Author: admin
ಬಂಟ್ವಾಳ: ಪ್ರೇಮಿಯೊಬ್ಬ ಪ್ರೀಯತಮೆಯ ಹಲ್ಲೆ ಮಾಡಿ ಆ ಬಳಿಕ ನೇಣಿಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಸುಜೀರು ದೈಯಡ್ಕ ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾನ್ ಕಾಂಜೀರ ಕೋಡಿ ಸುಧೀರ್ ಎಂದು ಗುರುತಿಸಲಾಗಿದೆ. ಯುವತಿ ದಿವ್ಯ ಎಂಬಾಕೆ ಗಂಭೀರ ಸ್ಥಿತಿಯಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇವರಿಬ್ಬರು ಕಳೆದ ೮ ವರ್ಷಗಳಿಂದ ಪ್ರೀತಿಸುತ್ತಾ ಇದ್ದರು ಎನ್ನಲಾಗಿದ್ದು ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ದಿವ್ಯ ಮೇಲೆ ಮನಬಂದಂತೆ ಥಳಿಸಿದ್ದು ಯುವತಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಗಾಯಾಳು ದಿವ್ಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಅನ್ನುವ ಮಾಹಿತಿ ಇದೆ. ಇತ್ತ ಯುವಕ ಸುಧೀರ್ ಈ ಹಿಂದೆ ಕೂಡ ಟವರ್ ಹತ್ತಿ ಈಕೆಯನ್ನು ಹೆದರಿಸಿದ್ದ ಅನ್ನುವ ಮಾಹಿತಿ ಇದೆ. ಬಂಟ್ವಾಳ ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಜ ಹೇಳಬೇಕೆಂದರೆ ನನಗಾಗೊಂದು ಉದ್ಯೋಗದ ಅವಶ್ಯಕತೆಯೂ ಇತ್ತು. ಆಚಾರಕ್ಕೂ ಆಯಿತು ಸುಖಕ್ಕೂ ಆಯಿತು; ಸರಿ, ಮಂಗಳೂರಿಗೆ ಹೋದೆ. ಆಗ ನಮ್ಮ ದೊಡ್ಡಮ್ಮನ ಮಗಳೊಬ್ಬರು ಕಮರ್ಷಿಯಕ್ ಟ್ಯಾಕ್ಸ್ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ದುಂಬಾಲು ಬಿದ್ದು ಅವರಲ್ಲಿ ಕೇಳಿಕೊಂಡೆ, ಹೇಗಾದರೂ ಮಾಡಿ ಒಂದು ಉದ್ಯೋಗ ದೊರಕಿಸಿ ಕೊಡಿ ಎಂಬುದಾಗಿ. ಆಗ ಅವರ ಕಛೇರಿಯಲ್ಲಿ ಟ್ಯಾಕ್ಸ್ ಆಫೀಸರ್ ಆಗಿದ್ದವರು ಮಂಜ ಅಂಪಾರ್ ಅನ್ನುವವರು. ನಮ್ಮ ಅಕ್ಕ ಅವರಿಗೆ ನನ್ನನ್ನು ಪರಿಚಯಿಸಿ ನನ್ನ ಆಶೆಯನ್ನು ಅವರ ಮುಂದಿಟ್ಟರು. ಎರಡು ದಿನ ಕಳೆದು ಮಂಗಳೂರಿನ ಸುಚಿತ್ರ ಟಾಕೀಸಿನಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿ ನೇಮಕಗೊಂಡೆ. ಆಗ ನನಗೆ ಸಿಗುತ್ತಿದ್ದ ಸಂಬಳ ಕೇವಲ ನೂರು ರೂಪಾಯಿಗಳು ಮಾತ್ರ. ಸಮಯ ಬೆಳಗ್ಗಿನ ದೇಖಾವೆಯಿಂದ ಸಂಜೆಯ ದೇಖಾವೆ ಮುಗಿಯುವವರೆಗೆ ಅಥವಾ ಮಧ್ಯಾಹ್ನದಿಂದ ರಾತ್ರೆ ಹನ್ನೆರಡು ಗಂಟೆವರೆಗೆ. ಉಳಕೊಳ್ಳುವ ವ್ಯವಸ್ಥೆ ತಲಪಾಡಿಯ ದೊಡ್ಡಮ್ಮನ ಮನೆಯಲ್ಲಿ. ಬೆಳಗ್ಗಿನ ತಿಂಡಿ ಹೇಗಿದ್ದರೂ ಅಲ್ಲೇ ಆಗುತ್ತಿತ್ತು, ಉಳಿದ ಅವಧಿಗೆ ಬುತ್ತಿ ಕಟ್ಟಿಕೊಂಡು ಬರುವುದು. ಮಧ್ಯಾಹ್ನದಿಂದ ಡ್ಯೂಟಿ ಆದರೆ ಮಲಗಲು ಟಾಕೀಸೇ…
ಬಂಟ್ವಾಳ : ತಾಲೂಕನ 18 ಗ್ರಾಮಗಳು ಕ್ಷಯ ಮುಕ್ತ ಗ್ರಾಮಗಳಾಗಿದ್ದು 30 ಗ್ರಾಮಗಳನ್ನು ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ತಿಳಿಸಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ರೋಗಿಗಳಿಗೆ ಔಷಧಿಯ ಜೊತೆ ಪೌಷ್ಟಿಕಾಹಾರ ಅತ್ಯಂತ ಅಗತ್ಯವಾಗಿದ್ದು ಅದನ್ನು 34 ತಿಂಗಳುಗಳಿಂದ ನೀಡುತ್ತಿರುವುದು ಸೇವಾಂಜಲಿ ಪ್ರತಿಷ್ಠಾನದ ದೊಡ್ಡ ಕಾರ್ಯ . ಇದು ಇನ್ನಿತರ ಸಂಘ ಸಂಸ್ಥೆಗಳಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತನ್ಯ ಕೆ.ಎಸ್ ಮಾತನಾಡಿ ಪೌಷ್ಟಿಕಾಹಾರ ಸೇವನೆ ಮಾಡಿದಾಗ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ರೋಗ ಗುಣಮುಖವಾಗಲು ಸಾಧ್ಯವಿದೆ. ಇಲ್ಲಿ ನೀಡುವ ಪೌಷ್ಟಿಕಾಹಾರವನ್ನು ಮನೆಮಂದಿಗೆ ಅಥವಾ ಬೇರೆಯವರಿಗೆ ನೀಡದೆ ತಾವೇ ಸೇವಿಸಿ ಜೊತೆಗೆ ಸರಿಯಾದ ಔಷಧಿ…
ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು ಇದರ 2025-26ನೇ ಸಾಲಿನ ನೂತನ ಅಧ್ಯಕ್ಷೆ ಪ್ರೀಮಾ ವಿ. ಫೆರ್ನಾಂಡೀಸ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಕೈಕಂಬದ ಸೂರ್ಯವಂಶ ಕಟ್ಟಡದ ಕೆ.ಎಲ್.ರಾವ್ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಮಾಜಿ ಗವರ್ನರ್ ಪ್ರಕಾಶ್ ಕಾರಂತ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಕ್ಲಬ್ ಲೆಫ್ಟಿನೆಂಟ್ ಆಗಿ ಎಲಿಯಾಸ್ ಸ್ಯಾಂಕ್ತಿಸ್ಟ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಬಳಿಕ ನೂತನ ಅಧ್ಯಕ್ಷರಾಗಿ ಕ್ಲಬ್ ನ ಪ್ರಥಮ ಮಹಿಳಾ ಅಧ್ಯಕ್ಷೆ ಪ್ರೀಮಾ ವಿ. ಫೆರ್ನಾಂಡೀಸ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯದರ್ಶಿಯಾಗಿ ಪಸನ್ನ ರಾವ್ ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನಡೆಯಿತು. ಬಳಿಕ ಪ್ರಕಾಶ್ ಕಾರಂತ್ ಮಾತನಾಡಿ ರೋಟರಿ ಸದಸ್ಯರಿಗೆ ಜುಲೈ ತಿಂಗಳು ಹೊಸ ವರ್ಷವಿದ್ದಂತೆ. ಆ ತಿಂಗಳು ರೋಟರಿ ಸದಸ್ಯರಿಗೆ ವಿಶೇಷ ಚೈತನ್ಯ ನೀಡುತ್ತದೆ. ಒಳ್ಳೆಯದ್ದಕ್ಕಾಗಿ ಒಗ್ಗಟ್ಟಾಗಬೇಕು ಎನ್ನುವ ಅಂತರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಕೆಲಸ ನಿರ್ವಹಿಸಿ ಈ ವರ್ಷ ಡೈಮಂಡ್ ಪ್ಲಸ್ ಪುರಸ್ಕಾರವನ್ನು ಗೆಲ್ಲಬೇಕು ಎಂದರು.…
ಇದೊಂದು ತಮಾಷೆಯೊ ಅಥವಾ ನನ್ನ ಪಾಲಿನ ದುರಂತವೋ ಗೊತ್ತಿಲ್ಲ; ಆದರೆ ಹೇಳಲೇಬೇಕಾಗಿದೆ. ನನ್ನ ಕೈ ಕಾಲುಗಳಿಗೆ ಲಾಠಿ ಪ್ರಹಾರ ಮಾಡಿ ರಕ್ತ ಚಿಮ್ಮಿಸಿದ್ದ ಕಾರಂತರ ಮಾತೃಶ್ರೀ ಅವರು ತೀರಿಕೊಂಡು ಆಗ ಹೆಚ್ಚು ಸಮಯವಾಗಿರಲಿಲ್ಲ. ನನಗೆ ಇಂದೂ ಕೂಡಾ ಸರಿಯಾಗಿ ನೆನಪಿದೆ, ಅವರ ಮಾತೃಶ್ರೀ ಅವರು ತೀರಿಕೊಂಡ ಹನ್ನೆರಡನೇ ದಿವಸ ನನಗೆ ಪವಮಾನ ಸೂಕ್ತ ಪಾಠ ಮಾಡಿದ್ದ ಕೃಷಿ ಕೆದಿಲಾಯರೆಂದೇ ಪ್ರಸಿದ್ಧರಾಗಿದ್ದ ನಾರಾಯಣ ಕೆದಿಲಾಯರೊಂದಿಗೆ ಕಾರಂತರ ಮನೆಗೆ ಹೋಗಿದ್ದೆ ಮಾತ್ರವಲ್ಲ, ಸ್ವರ್ಗ ಪ್ರಾಪ್ತಿಗಾಗಿ ಮಾಡಿದ್ದ ಪವಮಾನ ಹೋಮದಲ್ಲಿ ನಾನೂ ಸಕ್ರಿಯವಾಗಿ ಭಾಗವಹಿದ್ದೆ; ಆದರೆ ನನ್ನ ದುರಂತ ನೋಡಿ, ಅದೇ ಕಾರಂತರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡುವ ಮೂಲಕ ನರಕ ಯಾತನೆ ಅನುಭವಿಸುವಂತೆ ಮಾಡಿದ್ದರು.ಪಾಪ ಅವರಾದರೋ ಸರಕಾರದ ಕಾನೂನಿಂತೆ ವರ್ತಿಸಿದ್ದರು. ಆದರೆ ಕಾರಂತರ ಮಾತೃಶ್ರೀಯವರಿಗೆ ಸ್ವರ್ಗಕ್ಕಾಗಿ ಪ್ರಾರ್ಥನೆ, ಪ್ರಾರ್ಥಿಸಿದ ನನಗಾದರೋ ನರಕ! ಎಂತಹ ವೈರುಧ್ಯ!! ಹೊಡೆತದ ನೋವು ವಾಸಿಯಾದ ನಂತರ ಮತ್ತೆ ಸತ್ಯಾಗ್ರಹಕ್ಕೆ ಧುಮುಕಿದೆವು. ಅದೇ ಉಪ್ಪಿನಂಗಡಿಯಲ್ಲಿ ನಮ್ಮ ಸಾರ್ವಜನಿಕ ಪ್ರತಿಭಟನಾ…
