Author: admin
ಬಂಟ್ವಾಳ: ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ 18 ಗುರುವಾರ ಪರ್ಯಂತ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ ಪಂಚಾರತಿ ಸೇವೆಯ 10ನೇ ಗುರುವಾರದ ಪಂಚಾರತಿ ಸೇವೆ ನಡೆಯಿತು.ಪಂಚ ಅಭ್ಯಾಗತರಾಗಿ ತುಳುಕೂಟ ಬಂಟ್ವಾಳದ ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಪ್ರಗತಿಪರ ಕೃಷಿಕರಾದ ರಮೇಶ್ ನಾಯ್ಕ್ ಕೋಮಾಲಿ, ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮನೋಜ್ ಆಳ್ವ ದಲಂದಿಲ, ಅಮ್ಟೂರು ನರಹರಿ ಇಂಟರ್ಲಾಕ್ ಸಂಸ್ಥೆಯ ಮ್ಹಾಲಕ ಮಾಧವ ಶೆಣೈ ಬೋಳಂಗಡಿ, ನಂದಾವರ ಎಲ್.ವೈ. ಎಂಜಿನಿಯರಿಂಗ್ ವರ್ಕ್ಸ್ನ ಲಕ್ಷ್ಮಣ್ ಗಟ್ಟಿ ನಂದಾವರ ಇವರುಗಳು ಪಂಚಾರತಿ ಬೆಳಗಿ ಶುಭ ಹಾರೈಸಿದರು. ಅಯ್ಯಪ್ಪ ಮಂದಿರದ ಪ್ರಧಾನ ಅರ್ಚಕರುಗಳಾದ ಸಂಜೀವ ಗುರುಸ್ವಾಮಿ ಅಮ್ಟೂರು ಮತ್ತು ಕೃಷ್ಣ ಗುರುಸ್ವಾಮಿ ಮಾರ್ನಬೈಲು, ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಪ್ರಧಾನ ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ,…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯ ಮಾದರಿಯಾದುದು. ನಾವು ನೀಡಿದ ದೇಣಿಗೆ ಸೇವಾಂಜಲಿ ಸಂಸ್ಥೆಯ ಮೂಲಕ ಅರ್ಹ ಫಲಾನುಭವಿಗಳನ್ನು ತಲುಪುತ್ತದೆ ಎಂದು ರೋಟರಿ ಕ್ಲಬ್ ಮೊಡಂಕಾಪುವಿನ ಮಾಜಿ ಅಧ್ಯಕ್ಷ ಡಾ. ಗೋವರ್ಧನ ರಾವ್ ಹೇಳಿದ್ದಾರೆ. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ದವಸಧಾನ್ಯ ವಿತರಿಸಿ ಮಾತನಾಡಿದರು. ಖಾಲಿ ಸ್ಥಳಗಳು ಇದ್ದಲ್ಲಿ ಗಿಡಗಳನ್ನು ನೆಡುವ ಮೂಲಕ ವಾತವರಣದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ ಮಾಡೋಣ ಎಂದರು. ಸೇವಾಂಜಲಿ ಸಂಸ್ಥೆ ಇನ್ನಷ್ಟು ಬೆಳೆಯಲಿ, ಇದರ ಸೇವಾ ಕಾರ್ಯಗಳು ಇನಷ್ಟು ಜನರನ್ನು ತಲುಪಲಿ ಎಂದು ಶುಭ ಹಾರೈಸಿದರು. ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಕುಮಾರ್ ಆರೊಗ್ಯ ಮಾಹಿತಿ ನೀಡಿ ಕ್ಷಯ ರೋಗಿಗಳು ಮಾಸ್ಕ್ ಧರಿಸುವ ಬಗ್ಗೆ, ಕಫ ನಿರ್ವಹಣೆ ಬಗ್ಗೆ ತಿಳಿಸಿದರು ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಅಲೆಕ್ಸಾಂಡರ್ ಲೋಬೋ ಮಾತನಾಡಿ ಕ್ಷಯ ರೋಗಿಗಳು ಪೌಷ್ಟಿಕ ಆಹಾರವನ್ನು ಸೇವಿಸಿದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ…
