Author: admin

ಬದುಕಿಗಾಗಿ ಸಂಪತ್ತು ಇರಬೇಕೆ ವಿನಃ ಸಂಪತ್ತಿಗಾಗಿ ಬದುಕಿರಬಾರದು- ಎನ್. ಪ್ರಕಾಶ್ ಕಾರಂತ್ ಬಂಟ್ವಾಳ: ವಿನಯ ಇದ್ದಾಗ ಯೋಗ್ಯತೆ ಬರುತ್ತದೆ, ಯೋಗ್ಯತೆ ಇದ್ದಾಗ ದಾನಧರ್ಮ ಮಾಡಬೇಕೆನಿಸುತ್ತದೆ. ದಾನಧರ್ಮದಿಂದ ಆತ್ಮ ತೃಪ್ತಿ ಸಿಗುತ್ತದೆ. ಆಗ ಮನುಷ್ಯ ಸುಖಿಯಾಗುತ್ತಾನೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಎನ್. ಪ್ರಕಾಶ್‌ಕಾರಂತ್ ಹೇಳಿದರು.ರೋಟರಿ ಬಿ.ಎ.ಸೋಮಯಾಜಿ ಮೆಮೋರಿಯಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ರೋಟರಿ ಕ್ಲಬ್ ಬಂಟ್ವಾಳ ಕ್ಕೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಪತ್ತು ಇರುವುದು ಹರಿಯಲು, ಬದುಕಿಗಾಗಿ ಸಂಪತ್ತು ಇರಬೇಕೆ ವಿನಃ ಸಂಪತ್ತಿಗಾಗಿ ಬದುಕಿರಬಾರದು. ಅದನ್ನು ರೋಟರಿ ಸಂಸ್ಥೆ ಕಲಿಸಿಕೊಡುತ್ತದೆ ಎಂದರು. ಜಿಲ್ಲಾ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಮಾತನಾಡಿ ರೋಟರಿ ಕ್ಲಬ್ ಬಂಟ್ವಾಳದ ಸದಸ್ಯ ರೋಟರಿ ಜಿಲ್ಲೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದು ನಮಗೆ ಹೆಮ್ಮೆ ಎಂದು ತಿಳಿಸಿದರು. ಪ್ರಥಮ ಮಹಿಳೆ ವಾಣಿ ಕಾರಂತ್ ಉಪಸ್ಥಿತರಿದ್ದರು. Advertisement Advertisement ಈ ಸಂದರ್ಭ ಫಲಾನುಭವಿಗಳಿಗೆ ಆರ್ಥಿಕ ಸಹಕಾರ ನೀಡಲಾಯ. ಮೇಜರ್ ಡೋನರ್ ಮತ್ತಿತರ ದೇಣಿಗೆ…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಜೆಸಿಐ ಬಂಟ್ವಾಳ ಇದರ ಆಶ್ರಯದಲ್ಲಿ, ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಂಯೋಗದೊಂದಿಗೆ 123 ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ, ರಿಕ್ಷಾ ಚಾಲಕರ ಸಂಘದ ನೀಲನ್ ಡಿಸೋಜ, ಪೊಲೀಸ್ ಸಿಬ್ಬಂದಿ ಪ್ರಮೋದ್, ನೃತ್ಯಗುರು,‌ ವಿದೂಷಿ ಮಂಜುಳಾ ಸುಬ್ರಹ್ಮಣ್ಯ ಸ್ವಯಂ ರಕ್ತದಾನ ಮಾಡುವ ಶಿಬಿರಕ್ಕೆ ಚಾಲನೆ ನೀಡಿದರು.ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಂಜೀವ ಪೂಜಾರಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ವು ಕಳೆದ 29 ವರ್ಷಗಳಿಂದ ರಕ್ತದಾನ ಶಿಬಿರ ನಡೆಸಿಕೊಂಡು ಬರುತ್ತಿದ್ದು ಈವರೆಗೆ 123 ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು. ಪ್ರತಿಯೊಬ್ಬ ವ್ಯಕ್ತಿಯ ಮೈಯಲ್ಲಿ ಹರಿಯುವ ರಕ್ತ ಒಂದೇ. ಆದ್ದರಿಂದ ಜಾತಿ ಧರ್ಮದ ಬೇಧವಿಲ್ಲದೆ ಎಲ್ಲರೂ ಈ ರಕ್ತದಾನ ಮಾಡಬೇಕು, ಇದು ದೇವರು ಮೆಚ್ಚುವ ಕೆಲಸ ಎಂದರು. ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ಕೃಷ್ಣ ಕುಮಾರ್ ಪೂಂಜ ಅವರ…

Read More

ಕರ್ನಾಟಕ ರಾಜ್ಯದಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ರಾಷ್ಟ್ರ ಪ್ರೇಮ ಮೂಡಬೇಕು, ರಾಷ್ಟಿಯತೆ ಜಾಗೃತಿ ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಎಳೆಯ ವಯಸ್ಸಿನ ಮಕ್ಕಳಿಂದಲೇ ಇದು ಪ್ರೇರಣೆ ಗೊಳ್ಳಬೇಕು ಎಂಬುದಾಗಿ ಮನಗಂಡ ಬಿಜೆಪಿ ಸರಕಾರವು ರಾಷ್ಟ್ರ ಭಕ್ತರಾದ ವೀರ ಸಾವರ್ಕರ್ ಕುರಿತು ಚಕ್ರವರ್ತಿ ಸೂಲಿಬೆಲೆ ರಚಿಸಿದ ಪಾಠ ರಾಜಗುರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಡಗೇವಾರ್ ಭಾಷಣದ ತುಣುಕಾದ “ಆದರ್ಶ ಪುರುಷ ಯಾರಾಗಬೇಕು ಸುಖ್ ದೇವ್, ಭಗತ್ ಸಿಂಗ್ ಕುರಿತಾದ ತಾಯಿ ಭಾರತೀಯರ ಅಮರ ಪುತ್ರರು ಮತ್ತು ಶತಾವಧಾನಿ ಗಣೇಶ್ ರವರ ಯಜ್ಞಯುಗಾದಿಇಂತದೆಲ್ಲ ಭಾರತೀಯ ಪರಂಪರೆ ಯನ್ನು ರಾಜ್ಯದ ಜನರಿಗೆ ಪುನರಪಿ ತಿಳಿಯ ಪಡಿಸುವ ಬಹುಜನಪಯೋಗಿ ಅಭಿವ್ಯಕ್ತಿತ್ವದ ಪಾಠಗಳನ್ನು ಕೈ ಬಿಡುವ ನಿರ್ಧಾರ ಮಾಡಿರುವುದು ರಾಷ್ಟ್ರ ದ್ರೋಹ ವಲ್ಲದೇ ಬಹು ಸಂಖ್ಯಾತ ಹಿಂದುಗಳ ಮನೋ ಭಾವನೆಗಳಿಗೆ ದಕ್ಕೆ ತರುವ ಕೆಲಸವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ರವರು ಪತ್ರಿಕಾ ಹೇಳಿಕೆ ಮೂಲಕ ಕರ್ನಾಟಕ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.…

Read More

ಸರ್ಕಾರದ ಉಚಿತ ಪ್ರಯಾಣದಿಂದ ಗ್ರಾಮೀಣ ಭಾಗದ ಮಹಿಳೆಯರು ವಂಚಿತ : ಎಂ. ತುಂಗಪ್ಪ ಬಂಗೇರ ಬಂಟ್ವಾಳ: ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದರಿಂದ ಇತರ ಖಾಸಗಿ ವಾಹನಗಳ ಮಾಲಕರು ಕಂಗಲಾಗಿ ಹೋಗಿದ್ದಾರೆ. ಕಾರು, ರಿಕ್ಷಾ, ಇನ್ನಿತರ ಖಾಸಗಿ ವಾಹನ ಮಾಲೀಕರ ಬದುಕಿಗೆ ಈ ಯೋಜನೆ ಮಾರಕವಾಗಿದೆ. ಸರ್ಕಾರ ಅವರ ಬದುಕಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು ಅಥವಾ ಮಾಸಿಕ ಪರಿಹಾರ ಹಣವನ್ನು ನೀಡಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ಸರಕಾರವನ್ನು ಆಗ್ರಹಿಸಿದರು. Advertisement Advertisement ಶನಿವಾರ ಬಿ.ಸಿ. ರೋಡು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಸಂಚರಿಸುವ ಶ್ರೀಮಂತ ಮಹಿಳೆಯರಿಗೆ ಮಾತ್ರ ಲಭಿಸಿದೆ. ಗ್ರಾಮೀಣ ಭಾಗದ ಮಹಿಳೆಯರು ಇದರಿಂದ ವಂಚಿತರಾಗಿದ್ದಾರೆ. ತಾಲೂಕಿನ ಗ್ರಾಮೀಣ ಭಾಗಗಳಾದ ಬಿ.ಸಿ.ರೋಡಿನಿಂದ ಪೊಳಲಿ, ಸಿದ್ದಕಟ್ಟೆ, ವಾಮದಪದವು, ಶಂಬೂರು, ಮಂಚಿ, ಸಜೀಪ, ಚೇಳೂರು ಇತರ ಕಡೆಗೂ ಸರ್ಕಾರಿ ಬಸ್ಸು…