ಬಂಟ್ವಾಳ: ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಇಂದು (04.07.2025) ಬಂಟ್ವಾಳ ತಹಶಿಲ್ದಾರ್ ರಜೆ ಘೋಷಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗೆ ನಮ್ಮ ಸುತ್ತಮುತ್ತಲೇ ಹಲವಾರು ಮಂದಿ ಪ್ರತಿಭಟನಕಾರರ ಬಂಧನಕ್ಕೆ ವ್ಯೂಹ ರಚಿಸಲಾಗಿದೆ ಅನ್ನುವ ವರ್ತಮಾನಗಳು ಅಥವಾ ಗಾಳಿ ಸುದ್ದಿಗಳು ಅಲ್ಲಲ್ಲಿ ಹರಡುತ್ತಿದ್ದವು. ಈಗ ಪ್ರತಿಯೊಬ್ಬ ಪ್ರತಿಭಟನಾಕಾರರು ಕೂಡಾ ತಮ್ಮ ತಮ್ಮ ಹೆಗಲು ನೋಡಲು ಆರಂಭಿಸಿದರು, ಯಾರ ಬಂಧನ ಯಾವಾಗ ಎಲ್ಲಿ ಆಗುತ್ತದೆ ಅನ್ನುವ ಕುತೂಹಲವೋ ಅಥವಾ ಭಯ ಮಿಶ್ರಿತ ವಾತಾವರಣವೋ ಅಂತೂ ಎಲ್ಲಾ ಕಡೆಗಳಲ್ಲೂ ಪಿಸುಗುಟ್ಟುವಿಕೆ ಆರಂಭವಾಯಿತು. ಆದರೆ ಈ ಹೆಚ್ಚಿನ ಕಾಂಗ್ರೆಸಿರು ಹಾಗೂ ಕಮ್ಯುನಿಸ್ಟಿನವರು ಇದ್ದಾರಲ್ಲ ಅವರೆಲ್ಲ ಎದೆಯುಬ್ಬಿ ಹೆಮ್ಮೆಯಿಂದ ಠಳಾಯಿಸುತ್ತಿದ್ದರು. ತಮಗಾಗದವರು ಯಾರಾದರೂ ಇದ್ದರೆ ಒಂದು ತಳ್ಳಿ ಅರ್ಜಿ ಹಾಕಿ ಏನಾದರೂ ಮಾಡಿ ಬಂಧನ ಮಾಡಿಸಬಹುದಾಗಿತ್ತು. ಈಗಂತೂ ಎಲ್ಲರನ್ನೂ ಎಲ್ಲರೂ ಸಂಶಯದಿಂದಲೇ ನೋಡುವ ಪ್ರವೃತ್ತಿ ಆರಂಭವಾಯಿತು. ಈಗ ಕೇಂದ್ರ ಸರಕಾರ ಪ್ರತಿಭಟನಾಕಾರರ ಮೇಲೆ DIR(defence Indian rule)ನ್ನು ಜಾರಿ ಮಾಡಿ, ಆ ಕಾನೂನಿನ ಮೂಲಕ ಬಂಧನ ಸತ್ರ ಆರಂಭವಾಯಿತು. ಬಂಧನದಿಂದ ಯಾವಾಗ ಬಿಡುಗಡೆ ಹೊಂದುತ್ತಾರೆ ಅನ್ನುವ ಖಾತರಿ ಇಲ್ಲಿ ಇಲ್ಲ; ಆದರೆ ಎಲ್ಲಿ ಇಟ್ಟಿದ್ದಾರೆ ಹಾಗೂ ಬಂಧನದ ಉದ್ದೇಶ…
ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ ಓ ಕೆಲಸದಿಂದ ಕೈ ಬಿಡಿ-: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಆಗ್ರಹ
