Author: admin

ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟ್ವಾಳ: ತಾಲೂಕು ಬಿಲ್ಲವ ಮಹಿಳಾ ಸಮಿತಿ ಇದರ ನೂತನ ಅಧ್ಯಕ್ಷೆ ಶೈಲಜಾ ರಾಜೇಶ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಸಭಾಂಗಣದಲ್ಲಿ ಭಾನುವಾರ ನಡೆಯಿತು. Advertisement ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾಲತಾ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಲ್ಲವ ಮಹಿಳೆಯರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂದೆ ಇದ್ದಾರೆ ಇದರ ಜೊತೆಗೆ ಸಾಹಿತ್ಯ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಇದಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಮಹಿಳಾ ಸಮಿತಿಯ ಮೂಲಕ ಹಮ್ಮಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು. ಪ್ರತಿಯೊಬ್ಬ ವ್ಯಕ್ತಿಗೂ ತಾಯಿ ಪ್ರೇರಣಾಶಕ್ತಿ. ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ತಾಯಂದಿರದ್ದು ಎಂದು ತಿಳಿಸಿದರು. ನೂತನ ಅಧ್ಯಕ್ಷೆ ಶೈಲಜಾ ರಾಜೇಶ್ ಮಾತನಾಡಿ ಹಿಂದೆ ಪ್ರೋತ್ಸಾಹದ ಕೊರತೆಯಿಂದ ಮಹಿಳೆಯರಿಗೆ ಅವಕಾಶಗಳು ಕಡಿಮೆ ಇತ್ತು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ನಮ್ಮ ಪ್ರತಿಭೆಯ ಮೂಲಕ ಯಾವ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. Advertisement ಸಮಾಜಮುಖಿ ಸೇವೆಯಲ್ಲೂ…

Read More

ಕಲಾವಿದನ ಕೈ ಚಳಕ,ತೆಂಗಿನ ಗೆರಟೆಯಲ್ಲಿ ಅರಳಿದ ಕಲಾ ಕುಸುಮ ಬಂಟ್ವಾಳ: ಉಪಯೋಗದ ಬಳಿಕ ವ್ಯರ್ಥವಾಗಿ ಹೋಗುವ, ಉರುವಲಾಗಿ ಬಳಸಲ್ಪಡುವ ತೆಂಗಿನ ಗೆರಟೆ ಕಲಾವಿದನ ಕೈ ಚಳಕದಲ್ಲಿ ಸುಂದರ ಕಲಾಕೃತಿಗಳಾಗಿ ಮೂಡಿಬಂದಿದೆ. ತೆಂಗಿನ ಗೆರಟೆಯಿಂದ ಇಂತಹ ಕಲಾಕೃತಿಗಳನ್ನು ರಚಿಸಬಹುದೇ ಎಂದು ಅಚ್ಚರಿ ಪಡುವಂತೆ ಬಗೆಬಗೆಯ ಕಲಾಕೃತಿಗಳು ರಚನೆಯಾಗಿದೆ. ದಿನ ಬಳಕೆಯ ವಸ್ತುಗಳಾಗಿ, ಮನೆಯ ಅಂದ ಹೆಚ್ಚಿಸುವ ಕಲಾಕುಸಮಗಳಾಗಿ ತೆಂಗಿನ ಚಿಪ್ಪು ಆಕರ್ಷಕ ರೂಪ ಪಡೆದುಕೊಂಡಿದೆ. ಇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಪನೆ ಎಂಬಲ್ಲಿನ ನಿವಾಸಿ ಸಚ್ಚೀಂದ್ರ ತೆಂಗಿನ ಗೆರಟೆಯಲ್ಲಿ ಕಲಾಕೃತಿಯನ್ನು ರಚಿಸುವ ಕಲಾವಿದ. ಇವರು ಮೂಲತಃ ಕಲಾಕಾರರಲ್ಲ. ಕಲಾವಿದರ ಕುಟುಂಬದ ಹಿನ್ನಲೆಯೂ ಇವರಿಗಿಲ್ಲ. ಕೋವಿಡ್ ಲಾಕ್‌ಡೌನ್ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿದ್ದ ಸಂದರ್ಭ ತೆಂಗಿನ ಗೆರಟೆಯಲ್ಲಿ ಮಾಡಿದ್ದ ಚಹಾ ಕಪ್ ನೋಡಿ ಅದರಂತೆ ತಾನು ಮಾಡಬೇಕೆಂದು ಪ್ರಯತ್ನಿಸಿ ಯಶಸ್ಸು ಪಡೆದಾಗ ಇಂತಹ ಬಗೆಬಗೆಯ ಕಲಾಕೃತಿಗಳನ್ನು ರಚಿಸಲು ತೀರ್ಮಾನಿಸಿದರು. ಕಟ್ಟಡ ನಿರ್ಮಾಣದ ಮೇಸ್ತ್ರೀ ಕೆಲಸ ನಿರ್ವಹಿಸುವ ಸಚ್ಚೀಂದ್ರ ಅವರು ಬಳಿಕ ತನ್ನ ಬಿಡುವಿನ ವೇಳೆಯಲ್ಲಿ…