Read More

ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಸರ್ಕಾರದ ನಿರ್ಧಾರ ಖಂಡನೀಯ: ರಾಜೇಶ್ ನಾಯ್ಕ್ ಬಂಟ್ವಾಳ: ಬಲತ್ಕಾರದ ಮತಾಂತರವನ್ನು ತಡೆಗಟ್ಟುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಜನಪರವಾದ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದತಿ, ಶಾಲಾ ಪಠ್ಯಪುಸ್ತಕದಿಂದ ಸಾವರ್ಕರ್ ಹಾಗೂ ಹೆಗಡೇವಾರ ಅವರ ವಿಷಯವನ್ನು ಕೈ ಬಿಟ್ಟಿರುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಖಂಡಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದರು. Advertisement Advertisement ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿಒರ್ವ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ ಕಾನೂನು ಬದ್ದವಾಗಿ ಯಾವುದೇ ಧರ್ಮಕ್ಕೆ ಮತಾಂತರ ಹೊಂದುವ ಅವಕಾಶ ಇದೆ. ಆದರೆ ಬಲತ್ಕಾರ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ಜಾರಿಗೆ ತಂದಿತ್ತು. ಇದೀಗ ಅದನ್ನು ಈಗಿನ ಸರಕಾರ ಹಿಂಪಡೆದಿರುವುದರಿಂದ ಸಮಾಜದಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದು. ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು…

Read More

ಬಂಟ್ವಾಳ: ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ ಇವರ ನೂತನ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಬಿ.ಸಿ.ರೋಡಿನ ಸ್ಮಾರ್ಟ್‌ಸಿಟಿ ಕಟ್ಟಡದ ನೆಲ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಬಿ ಸಿ.ರೋಡಿನಲ್ಲಿ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ ಬಿ.ಸಿ.ರೋಡಿನಲ್ಲಿ ಈಗಾಗಲೇ ಆನಿಯಾ ದರ್ಬಾರ್ ಹೋಟೇಲ್ ಕಾರ್ಯಚರಿಸುತ್ತಿದ್ದು ಶುಚಿ ರುಚಿಯಾದ ಊಟೋಪಚಾರ ಹಾಗೂ ಗ್ರಾಹಕ ಸ್ನೇಹಿ ಸೇವೆಯಿಂದಾಗಿ ತಾಲೂಕಿನಾದ್ಯಂತ ಮನೆಮಾತಾಗಿದೆ. ಇದೀಗ ಇದೇ ಸಂಸ್ಥೆಯ ಹವಾನಿಯಂತ್ರಿತ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಗ್ರಾಹಕ ಸೇವೆಗಾಗಿ ಸ್ಮಾರ್ಟ್‌ಸಿಟಿ ಕಟ್ಟಡದಲ್ಲಿ ಕಾರ್ಯರಂಭಗೊಂಡಿದೆ. Advertisement Advertisement ಸಯ್ಯದ್ ಹುಸೈನ್ ಬಹಲವಿ ತಂಙಲ್ ಕುಕ್ಕಾಜೆ ನೂತನ ಹೊಟೇಲ್ ಉದ್ಘಾಟಿಸಿದರು. ಈ ಸಂದರ್ಭ ಧರ್ಮಗುರುಗಳಾದ ಇರ್ಷಾದ್ ದಾರಿಮಿ ಅಲ್ ಜಝಾರಿ ಮಿತ್ತಬೈಲ್, ಅಶ್ರಫ್ ಫೈಝಿ, ಖತೀಬರು ಮಿತ್ತಬೈಲ್, ಎಂ.ಕೆ. ಅಝೀಝ್ ಹಮ್ಜದಿ ಮಾವಿನಕಟ್ಟೆ, ಡಾ. ಹಝ್ರತ್ ಫಾಝಿಲ್ ರಝ್ವಿ, ಕಾವಲಕಟ್ಟೆ , ಅಬ್ದುಲ್ ರಝಾಕ್ ಸಖಾಫಿ, ಮಡಂತ್ಯಾರ್, ಹುಸೈನ್ ಸಹದಿ…

