Author: admin
ಸರಕಾರಿ ಪದವಿಪೂರ್ವ ಕಾಲೇಜು ಸಜೀಪಮೂಡ ಇದರ ಪ್ರೌಢಶಾಲಾ ವಿಭಾಗದ 2025-26 ನೇ ಸಾಲಿನ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲೆಯ ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಯೋತಿಯು ಕತ್ತಲೆಯನ್ನು ಹೊಡೆದೋಡಿಸಿ ಎಲ್ಲೆಡೆ ಬೆಳಕನ್ನು ಪಸರಿಸುವಂತೆ ನಮ್ಮ ಶಾಲೆಯ ಸಂಘಗಳು ವಿದ್ಯಾರ್ಥಿಗಳಲ್ಲಿ ಜ್ಞಾನಜ್ಯೋತಿಯನ್ನು ಬೆಳಗುವಂತಾಗಲಿ ಎಂದು ಆಶಿಸಿದರು. ಶಾಲೆಯ ಹಿರಿ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ವಿವಿಧ ಸಂಘಗಳನ್ನು ಉದ್ಘಾಟಿಸಿದರು. ವಿಜ್ಞಾನ ಸಹಶಿಕ್ಷಕರಾದ ವೆಂಕಟರಮಣ ಆಚಾರ್ಯ ಪ್ರಾಸ್ತವಿಕವಾಗಿ ಮಾತನಾಡಿ ಸಂಘಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮಾನವೀಯ ಮೌಲ್ಯಗಳಾದ ಶಿಸ್ತು ಸಂಯಮ ನಾಯಕತ್ವ ಸೃಜನಶೀಲತೆ ಪ್ರಾಯೋಗಿಕ ಮನೋಭಾವನೆಗಳು ಮತ್ತು ತಾರ್ಕಿಕ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಬೆಳೆದುಬಂದು ಪರಿಪೂರ್ಣವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಸಹ ಶಿಕ್ಷಕಿ ಹೇಮಾವತಿ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಸಹ ಶಿಕ್ಷಕರಾದ ಸುಲೋಚನಾ ನಿರೂಪಿಸಿ, ಗಣೇಶ್ ವಂದಿಸಿದರು. .
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ 2025-26ನೇ ಸಾಲಿನ ಶಾಶ್ವತ ಯೋಜನೆಯಾಗಿ ಬಿ.ಸಿ.ರೋಡಿನ ಸೋಮಾಯಜಿ ಹೌಸ್ ಕಟ್ಟಡದ ಬಳಿ ನಿರ್ಮಾಣಗೊಂಡ ಲಯನ್ಸ್ ಆಶ್ರಯ ಪ್ರಯಾಣಿಕರ ತಂಗುದಾಣವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಭಾನುವಾರ ಉದ್ಘಾಟಿಸಿದರು. ಅವರು ಮಾತನಾಡಿ ಈ ಭಾಗದ ಜನರ ಬೇಡಿಕೆಯ ಅನುಗುಣವಾಗಿ ಇಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಗೊಂಡಿದೆ. ನಾಗರಿಕ ಸೇವಾ ಸಮಿತಿಯ ಮನವಿಯಂತೆ ಕೆಎಸ್ಆರ್ಸಿಯ ಮೂಲಕ ಇಲ್ಲಿ ಬಸ್ಸು ನಿಲುಗಡೆಗೆ ಅವಕಾಶ ದೊರಕಿಸಿಕೊಟ್ಟಿದ್ದು ಇದೀಗ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಇಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಸ್ಸು