Read More

ಪುದು: ಉಪಚುನಾವಣೆ ಫಲಿತಾಂಶ ಪ್ರಕಟ ಬಂಟ್ವಾಳ: ಪುದು ಗ್ರಾಮ ಪಂಚಾಯಿತಿನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಪಾಡಿ ಗೆಲುವು ಸಾಧಿಸಿದ್ದಾರೆ. ಒಟ್ಟು 572 ಮತ ಚಲಾವಣೆಯಾಗಿದ್ದು ಅಬ್ದುಲ್ ಲತೀಫ್ 39,ಮುಹಮ್ಮದ್ ಅಶ್ರಫ್ ಮಾರಿಪಳ್ಳ 140, ಮೊಹಮ್ಮದ್ ಇಕ್ಬಾಲ್ ಪಾಡಿ 385 ಮತಗಳನ್ನು ಪಡೆದಿದ್ದಾರೆ. 8 ಮತಗಳು ತಿರಸ್ಕೃತಗೊಂಡಿದೆ. Advertisement Advertisement ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿಚುನಾವಣೆ ಅಧಿಕಾರಿತಾ.ಪಂ. ಇಒ ರಾಜಣ್ಣ,ಸಹಾಯಕ ಚುನಾವಣಾಧಿಕಾರಿ ಪಂಚಾಯತಿ ಪಿಡಿಓ ಹರೀಶ್ ಕೆ.ಎ , ಎಣಿಕೆ ಮೇಲ್ವಿಚಾರಕ, ಉಪತಹಶೀಲ್ದಾರ್ ನವೀನ್ ಬೆಂಜನಪದವು, ಎಣಿಕೆ ಸಹಾಯಕರಾದ ಕಂದಾಯ ನಿರೀಕ್ಷಕರು ಸೀತಾರಾಮ ಕಮ್ಮಾಜೆ, ಜೆ.ಜನಾರ್ದನ, ಶ್ರೀ ಕಲಾ, ಹಾಗೂ ಸುಂದರ, ಕಿರಣ್, ಚಂದು ಮತ ಎಣಿಕೆ ಪ್ರಕ್ರಿಯೆ ನಡೆಸಿಕೊಟ್ಟರು