Read More

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಇದರ ಬಿ. ವೋಕ್ ವಿಭಾಗದ ಆಶ್ರಯದಲ್ಲಿ ರಾಜ್ಯ ಮಟ್ಟದ ಎಜು ಕಲ್ಚರಲ್ ಫೆಸ್ಟ್ ಬಿ. ವೋಕ್ ಉತ್ಸವ ಜೂನ್ 22 ಹಾಗೂ 23 ರಂದು ಉಜಿರೆಯಲ್ಲಿ ನಡೆಯಲಿದೆ.ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದ್ದು, ಆಕರ್ಷಕ ಬಹುಮಾನಗಳನ್ನೂ ಗೆಲ್ಲಬಹುದು.ಮಾರ್ಕೆಟಿಂಗ್, ಸ್ಟಾರ್ಟ್‌ಅಪ್ ಪಿಚ್, ಬೆಸ್ಟ್ ಸಿ.ಇ.ಓ, ಮೂವಿ ಕ್ವಿಜ್, ಮೂವಿ ಸ್ಪೂಫ್, ಮೂವಿ ಆಕ್ಷನ್, ಮೋಟರ್ ಮೌತ್, ಬಗ್ ಎಪಿಕ್ಸ್, ಟೆಕ್ ಇಟ್ ಔಟ್, ಫ್ಯಾಶನ್ ಶೋ, ಬಿಜಿಎಂಐ ಹಾಗೂ ಗ್ರೂಪ್ ಡ್ಯಾನ್ಸ್ ಸ್ಪರ್ಧೆಗಳು ನಡೆಯಲಿವೆ. ಅದಲ್ಲದೇ, ಬಿ. ವೋಕ್ ಉತ್ಸವದ ಅಂಗವಾಗಿ ರಾಜ್ಯಮಟ್ಟದ ಮುಕ್ತ ಕಿರುಚಿತ್ರ ಸ್ಪರ್ಧೆ, ಸಿನಿಮೋತ್ಸವವೂ ನಡೆಯಲಿಕ್ಕಿದೆ.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 8310545772 / 8618097459 / 9019872866 Advertisement Advertisement

Read More

ಜೂ.20: ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸ್ವತ್ವದ ಆಧಾರದ ಮೇಲೆ ಪುನರುತ್ಥಾನ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣ ಜೂ.20ರಂದು ಮಂಗಳವಾರ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.ಅವರು ಬಿ.ಸಿ.ರೋಡು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿಅಂದು ಬೆಳಿಗ್ಗೆ 10 ಗಂಟೆಗೆ ಪತ್ರಕರ್ತ ಅಜಿತ್ ಹನುಮಕ್ಕನವರ್ ವಿಚಾರ ಸಂಕಿರಣ ಉದ್ಘಾಟಿಸುವರು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸುವರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತವಿಕವಾಗಿ ಮಾತನಾಡುವರು. ಬಳಿಕ 10.45 ರಿಂದ 11.45 ರವರೆಗೆ ಸ್ವತ್ವಯುತ ಭಾರತ ಒಂದು ವಿವೇಚನೆ ಬಗ್ಗೆ ಪತ್ರಕರ್ತ ಅಜೀತ್ ಹನುಮಕ್ಕನವರು, 12 ರಿಂದ 1 ಗಂಟೆಯವರೆಗೆ ಭಾರತೀಯ ಅಭಿವೃದ್ಧಿ ಮಾದರಿಗಳು ವಿಚಾರದ ಬಗ್ಗೆ ಶಿವಮೊಗ್ಗದ ವಿಶ್ರಾಂತ ಪ್ರಾಚಾರ್ಯ ಪ್ರೊ. ಎಂ.ಬಿ. ಕುಮಾರಸ್ವಾಮಿ, 1.45 ರಿಂದ 2.45ರವರೆಗೆ ಆಡಳಿತ ಮತ್ತು…