ನಿಲುಗಡೆಗೆ ಅನುಕೂಲವಾಗುವಂತೆ ಡಾಮಾರೀಕರಣ ಹಾಗೂ ಹೈಮಾಸ್ಕ್ ದೀಪದ ಅಳವಡಿಕೆಯನ್ನು ಸಂಬಂಧಪಟ್ಟವರು ಮಾಡಲಿದ್ದಾರೆ ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗ ವಿದ್ಯುತ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುರಸಭಾಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ…
ಬಂಟ್ವಾಳ: ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡ ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಂಚಿಕೆ ಬಾಳಪಥ ಪುಸ್ತಕ ಬಿಡುಗಡೆ ಹಾಗೂ ಸಂಘದ ಮೂರು ಶಾಖೆಯ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮ ಬಂಟ್ವಾಳ ಬೈಪಾಸ್ ಜಂಕ್ಷನ್ನಲ್ಲಿರುವ ಸಮಾಜ ಸೇವಾ ಸಹಕಾರಿ ಭವನದ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು. ಬಾಳಪಥ ಸ್ಮರಣ ಸಂಚಿಕೆಯನ್ನು ಬೆಂಗಳೂರಿನ ಸಹಕಾರಿ ಧುರೀಣ ಮೋಹನದೇವ ಆಳ್ವ ಬಿಡುಗಡೆಗೊಳಿಸಿ ಮಾತನಾಡಿ ಮೃದು ಸ್ವಭಾವದವರಾದ ತುಳುವರು ಮಾತೃ ಭಾಷೆಯನ್ನು ಪ್ರೀತಿಸುವ ಜೊತೆಗೆ ಎಲ್ಲಾ ಭಾಷೆಯನ್ನು ಗೌರವಿಸುವ ಮನೋಸ್ಥಿತಿಯನ್ನು ಹೊಂದಿದ್ದಾರೆ. ಸತ್ಯ ನಿಷ್ಠರಾಗಿದ್ದ ಅಮ್ಮೆಂಬಳ ಬಾಳಪ್ಪ ಅವರ ಸ್ಮರಣೆಯು ತುಳುವರ ಹೆಮ್ಮೆಯಾಗಿದ್ದು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜನಸ್ನೇಹಿಗಳಾಗಬೇಕು ಎಂದರು. ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ…
ಮುಂದಕ್ಕೆ ಕರಪತ್ರ ಹಂಚುವುದು, ಗೋಡೆ ಬರಹ ಇತ್ಯಾದಿಗಳ ಮೂಲಕ ಜನ ಜಾಗೃತಿಗೆ ಮುಂದಾದೆವು. ಆ ಸಂದರ್ಭದಲ್ಲಿ ಭಿತ್ತಿಪತ್ರಗಳ ಬಳಕೆ ಕಡಿಮೆಯಿತ್ತು. ಆದರೆ ನಾನು ಅದನ್ನೂ ಬಳಸಿಕೊಂಡೆ; ಹೇಗಂದ್ರೆ, ಆಗ ಈಗಿನ ಹಾಗೆ ಕ್ಸೆರಾಕ್ಸ್ ಎಲ್ಲ ಇರಲಿಲ್ಲ, ಏನಿದ್ದರೂ ಸೈಕ್ಲೋಸ್ಟೈಲ್ ಅಥವಾ ಕಾರ್ಬನ್ ಇಟ್ಟು ಬರೆಯುವುದು. ಟೈಪ್ ಕ್ಲಾಸಿನಲ್ಲಿ ಉಪಯೋಗಿಸಿ ಬಿಸಾಡಿದ ಕಾರ್ಬನ್ ಪೇಪರನ್ನು ಖಾಲಿ ಪೇಪರಿನ ಅಡಿಯಲ್ಲಿಟ್ಟು ಪ್ರತಿ ತೆಗೆಯುವುದು; ಒಮ್ಮೆಗೆ ೨-೩ ಪ್ರತಿ ತೆಗೆಯುತ್ತಿದ್ದೆ. ಹೀಗೆ ದಿವಸಕ್ಕೆ ಏಳೆಂಟು ಪ್ರತಿಗಳನ್ನು ಮಾಡಿ, ಮನೆ ಪಕ್ಕದ ರೇಶನ್ ಅಂಗಡಿಗೆ ಹೋಗುವಾಗ ಯಾರ ಕಣ್ಣಿಗೂ ಕಾಣದಂತೆ ಅಡಗಿಕೂತು, ಗೋಂಕಿನ ಮರದ ಗೋಂದಿನಲ್ಲಿ(ಗೇರು ಮರದ ಅಂಟು) ಅಲ್ಲಲ್ಲಿ ಅಂಟಿಸುತ್ತಿದ್ದೆ. ಪ್ರತಿಭಟನಾರ್ಥವಾಗಿ ಉಪಯೋಗಿಸುವ ಯಾವುದೇ ಸಾಮಗ್ರಿಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳುವುದೂ ಆಗ ಕಷ್ಟವೇ ಆಗಿತ್ತು. ಸಂಶಯ ಇದ್ದವರ ಮೇಲೆ ಪೊಲೀಸರ ಒಂದು ದೃಷ್ಟಿ ಯಾವತ್ತೂ ಇರುತ್ತಿತ್ತು, ಸರಕಾರದ ವಿರುದ್ಧ ಅಲ್ವೆ ನಮ್ಮ ಪ್ರತಿಭಟನೆ? ಸಾಮಗ್ರಿಗಳು ದೊರೆತರೆ ಶಿಸ್ತಿನ ಕ್ರಮ ಖಂಡಿತ. ದುರವಸ್ಥೆ ನೋಡಿ! ಈ ತಳ್ಳಿ…
ಅದಾಗಲೇ ದೇಶಾದ್ಯಂತ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಗಳು ಬೇರೆ ಬೇರೆ ರೂಪದಲ್ಲಿ ಆರಂಭವಾಗಿತ್ತು. ಸಂಬಂಧಿತ ಸರಕಾರಿ ಕಛೇರಿಗಳ ಮುಂಭಾಗದಲ್ಲಿ ಸತ್ಯಾಗ್ರಹ, ಮೆರವಣಿಗೆ, ಸಾರ್ವಜನಿಕ ಭಾಷಣ, ಕರಪತ್ರ ವಿತರಣೆ ಇತ್ಯಾದಿಗಳು ಭರದಿಂದ ಸಾಗುತ್ತಿತ್ತು. ಅಲ್ಲಲ್ಲಿ ಪೊಲೀಸರಿಂದ ಬಂಧನಗಳೂ ನಡೆಯುತ್ತಿದ್ದವು. ನನಗಾಗ ಭಾಷಣ ಮಾಡುವ ಹುಚ್ಚು, ಮೆರವಣಿಗೆಯಲ್ಲಿ ಹೋಗಬೇಕೆನ್ನುವ ಕೆಚ್ಚು. ರಾಸ್ವ ಸಂಘದ ಕೆಲಮಂದಿ ಕಾರ್ಯಕರ್ತರಲ್ಲಿ ಕೆಲವರು ಈಗಾಗಲೇ ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸುತ್ತಾ ಇದ್ದರು. ನಾನಾಗ ಶಾರ್ಟ್ ಹ್ಯಾಂಡ್ ಹಾಗೂ ಕನ್ನಡ ಟೈಪ್ ರೈಟಿಂಗ್ ಸ್ಕೂಲಿಗೂ ಹೋಗುತ್ತಿದ್ದೆ, ಬೆಳಗ್ಗೆ ಹತ್ತು ಘಂಟೆಗೆ ತರಗತಿ ಆರಂಭವಾದರೆ ಹನ್ನೊಂದು ಗಂಟೆಗೆಲ್ಲ ಮುಗಿಯುತ್ತಿತ್ತು. ಮನೆ ದೇವರಿಗೆ ಹಾಗೂ ಇತರ ಒಂದೆರಡು ಮನೆಗಳಲ್ಲಿ ಪೂಜೆಯನ್ನು ಪೂರೈಸಿ ಮನೆಯಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಉಪ್ಪಿನಂಗಡಿಗೆ ನಡೆದುಕೊಂಡು ಹೋಗಬೇಕಾಗಿತ್ತು. ಬಸ್ಸಿನಲ್ಲಿ ಹೋಗುವಷ್ಟು ಅಂದು ಪರಿಸ್ಥಿತಿ ಚೆನ್ನಾಗಿರಲಿಲ್ಲ. ದಿನನಿತ್ಯ ನನ್ನ ಪಾದ ಯಾತ್ರೆಯನ್ನು ಅರಿತುಕೊಂಡಿದ್ದ ಕೆಲಮಂದಿ ಪರಿಚಯವಿದ್ದ ಬಾಡಿಗೆ ಕಾರಿನವರು ಕೆಲವೊಂದು ಸಲ ನನ್ನನ್ನು ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು, ನನಗಾದರೋ ಸ್ವಾಭಿಮಾನದ ಪ್ರಶ್ನೆ.…