Read More

ಅರಳ ಗ್ರಾಮದಲ್ಲಿ ಗುಡ್ಡ ಕುಸಿತ ಬಂಟ್ವಾಳ: ಅರಳ ಗ್ರಾಮದ ದೇಂಬುಡೆ ಎಂಬಲ್ಲಿ ಗುಡ್ಡ ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ನಿವಾಸಿ ರುಡಾಲ್ಫ್ ಮರ್ಕ್ ಲೋಬೋ ಅವರ ಮನೆ ಬಳಿ ಈ ಘಟನೆ ನಡೆದಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಮಣ್ಣು ಕುಸಿಯದಂತೆ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ಭಾರಿ ಮತ್ತೆ ಮೇಲ್ಭಾದ ಗುಡ್ಡ ಕುಸಿದು ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಗುಡ್ಡದಲ್ಲಿದ್ದ ಬಂಡೆಕಲ್ಲುಗಳು ಮಣ್ಣಿನೊಂದಿಗೆ ಉದುರಿ ಬೀಳುತ್ತಿದೆ. ಅರಳ ಗ್ರಾಮದಲ್ಲಿ ಗುಡ್ಡ ಕುಸಿತ Advertisement Advertisement

Read More

ಅಮ್ಟಾಡಿ: ಮಹಲ್ತೋಟ ಬಳಿ ರಸ್ತೆಗೆ ಉರುಳಿದ ಬೃಹತ್ ಕಲ್ಲು ಬಂಟ್ಚಾಳ: ಭಾರಿ ಮಳೆಗೆ ಅಮ್ಟಾಡಿ ಗ್ರಾಮದ ಮಹಲ್ ತೋಟ ರಸ್ತೆ ಬಳಿ ಬೃಹತ್ ಗಾತ್ರದ ಕಲ್ಲೊಂದು ರಸ್ತೆಗೆ ಉರುಳಿ ಬಿದ್ದಿದೆ. ಲೊರಟ್ಟೊ ಪದವಿನಿಂದ ಮಹಲ್ ತೋಟ ಸಂಪರ್ಕಿಸುವ ರಸ್ತೆ ಇದಾಗಿದ್ದು ಬೆಳಿಗ್ಗೆ 8.30 ರ ವೇಳೆಗೆ ಈ ಘಟನೆ ನಡೆದಿದೆ. ಪ್ರತಿದಿನ ಈ ರಸ್ತೆಯ ಮೂಲಕ ಶಾಲಾ ವಿದ್ಯಾರ್ಥಿಗಳು ತೆರಳುತ್ತಿದ್ದು ಶಾಲೆಗೆ ರಜೆ ಇದ್ದುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಅಮ್ಟಾಡಿ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಕಲ್ಲು ತೆರವು ಕಾರ್ಯ ಕೈ ಗೊಂಡಿದ್ದಾರೆ. ಅಮ್ಟಾಡಿ: ಮಹಲ್ತೋಟ ಬಳಿ ರಸ್ತೆಗೆ ಉರುಳಿದ ಬೃಹತ್ ಕಲ್ಲು Advertisement Advertisement

Read More

ಬಂಟ್ವಾಳ: ಜೆಸಿಐ ಶಂಕರನಾರಾಯಣದ ಆತಿಥ್ಯದಲ್ಲಿ ನಡೆದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ, ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಬಂಟ್ವಾಳದ ಉಪಾಧ್ಯಕ್ಷ ವಚನ್ ಶೆಟ್ಟಿ ಯವರಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ನಾಗರಾಜ್ ಪೂಜಾರಿ, ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ., ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಸದಸ್ಯರಾದ ಸಂತೋಷ್ ಜೈನ್, ಉಮೇಶ್ ಪೂಜಾರಿ ಉಪಸ್ಥಿತರಿದ್ದರು. Advertisement