Read More

ಬಂಟ್ವಾಳ: ಸಬ್ ರಿಜಿಸ್ಟ್ರಾರ್ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ಮತ್ತು ಲಂಚಾವತಾರ ತಪ್ಪಿಸಲು ಕಂದಾಯ ಇಲಾಖೆ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶದ ಉದ್ಘಾಟನಾ ಸಮಾರಂಭ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿರುವ ಉಪನೋಂದಾಣಿ ಕಚೇರಿಯಲ್ಲಿ ಗುರುವಾರ ನಡೆಯಿತು.ದ.ಕ ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್ ಪಾಷಾ ಎಸ್. ಕಾವೇರಿ 2.0 ತಂತ್ರಾಂಶ ಉದ್ಘಾಟಿಸಿದರು.ಬಂಟ್ವಾಳ ಉಪನೋಂದಣಾಧಿಕಾರಿ ಕವಿತಾ ಎ.ಸಿ. ಉಪಸ್ಥಿತರಿದ್ದರು. ಪ್ರಥಮ ನೋಂದಣಿಯನ್ನು ಆಶಿಕ್ ಕುಕ್ಕಾಜೆ ಅವರು ಶೌಕತ್ ಅಲಿ ಅವರಿಗೆ ದಸ್ತಾವೇಜು ನೋಂದಾಯಿಸಿದರು. ಈ ಸಂದರ್ಭ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. Advertisement Advertisement

Read More

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಈ ವರ್ಷದಲ್ಲಿ ಸಾಧಿಸಿದ ಅತ್ಯುತ್ತಮ ಸೇವಾ ಕಾರ್ಯಗಳಿಗೆ ಪ್ಲಾಟಿನಂ ಪ್ಲಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಇತ್ತೀಚೆಗೆ ಮಂಗಳೂರಿನ ಸೈಂಟ್ ಸೆಬೆಸ್ಟಿಯನ್ ಹಾಲ್ ನಲ್ಲಿ ನಡೆದ ಸಂಪ್ರಾಪ್ತಿ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಚಿತ್ರನಟಿ ನಿರೀಕ್ಷಾ ರೈ ಅವರಿಂದ ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಜಿಲ್ಲಾ ಪ್ರಥಮ ಮಹಿಳೆ ವಾಣಿ ಕಾರಂತ್, ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ನಿಕಟಪೂರ್ವ ಗವರ್ನರ್ ರವೀಂದ್ರ ಭಟ್, ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಕ್ಲಬ್ ಕಾರ್ಯದರ್ಶಿ ಭಾನುಶಂಕರ್ ಬನ್ನಿಂತ್ತಾಯ, ಸದಸ್ಯರಾದ ಮಹಮ್ಮದ್ ವಳವೂರು, ಸಂಜೀವ ಪೂಜಾರಿ, ರಿತೇಶ್ ಬಾಳಿಗ, ವಸಂತ ಪ್ರಭು, ಮುರಳೀಧರ ಪ್ರಭು, ಕರುಣಾಕರ ಶೆಟ್ಟಿ, ಸದಾಶಿವ ಬಾಳಿಗ, ಡಾ. ಆತ್ಮರಂಜನ್ ರೈ, ರಾಮಣ್ಣ ರೈ, ಡಾ. ಪ್ರತಿಭಾ ರೈ, ಮಾಧವ ಶೆಣೈ, ಸ್ಟೀವನ್ ಉಪಸ್ಥಿತರಿದರು. Advertisement Advertisement

Read More