ಬಂಟ್ವಾಳ: ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಅವರ ಮುಂದಾಳತ್ವದಲ್ಲಿ ದಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ಬಡಕುಟುಂಬಕ್ಕೆ ನಿರ್ಮಾಣಗೊಂಡ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು. ಬೆಳಿಗ್ಗೆ ಗಣಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಿ ಆಶೀರ್ವಚನ ನೀಡಿದರು. ಇದೊಂದು ಮಾದರಿ ಸೇವಾ ಕಾರ್ಯವಾಗಿದ್ದು ಗ್ರಾಮೀಣ ಭಾಗದಲ್ಲಿ ಇಂತಹ ಅನೇಕ ಬಡಕುಟುಂಬಗಳು ಇದ್ದು ಅವರನ್ನು ಗುರುತಿಸಿ ಅವರಿಗೆ ಸೂರು, ಮೂಲಭೂತ ಸೌಲಭ್ಯ ಒದಗಿಸುವ ಕಾರ್ಯ ಆಗಬೇಕಾಗಿದೆ. ದೇವಪ್ಪ ಕುಲಾಲ್ ಅವರು ಬಡಕುಟುಂಬಕ್ಕೆ ಆಸರೆಯಾಗಿ ಮನೆ ನಿರ್ಮಿಸಿಕೊಟ್ಟಿರುವುದು ಶ್ರೇಷ್ಠ ಕಾರ್ಯ ಎಂದರು. ಈ ಸಂದರ್ಭ ಸ್ವಾಮೀಜಿಗಳು ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ಬಂಟ್ವಾಳ ಲಯನ್ಸ್ ಕ್ಲಬ್…
ಬಂಟ್ವಾಳ: ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನಾಪತ್ತೆಯಾಗಿದ್ದು ಅವರ ಬೈಕ್ ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಬಳಿ, ಬಟ್ಟೆ, ಪರ್ಸ್ ಮತ್ತಿತರ ವಸ್ತಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ನದಿಯಲ್ಲಿರುವ ನೀರಿನ ಟ್ಯಾಂಕ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರ ಪ್ರಮುಖರು ಸ್ಥಳದಲ್ಲಿ ಹಾಜರಿದ್ದಾರೆ. IMG_7607
ಬಂಟ್ವಾಳ: ಮೆಲ್ಕಾರ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಇದರ ಕಕ್ಯಪದವುಶಾಖೆಯು ಕಕ್ಯಪದವಿನ ಬಿತ್ತ ಕಾಂಪ್ಲೆಕ್ಸ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದು ಇದರ ಉದ್ಘಾಟನಾ ಸಮಾರಂಭ ಭಾನುವಾರನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಸ್ಥಳಾಂತರಿತ ನೂತನ ಶಾಖೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಕೇವಲ15 ವರ್ಷದ ಅವಧಿಯಲ್ಲಿ 6 ಶಾಖೆ ಮಾಡುವುದು ದೊಡ್ಡ ಸಾಧನೆ. ಸೊಸೈಟಿ 190 ಕೋಟಿ ವ್ಯವಹಾರ ನಡೆಸಿ ಜನಸಾಮಾನ್ಯರಿಗೆಸೇವೆ ಸಲ್ಲಿಸಿದೆ. 26 ಲಕ್ಷ ನಿವ್ವಳ ಲಾಭ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದನ್ನು ತೋರಿಸಿ ಕೊಟ್ಟಿದೆ ಎಂದು ತಿಳಿಸಿದರು. ದ.ಕ. ಜಿಲ್ಲೆಯಲ್ಲಿ ೪ ರಾಷ್ಟ್ರೀಕೃತ ಬ್ಯಾಂಕ್ಗಳು ಆರಂಭವಾಗಿದೆ. ಸಹಕಾರಿ ಬ್ಯಾಂಕ್ಗಳು ಯಶಸ್ವಿಯಾಗಿ ನಮ್ಮ ಜಿಲ್ಲೆಯಲ್ಲಿ ಮುನ್ನಡೆಯುತಿದ್ದು ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ ವಿಶ್ವಾಸದಲ್ಲಿ ನಡೆಯುತ್ತಿದ್ದು ಶ್ರೀಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಎಲ್ಲಾ ಕಚೇರಿಗಳು ಸ್ವಂತ ಕಟ್ಟಡದಲ್ಲಿ ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು. ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ…