Read More

ರೇಶ್ಮಾ ಭಟ್ ಅವರಿಗೆ ನುಗ್ಗೆಹಳ್ಳಿ ಪಂಕಜ ಪ್ರಶಸ್ತಿ ಬಂಟ್ವಾಳ: ಅತ್ತುತ್ತಮ ಹಾಸ್ಯಕೃತಿಗಾಗಿ ಕರ್ನಾಟಕ ಲೇಖಕಿಯರ ಸಂಘವು ಪ್ರತಿ ವರ್ಷ ನೀಡುವ ಪ್ರತಿಷ್ಠಿತ ‘ನುಗ್ಗೆಹಳ್ಳಿ ಪಂಕಜ ಪ್ರಶಸ್ತಿ’ಗೆ ಬಿ.ಸಿ.ರೋಡ್ ನಿವಾಸಿ ಹಾಗೂ ಉಪನ್ಯಾಸಕಿ ರೇಶ್ಮಾ ಭಟ್ ಅವರ ‘ಲಘುಬಗೆ’ ಕೃತಿ ಆಯ್ಕೆಯಾಗಿದೆ. ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರು ವಿವಿಧ ಪ್ರಶಸ್ತಿಗಳನ್ನು ಪಡೆದವರ ಪಟ್ಡಿಯನ್ನು ಬಿಡುಗಡೆ ಮಾಡಿದರು. 2021 ರಲ್ಲಿ ಪ್ರಕಟವಾದ ಅತ್ಯುತ್ತಮ ಹಾಸ್ಯಕೃತಿ ಎನ್ನುವ ನೆಲೆಯಲ್ಲಿ ಈ ಪ್ರಶಸ್ತಿಯು ಸಂದಿದೆ. ಇದೆ ಜುಲೈ 23 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. Advertisement Advertisement

Read More

ಎಸ್‌ಕೆಪಿಎ ಬಂಟ್ವಾಳ ವಲಯದ ಅಧ್ಯಕ್ಷರಾಗಿ ಕಿಶೋರ್ ಯಸ್. ಕುಮಾರ್ ಆಯ್ಕೆ ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ಅಧ್ಯಕ್ಷರಾಗಿ ಪ್ರೀತಿ ಸ್ಟುಡಿಯೋದ ಮಾಲಕ ಕಿಶೋರ್ ಯಸ್. ಕುಮಾರ್ ಆಯ್ಕೆಯಾಗಿದ್ದಾರೆ.ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ಮಹಾಸಭೆ ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಜರಗಿತು. ಈ ಸಭೆಯಲ್ಲಿ 2023-25 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್‌ಕೆಪಿಎ ಬಂಟ್ವಾಳ ವಲಯದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, Advertisement ಎಸ್‌ಕೆಪಿಎ ಬಂಟ್ವಾಳ ವಲಯದ ಕೋಶಾಧಿಕಾರಿ ವರುಣ್ ಕಲ್ಲಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಡ್ಕ, ಗೌರವ ಅಧ್ಯಕ್ಷರಾಗಿ ಹರೀಶ್ ಕುಂದರ್ ಉಪಾದ್ಯಕ್ಷರುಗಳಾಗಿ ಲಕ್ಷ್ಮಣ್ ಮೆಲ್ಕಾರ್ ಹಾಗೂ ವಿಕೇಶ್ ಬಂಟ್ವಾಳ ಕೋಶಾಧಿಕಾರಿಯಾಗಿ ವರುಣ್ ಕಲ್ಲಡ್ಕ, ಜತೆ ಕಾರ್ಯದರ್ಶಿಯಾಗಿ ರಿಚರ್ಡ್ ಹಾಗೂ ವಿವೇಕ್ ಅಮ್ಟಾಡಿ , ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಕಲ್ಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಮೋಹನ್ ಏಕದಂತ ಹಾಗೂ ಹರೀಶ್ ಕನ್ಯಾನ, ಸಾಂಸ್ಕೃತಿಕ…