ಬಂಟ್ವಾಳ: ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಓ ಕೆಲಸದಿಂದ ಕೈಬಿಡುವಂತೆ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಆಗ್ರಹಿಸಿದೆ. ಬುಧವಾರ ಬಿ.ಸಿ.ರೋಡಿನಲ್ಲಿ ಸಂಘದ ಅಧ್ಯಕ್ಷೆ ವಿಜಯವಾಣಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ಅನೇಕ ಮಂದಿ ಅಂಗನವಾಡಿ ಕಾಯಕರ್ತೆಯರು ಬಿಎಲ್ಓಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಉಳಿದ ಕಾರ್ಯಕರ್ತೆಯರಿಗೂ ಅವರ ಗಮನಕ್ಕೆ ಬಾರದೆ ಬಿಎಲ್ಓಗಳಾಗಿ ನೇಮಕ ಮಾಡಲಾಗಿದೆ. ಸಿ ದರ್ಜೆ ನೌಕರರನ್ನು ಬಿಎಲ್ಓಗಳಾಗಿ ನೇಮಿಸಬೇಕೆಂದು ಚುನಾವಣ ಆಯೋಗದಿಂದ ಸೂಚನೆ ಬಂದಿದ್ದು ಈ ಕಾರಣಕ್ಕಾಗಿ ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತಿ ಸಿಬ್ಬಂದಿಗಳನ್ನು ಬಿಎಲ್ಓ ಕೆಲಸದಿಂದ ಮುಕ್ತಗೊಳಿಸಲಾಗಿದೆ. ಆದರೆ ಗೌರವ ಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಓ ಕೆಲಸದಿಂದ ಕೈ ಬಿಡದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಸಿ ದರ್ಜೆ ನೌಕರರೆಂದು ಪರಿಗಣಿಸಿದರೆ ಬಿಎಲ್ಓ ಕೆಲಸ ಮಾಡುವುತ್ತೇವೆ ಎಂದ ಅವರು ಈಗಾಗಲೇ ಪೋಷಣ್ ಟ್ರಾಕರ್ನಲ್ಲಿ ತುಂಬಾ ಕೆಲಸದ ಒತ್ತಡ ಇದ್ದು ಬೇರೆ ಇಲಾಖೆ ಕೆಲಸ ಮಾಡಲು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಕೂಡಲೇ ಬಿಎಲ್ಓ ಕೆಲಸದಿಂದ ಅಂಗನವಾಡಿ…
ಹೀಗೆ ಪೊಲೀಸ್ ಸ್ಟೇಷನಿನಲ್ಲಿ ಕೂತವರು ಮಧ್ಯಾಹ್ನವೋ ಸಂಜೆಯೋ ಹಿಂತಿರುಗಿ ಬರುತ್ತಿದ್ದೆವು. ಒಂದೆರಡು ಸಲ ಪೋಲೀಸ್ ಸ್ಟೇಷನ್ನಿನಲ್ಲೇ ಊಟವೂ ಸಿಕ್ಕಿತ್ತು. ಮುಂದಕ್ಕೆ ಅನುಕಂಪ ಪಡೆಯುವುದಕ್ಕಾಗಿ ಮಹಿಳೆಯರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೆವು. ಪೊಲೀಸರಿಗೆ ಇಕ್ಕಟ್ಟಿನ ಸ್ಥಿತಿ; ಇವರನ್ನು ಬಂಧಿಸುವುದಾದರೂ ಹೇಗೆ ಅನ್ನುವುದೇ ಸಮಸ್ಯೆ. ನೇರವಾಗಿ ಸ್ಟೇಷನ್ನಿಗೆ ತಂದರೂ ಅವರನ್ನು ಇಟ್ಟುಕೊಳ್ಳುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ. ಮುಂದಿನ ದಿನಗಳಲ್ಲಿ ಏನೇನೋ ಅವರನ್ನು ಪುಸಲಾಯಿಸಿ ಅವರ ಭಾಗವಹಿಸುವ ಸಂಖ್ಯೆಯನ್ನು ಕಡಿಮೆ ಮಾಡಿದರು. ಮುಂದಿನ ದಿನಗಳಲ್ಲಿ ಮಂದುವರಿಯುತ್ತಾ ಇದ್ದಂತೆ, ನಮ್ಮನ್ನೆಲ್ಲಾ ಅಲ್ಲೇ ಇರುವ ಸೆಲ್ಲಿನೊಳಗೆ ತಳ್ಳಿ, ರಾತ್ರೆ ಒಂದು ಗಂಟೆಗೆಲ್ಲ ಬಿಡುವುದರ ಮೂಲಕ ಶಿಕ್ಷೆಯ ರುಚಿ ಹತ್ತಿಸಲು ಆರಂಭಿಸಿದರು. ಸಮಸ್ಯೆ ಎಂದರೆ ಆ ಮಧ್ಯರಾತ್ರಿಯಲ್ಲಿ ವಾಹನಗಳು ಸಿಗುವುದಾದರೂ ಹೇಗೆ ನೀವೇ ಹೇಳಿ! ಆಗ ಸುಬ್ರಹ್ಮಣ್ಯದ ಕಡೆಯಿಂದ ಬಿಳಿನೆಲೆ, ನೆಟ್ಟಣ, ಕೊಂಬಾರು ಮೊದಲಾದ ಕಡೆಗಳಿಂದ ರಾತ್ರೆ ಹೊತ್ತಲ್ಲಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದರು. ಅದು ಅಧಿಕೃತವೋ ಅನಧಿಕರತವೋ ಗೊತ್ತಿಲ್ಲ, ಲಾರಿಗಳನ್ನು ನಿಲ್ಲಿಸಿಯೋ ಮಾರ್ಗಕ್ಕೆ ಅಡ್ಡ ನಿಂತೋ ಅಂತೂ ಲಾರಿ…
ಸರಕಾರಿ ಪದವಿಪೂರ್ವ ಕಾಲೇಜು ಸಜೀಪಮೂಡ ಇದರ ಪ್ರೌಢಶಾಲಾ ವಿಭಾಗದ 2025-26 ನೇ ಸಾಲಿನ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲೆಯ ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಯೋತಿಯು ಕತ್ತಲೆಯನ್ನು ಹೊಡೆದೋಡಿಸಿ ಎಲ್ಲೆಡೆ ಬೆಳಕನ್ನು ಪಸರಿಸುವಂತೆ ನಮ್ಮ ಶಾಲೆಯ ಸಂಘಗಳು ವಿದ್ಯಾರ್ಥಿಗಳಲ್ಲಿ ಜ್ಞಾನಜ್ಯೋತಿಯನ್ನು ಬೆಳಗುವಂತಾಗಲಿ ಎಂದು ಆಶಿಸಿದರು. ಶಾಲೆಯ ಹಿರಿ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ವಿವಿಧ ಸಂಘಗಳನ್ನು ಉದ್ಘಾಟಿಸಿದರು. ವಿಜ್ಞಾನ ಸಹಶಿಕ್ಷಕರಾದ ವೆಂಕಟರಮಣ ಆಚಾರ್ಯ ಪ್ರಾಸ್ತವಿಕವಾಗಿ ಮಾತನಾಡಿ ಸಂಘಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮಾನವೀಯ ಮೌಲ್ಯಗಳಾದ ಶಿಸ್ತು ಸಂಯಮ ನಾಯಕತ್ವ ಸೃಜನಶೀಲತೆ ಪ್ರಾಯೋಗಿಕ ಮನೋಭಾವನೆಗಳು ಮತ್ತು ತಾರ್ಕಿಕ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಬೆಳೆದುಬಂದು ಪರಿಪೂರ್ಣವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಸಹ ಶಿಕ್ಷಕಿ ಹೇಮಾವತಿ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಸಹ ಶಿಕ್ಷಕರಾದ ಸುಲೋಚನಾ ನಿರೂಪಿಸಿ, ಗಣೇಶ್ ವಂದಿಸಿದರು. .