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜೆಂಟ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಮುಸ್ತಫಾ ಬಸ್ತಿಕೋಡಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 9ನೇ ಅಕಾಡೆಮಿಕ್ ಸೆನೆಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. VTU ಕಾಯಿದೆ 1994ರ ಸೆಕ್ಷನ್ 22ರ ಅಡಿಯಲ್ಲಿ ಈ ಕುರಿತು ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳು ತಿಳಿಸಿದ್ದಾರೆ. ಅಕಾಡೆಮಿಕ್ ಸೆನೆಟ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅತ್ಯುನ್ನತ ಶೈಕ್ಷಣಿಕ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಮುಖ ಶೈಕ್ಷಣಿಕ ಕಾರ್ಯತಂತ್ರಗಳು ಮತ್ತು ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡಾ. ಮುಸ್ತಫಾ ಬಸ್ತಿಕೋಡಿ ಅವರನ್ನು ಸೆನೆಟ್ನಲ್ಲಿ ಸೇರಿಸಿಕೊಂಡಿರುವುದು ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ಶೈಕ್ಷಣಿಕ ಆಡಳಿತಕ್ಕೆ ಅವರು ನೀಡಿರುವ ಅವರ ಕೊಡುಗೆಗಳಿಗೆ ಸಂದ ಗೌರವವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅದೊಂದು ನನಗೆ ಭಾವುಕ ಕ್ಷಣವೂ ಹೌದು. ಅದಾಗಲೇ ನಾನು ದಕ್ಷತಾ ವರ್ಗ, ಐಟಿಸಿ, ಓಟಿಸಿ ಮುಗಿಸಿದ್ದೆ. ಆ ಶಿಬಿರಗಳಲ್ಲೆಲ್ಲ ನಂ.ಮಧ್ವ ರಾವ್, ನ.ಕೃ ಷ್ಣಪ್ಪ, ಸು.ರಾಮಣ್ಣ, ಚಂದ್ರಶೇಖರ ಭಂಡಾರಿ, ಹೂ.ವೇ.ಶೇಷಾದ್ರಿ ಮೊದಲಾದ ಘಟಾನುಘಟಿ ರಾಷ್ಟ್ರಪ್ರೇಮಿ ವ್ಯಕ್ತಿಗಳ ವಿಚಾರಪ್ರದ ಬೌದ್ಧಿಕ್ ನಮ್ಮೆಲ್ಲರನ್ನು ನಮ್ಮ ಸಂಸ್ಕ್ರತಿ ಹಾಗೂ ರಾಷ್ಟ್ರೀಯ ವಿಚಾಧಾರೆಯ ಕುರಿತು ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಧಾರವಾಡದ ಆರ್ ಎಲ್ ಎಸ್ ಪ್ರೌಢಶಾಲೆಯಲ್ಲಿ ನಾನು ಭಾಗಿಯಾಗಿದ್ದ ಓಟಿಸಿ ಶಿಬಿರಕ್ಕೆ ಅಂದಿನ ರಾಷ್ಟ್ರೀಯ ನಾಯಕರಾಗಿದ್ದ ಎ.ಬಿ. ವಾಜಪೇಯಿ, ಎಲ್.ಕೆ.