Read More

ಬಂಟ್ವಾಳ: ಅಲ್ಲಿ ಪ್ರಾರ್ಥನೆ ಇತ್ತು. ಅರ್ಚಕರಿರಲಿಲ್ಲ. ಮಹಾಸಭೆ ನಡೆಯಿತು, ಅಧಿಕಾರಿಗಳಾರೂ ಇರಲ್ಲಿಲ್ಲ. ತಾಯಂದಿರ ಪ್ರೀತಿ ಇತ್ತು, ಅವರೆಲ್ಲಾ ಒಂದೇ ಮನೆಯವರಾಗಿರಲ್ಲಿಲ್ಲ… ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ನಿಷ್ಕಲ್ಮಶ ಅಂತ:ಕರಣದ ಜನರು, ಮನೊಲ್ಲಾಸದ ವಾತಾವರಣ. ಮನೋರಂಜನೆಯ ಆಟಗಳು! ಮಕ್ಕಳ ಜೊತೆ ಮಕ್ಕಳಾಗಿ ಕುಣಿದ ಹಿರಿಯರು, ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ತಮ್ಮ ಮನೆಗಳಿಂದ ತಂದ ಅಪರೂಪದ ತಿಂಡಿಗಳಿದ್ದವು ಜೊತೆಗೆ ತನ್ನವರಿಗೆ ಹಂಚುವ ಮಧುರ ಭಾವನೆಗಳು ಅಲ್ಲಿ ತುಂಬಿದ್ದವು…ಇದು ಪೊಯಿಲೋಡಿ ಕುಟುಂಬಿಕರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು. ಕುಟುಂಬ ಪದ್ದತಿ ದೂರವಾಗಿ ವಿಭಕ್ತ ಕುಟುಂಬಗಳೇ ತುಂಬಿಕೊಂಡಿರುವ ಈ ಕಾಲಘಟ್ಟದಲ್ಲಿ ಕುಟುಂಬಿಕರನ್ನು ಜೊತೆ ಸೇರಿಸಲು ಹೀಗೂ ಕಾರ್ಯಕ್ರಮ ಆಯೋಜಿಸಬಹುದು ಎನ್ನುವುದಕ್ಕೆ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸಾಕ್ಷಿಯಾಯಯಿತು. Advertisement Advertisement ಪೊಯಿಲೋಡಿ ಬಂಜನ್ ಕುಟುಂಬಸ್ಥರ ದೈವಗಳ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಸಭೆ ಮತ್ತು ಕುಟುಂಬ ಸಮ್ಮಿಲನ-23 ಕಾರ್ಯಕ್ರಮ ಭಾನುವಾರ ಬಂಟ್ವಾಳ ನಾವೂರಿನ ಪೊಯಿಲೋಡಿ ಮನೆಯಲ್ಲಿ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬಹಳ ಅರ್ಥಪೂರ್ಣವಾಗಿ…

Read More

ಬಂಟ್ವಾಳ: ಜೆಸಿಐ ಬಂಟ್ವಾಳ ಮತ್ತು ಸಾಯಿ ಕಿಡ್ಝೋನ್ ಸ್ಕೂಲ್ ನ ಆಶ್ರಯದಲ್ಲಿ ವನಮಹೋತ್ಸವ ಆಚರಿಸಲಾಯಿತು. ಶಾಲಾ ವಠರದಲ್ಲಿ ಗಿಡ ಗಳನ್ನು ನೆಟ್ಟು ಸುಮಾರು 40 ಮಂದಿ ಪೋಷಕರಿಗೆ ವಿವಿಧ ತಳಿಯ ಗಿಡಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಜೆಸಿಐ ಬಂಟ್ವಾಳದ ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಸದಸ್ಯ ಉಮೇಶ್ ಪೂಜಾರಿ ಶಾಲಾ ಸಂಚಾಲ ಐತಪ್ಪ ಪೂಜಾರಿ, ಪಿಟಿಎ ಅಧ್ಯಕ್ಷ ಅಭಿಲಾಷ್ ಭಟ್, ಉಪಾಧ್ಯಕ್ಷೆ ಶಿಲ್ಪಾ ತೇಜಸ್ , ಜ್ಞಾನೇಶ್ ರಾವ್, ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

Read More