![](https://aksharanews.in/wp-content/uploads/2024/02/9FECB0B6-7251-4182-986B-DF98C3ABF0D3-768x1024.jpeg)
ಬಂಟ್ವಾಳ: ನಾವೂರು ಗ್ರಾಮದ ಫರ್ಲಾ ಚರ್ಚ್ ಬಳಿ ಸರ್ಕಾರಿ ಬಸ್ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ ನಡೆದಿದ್ದು ಈ ಸಂದರ್ಭ ಹೆದ್ದಾರಿ ಪಕ್ಕದಲ್ಲಿರುವ ಮನೆಗೆ ಸರಕಾರಿ ಬಸ್ಸು ಡಿಕ್ಕಿಯಾಗಿ ಹಾನಿಯಾಗಿದೆ. ಧರ್ಮಸ್ಥಳ ಕಡೆಯಿಂದ ಕೆಎಸ್ಆರ್ ಟಿಸಿ ಬಸ್ಸು ಬರುತ್ತಿದ್ದು ವಿರುದ್ದ ದಿಕ್ಕಿನಿಂದ ಟ್ಯಾಂಕರ್ ಲಾರಿ ಇನ್ನೊಂದು ಟ್ಯಾಂಕರ್ ಲಾರಿಯನ್ನು ಓವರ್ ಟೇಕ್ ಮಾಡುವ ಬರದಲ್ಲಿ ಪರಸ್ಪರ ಅಪಘಾತ ಸಂಭವಿಸಿ ಬಸ್ಸು ಹೆದ್ದಾರಿ ಪಕ್ಕ ಇರುವ ಭುಜಂಗ ಮೂಲ್ಯ ಎಂಬವರ ಮನೆಗೆ ಡಿಕ್ಕಿಯಾಗಿ ಹಾನಿ ಉಂಟಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2024/02/D086CAFC-4DB7-47D4-81C0-C0CB63E79823-768x1024.jpeg)
ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾದಾಗ ಇವರ ಜಾಗವು ಭೂಸ್ವಾಧಿನವಾಗಿದ್ದು ಈ ಮನೆಯರಿಗೆ ಪರಿಹಾರ ಹಣ ಬಾರದೆ ಮನೆಯನ್ನು ಸ್ಥಳಂತರಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2024/01/aksharanews-ad.jpg)