ಅಡ್ವಾಣಿ, ಜಗನ್ನಾಥ್ ರಾವ್ ಜೋಷಿ ಮೊದಲಾದವರು ಶಿಬಿರಾಂಗಣಕ್ಕೆ ಬಂದಿದ್ದ ನೆನಪು. ಅವರ ಭೇಟಿ ಅದೊಂದು ಆಕಸ್ಮಿಕ ಘಟನೆಯೆಂದೆ ನಾನಿಂದು ಭಾವಿಸಿದ್ದೇನೆ. ಆ ಕಾಲದಲ್ಲಿ ಹೇಳಬೇಕೆಂದರೆ, ನಮ್ಮ ಊರಿನಲ್ಲಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ನ ಏಳೆಂಟು ಮನೆಗಳನ್ನು ಬಿಟ್ಟರೆ ಉಳಿದವರೆಲ್ಲ ಹುಟ್ಟಿನಿಂದಲೇ ಎನ್ನುವ ಹಾಗೆ ಜನಸಂಘದಲ್ಲಿ ತೊಡಗಿಕೊಂಡವರು. ಇತ್ತೀಚಿನವರೆಗೂ ಮಾರ್ಗದ ಬದಿಯ ಹಳೆಯ ಕಟ್ಟಡಗಳ ಗೋಡೆಗಳಲ್ಲಿ ಸುಣ್ಣದಲ್ಲಿ ಬರೆದ ಜನಸಂಘದ ದೀಪದ ಚಿಹ್ನೆಗಳು ಕಾಣಿಸುತ್ತಿದ್ದವು. ನಮ್ಮ ಬದುಕಿಗೂ ಜನಸಂಘದ ರಾಷ್ಟ್ರೀಯ…
ಆಗ ಬೆಳ್ಳಾರೆಯಲ್ಲಿ ಪದವಿ ಪೂರ್ವ ತರಗತಿ ಮುಗಿಸಿದ್ದೇನಷ್ಟೆ. ಇನ್ನೇನು ಪದವಿ ತರಗತಿಗೆ ಸೇರಬೇಕೆನ್ನುವಷ್ಟರಲ್ಲಿ, ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರಿಂದ ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಲ್ಪಟ್ಟಿತು. ಆಗ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಮಕುಂಜ ಶಾಖೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿಯೋ ಏನೋ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯ ಕುರಿತಾಗಿನ ಪ್ರಜ್ಞೆ ನನ್ನನ್ನು ಆಂತರಿಕವಾಗಿ ಎಚ್ಚರಿಸುತ್ತಿತ್ತು; ಇದಕ್ಕೆ ನಮ್ಮ ತಾಯಿಯವರ ಮುತುವರ್ಜಿಯೂ ಕಾರಣವಾಗಿತ್ತು. ಎಷ್ಟೋ ಸಂದರ್ಭಗಳಲ್ಲಿ ನಾನು ಶಾಖೆ ನಡೆಸುತ್ತಿದ್ದಾಗ ಅವರು ನಮ್ಮ ರಕ್ಷಕರಾಗಿ ಕಾವಲು ಕಾಯುತ್ತಿದ್ದರು; ಇದಕ್ಕೆ ಕಾರಣವೂ ಇತ್ತು, ಅಲ್ಲೇ ಪಕ್ಕದಲ್ಲಿ ರಾಮಕುಂಜೇಶ್ವರನು ಉದ್ಭಸಿದನೆಂಬುದಾಗಿ ನಂಬಲಾದ ದೊಡ್ಡದಾದ ಬಿಲದ್ವಾರವೊಂದಿತ್ತು, ಅದಕ್ಕಾಗಿ ಅಮ್ಮನಿಗೆ ಭಯ, ಹೇಗಿದ್ದರೂ ನಾವು ಸಣ್ಣ ಮಕ್ಕಳು ಬೇರೆ. ಈ ರಾಷ್ಟ್ರದ ಮೇಲಿನ ಅವ್ಯಕ್ತವಾದ ಭಕ್ತಿ ಒಂದು ಕಡೆಯಾದರೆ ನಮ್ಮ ತಾಯಿಯವರ ಉತ್ಸಾಹಭರಿತ ಉತ್ತೇಜನದಿಂದಾಗಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ನಾನಂತೂ ಅನುವು ಮಾಡಿಕೊಂಡೆ. ಆದರೆ ಸಮಸ್ಯೆ ಅಂದರೆ, ಅಮ್ಮ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೂ ಅನ್ಯಾನ್ಯ ಕಾರಣಗಳಿಂದಾಗಿ ಸ್ವಲ್ಪಮಟ್ಟಿಗೆ…