ಬಂಟ್ವಾಳ: ಮಾರ್ನಬೈಲ್ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಹಾಗೂ ಜಮೀನು ಖರೀದಿ ಸಂಕಲ್ಪಕ್ಕಾಗಿ 18 ಗುರುವಾರಗಳಪರ್ಯಂತ ನಡೆಯುವ ಪಂಚಾರತಿ ಸೇವೆಯ 10ನೇ ಗುರುವಾರದ ಪಂಚಾರತಿ ಸೇವೆ ನಡೆಯಿತು. ಪ್ರಗತಿಪರ ಕೃಷಿಕ ಕುಲ್ಯಾರು ಜಯರಾಮ ಶೆಟ್ಟಿ, ಆನಂದ ಕುಲಾಲ್ ಅಮ್ಟೂರು, ಶಿವಪ್ರಸಾದ್ ಕೊಟ್ಟಾರಿ, ಉದ್ಯಮಿ ಮೋಹನ್ಕುಲಾಲ್ ಅಮ್ಟೂರು, ಕಿಶೋರ್ ಅವರು ಶ್ರೀ ದೇವರಿಗೆ ಪಂಚಾರತಿ ಬೆಳಗಿದರು. ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಅಧ್ಯಕ್ಷಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಪದಾಧಿಕಾರಿಗಳಾದ ಯಾದವ ಬಂಗೇರ ಕಂಚಿಲ, ಅಶೋಕ್ ಗಟ್ಟಿ ನಂದಾವರ, ಯೋಗೀಶ್ ಗಟ್ಟಿ, ಅಶ್ವಿನ್ ಕುಮಾರ್, ನಿತಿನ್ ಕುಮಾರ್, ಕೀರ್ತನ್, ಜಯನಂದ ಪಾಡಿ, ಗೋಪಿನಾಥ ನಾಯ್ಕ್, ಉಮೇಶ್ಕೋಮಾಲಿ, ಕೃಷ್ಣಪ್ಪ, ಗಣೇಶ್ ದೇವಾಡಿಗ, ರಾಜೀವ ಕೊಟ್ಟಾರಿ ಕಲ್ಲಡ್ಕ, ಸುರೇಶ್, ಶಕುಂತಳಾ ಗಟ್ಟಿ, ಗೋಪಾಲಕೃಷ್ಣ, ಪ್ರಮೀಳಾಗಣೇಶ್, ಗಣೇಶ್ ಗುಡ್ಡೆಯಂಗಡಿ, ವೆಂಕಟೇಶ್ ಮಾರ್ನಬೈಲು, ಜಯಶ್ರೀ ಅಶೋಕ್ ಗಟ್ಟಿ, ಅವಿನಾಶ್ ಗಟ್ಟಿ ಮಾರ್ನಬೈಲು, ಚಿತ್ರಾಕ್ಷ ಮರ್ತಾಜೆ, ವಸಂತ ಪೂಜಾರಿ ನಾಗರಲಚ್ಚಿಲು, ನಾಗೇಶ್ ಕಾಪಿಕಾಡ್,…
ಬಂಟ್ವಾಳ: ಭಾರಿ ಮಳೆಯ ಕಾರಣ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವುದರಿಂದ, ತಹಶೀಲ್ದಾರ್ ಅವರನಿರ್ದೇಶನದಂತೆ,ಬಂಟ್ವಾಳ ಮತ್ತು ಉಳ್ಳಾಲ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಇಂದು (30.05.2025) ರಂದು ರಜೆಘೋಷಿಸಲಾಗಿದೆ.
ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಶ್ರೀ ರಕ್ತೇಶ್ವರೀ ದೇವಿ ಮತ್ತು ಪರಿವಾರ ದೇವರುಗಳಿಗೆ ಸೋಮವಾರ ದೃಢ ಕಲಶಾಭಿಷೇಕ ಬ್ರಹ್ಮಶ್ರೀ ನೀಲೇಶ್ವರ ಉಚ್ಚಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಬೆಳಿಗ್ಗೆ ಗಣಹೋಮ ನಡೆದು ಬಳಿಕ ವಿವಿಧ ಅಭಿಷೇಕ, ದೃಢಕಲಶ ಪೂಜೆ, ಪಂಚಗವ್ಯ, ಪಂಚಾಮೃತ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈ, ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಬಿ. ಉಪಾಧ್ಯಕ್ಷ ಸಂಜೀವ ಪೂಜಾರಿ, ಕಾರ್ಯದರ್ಶಿ ಎನ್. ಶಿವಶಂಕರ್ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಐತಪ್ಪ ಪೂಜಾರಿ, ಕೋಶಾಧಿಕಾರಿ ನಾರಾಯಣ ಹೆಗ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಸಮಿತಿ ಸದಸ್ಯರಾದ ಬಿ. ಮೋಹನ್, ರಾಜೇಶ್ ಎಲ್. ನಾಯಕ್, ಗೋಪಾಲ ಸುವರ್ಣ, ಸತೀಶ್ ಕುಮಾರ್, ಪುಷ್ಪರಾಜ ಶೆಟ್ಟಿ, ಅರ್ಚಕ ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ: ಇಲ್ಲಿನ ತುಂಬೆಯ ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ, ಶ್ರೀಶಾರದಾ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಅಂದಾಜು1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿಸ್ತೃತ ಕಟ್ಟಡ ನಿರ್ಮಾಣದ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮಭಾನುವಾರ ತುಂಬೆಯ ಶ್ರೀ ಶಾರದಾ ಪ್ರತಿಷ್ಠಾನದ ಸಭಾಂಗಣದದಲ್ಲಿ ನಡೆಯಿತು. ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿಯವರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಮಾತನಾಡಿಸಂಕಲ್ಪಿತ ವ್ಯವಸ್ಥೆಯಡಿ ಸಭಾಭವನ ನಿರ್ಮಾಣಕ್ಕೆ ಪ್ರತಿಷ್ಠಾನ ಹಾಗೂ ರಜತ ಮಹೋತ್ಸವ ಸಮಿತಿ ಸದಸ್ಯರು ಮುಂದಾಗಿದ್ದುಎಲ್ಲರೂ ವಿಸ್ತೃತ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ಮಾಡಿದರು. ಸಮಿತಿಯ ಕಾರ್ಯಧ್ಯಕ್ಷ ಅನಿಲ್ ಪಂಡಿತ್ ರೂ.10 ಲಕ್ಷ ನೀಡುವುದಾಗಿ ಘೋಷಿಸಿದರೆ ಅತಿಥಿಗಳಾಗಿ ಭಾಗವಹಿಸಿದ್ದಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ ಹಾಗೂ ಅಜಿತ್ ಚೌಟ ದೇವಸ್ಯ ತಮ್ಮಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು. ಬಜರಂಗದಳದ ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು ಹಾಗೂ ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕಾರ್ಯಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಕಾಶ್ಚಂದ್ರ ರೈ ದೇವಸ್ಯ, ರಾಮಚಂದ್ರ…
ಕುಪ್ಪೆಪದವು: ಕೆನರ ಬ್ಯಾಂಕ್ ನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸಂಘ ಹಸಿರು ಸೇನೆಯ ಸಹಯೋಗದೊಂದಿಗೆಕಿಲೆಂಜಾರು, ಕುಳವೂರು, ಮುತ್ತೂರು, ಮೊಗರು, ಬಡಗ ಉಳಿಪ್ಪಾಡಿ,ತೆಂಕ ಎಡಪದವು ಗ್ರಾಮದ ವ್ಯಾಪ್ತಿಯ ರೈತ ಸಂಪರ್ಕಸಭೆಯು ಮೊಗರು ಕುಕ್ಕಟ್ಟೆಯಲ್ಲಿರುವ ಸಭಾಂಗಣದಲ್ಲಿ ಶನಿವಾರ ನಡೆದಿದ್ದು ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ, ಸರಕಾರದವಿಮಾ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಕೆನರಾ ಬ್ಯಾಂಕಿನ ರೀಜನಲ್ ಆಫೀಸರ್ ರಮೇಶ್ ನಾಯಕ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಗ್ರಾಹಕರು ಹಾಗೂ ಸಿಬ್ಬಂದಿಗಳ ಮಧ್ಯೆ ಭಾಷೆಯ ಸಮಸ್ಯೆಗಳಿರುವ ಬಗ್ಗೆ ಚರ್ಚೆಯಾಗುತ್ತಿದೆ. ನಮ್ಮ ಮನೋಭಾವನೆಉತ್ತಮವಾಗಿದ್ದಾಗ ಭಾಷೆ ವ್ಯವಹಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಸರಕಾರದಸವಲತ್ತುಗಳನ್ನು ಪಡೆಯಬೇಕು ಎಂದ ಅವರು ನಾವು ಹುಟ್ಟಿದ ಬಳಿಕ ಏನಾದರೂ ಸಾಧನೆ ಮಾಡಬೇಕು, ನಾವು ಮಾಡುವಒಳ್ಳೆಯ ಕೆಲಸ ಶಾಶ್ವತವಾಗಿವ ಉಳಿಯುತ್ತದೆ ಎಂದರು. ಗ್ರಾಹಕರನ್ನು ವಂಚಿಸುವ ಜಾಲದ ಬಗ್ಗೆ ಎಚ್ಚರವಾಗಿರಬೇಕು ಎಂದರು. ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜಯಾನಂದ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿಮಾತನಾಡಿ…








