗಳಾದ ಪತ್ರಿಕೋದ್ಯಮಿ ವಾಲ್ಟರ್ ನಂದಳಿಕೆ ಹಾಗೂ ಬಂಟ್ವಾಳದ ಯುವ ಉದ್ಯಮಿ ಅವಿನಾಶ್ ಕಾಮತ್…