ಬಂಟ್ವಾಳ: ಭವಿಷ್ಯತ್ ಕಾಲದ ಭಾರತದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಪರ್ಯಾಯವಾಗಿ ಬೇರೊಂದು ರಾಜಕೀಯ ಪಕ್ಷದ ಅಗತ್ಯತೆ ಮತ್ತು ಅನಿರ್ವಾಯತೆಯನ್ನು ಮನಗಂಡ ಅಪ್ಪಟ್ಟ ದೇಶ ಪ್ರೇಮಿ, ಸೂಕ್ಷ್ಮ ದೃಷ್ಟಿಕೋನವುಳ್ಳ ,ದೂರದೃಷ್ಟಿಯುಳ್ಳ ರಾಜಕಾರಣಿ ಡಾI ಶ್ಯಾಮ್ ಪ್ರಸಾದ್ ಮುಖರ್ಜಿರವರು. ದೇಶದ ಮೇಲಿಟ್ಟಿರುವ ದೇಶ ಭಕ್ತಿಯ ಬಗೆಗಿನ ಹಲವಾರು ಘಟನೆಗಳನ್ನು ನೆನಪಿಸಿಕೊಂಡಾಗ ಅವರಲ್ಲಿರುವ ರಾಷ್ಟ್ರ ಪ್ರೇಮದ ಶಕ್ತಿಯು ರಾಷ್ಟ್ರ ಭಕ್ತರಾದ ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿ ಮೂಡಿ ಬರುತ್ತದೆ ಎಂದು ಬಿ ಜೆ ಪಿ ಪ್ರಮುಖರಾದ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ ಜೆ ಪಿ ಶಕ್ತಿ ಕೇಂದ್ರದ ವತಿಯಿಂದ ಪುಂಜಾಲಕಟ್ಟೆಯ ನಂದಗೋಕುಲ ಪ್ರಕಾಶ್ ಭಟ್ ರವರ ಮನೆಯಲ್ಲಿ ಜರಗಿದ ಶ್ಯಾಮ್ ಪ್ರಸಾದ್ ಮುಖರ್ಜಿರವರ , ಪುಣ್ಯ ಸ್ಮರಣೆ ಪ್ರಯುಕ್ತ ನಡೆದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖರ್ಜಿಯವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಮಾತಾನಾಡಿದರು . ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂರವರ ಸಂಪುಟದಲ್ಲಿ ಸಂಪುಟ…
ಬಂಟ್ವಾಳ: ಸಂಘಟನೆಗಳು ಮಾಡುವ ಒಳ್ಳೆಯ ಕೆಲಸಗಳನ್ನು ಬೇರೆಯವರಿಗೆ ತಿಳಿಸುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕಾರ್ಯ ಆಗಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗುವಂತಹ ಕಾರ್ಯಗಳನ್ನು ಹಮ್ಮಿಕೊಂಡಾಗ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಹೇಳಿದರು. ಅವರು ಯುವವಾಹಿನಿ ಬಂಟ್ವಾಳ ಘಟಕದ 2025-26 ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾರಾಯಣ ಗುರುಗಳು ಬಿಲ್ಲವ ಸಮಾಜಕ್ಕೆ ಸೀಮಿತ ಅಲ್ಲ. ಅವರ ಎಲ್ಲಾ ಸಮಾಜಕ್ಕೂ, ಎಲ್ಲಾ ಕಾಲಕ್ಕೂ ಸಲ್ಲುವ ಶ್ರೇಷ್ಠ ಗುರುಗಳು ಎಂದು ತಿಳಿಸಿದರು. ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಅವರು ಮಾತನಾಡಿ ಬಂಟ್ವಾಳ ಯುವವಾಹಿನಿ ಘಟಕ ಅತ್ಯುತ್ತಮ ವಾಗಿ ಕಾರ್ಯಕ್ರಮವನ್ನು ಸಂಘಟಿಸಿ ಮಾದರಿಯಾಗಿದೆ ಎಂದು ತಿಳಿಸಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಯುವ ಸಂಚಯ ವಾರ್ಷಿಕ…








