![](https://aksharanews.in/wp-content/uploads/2023/11/A9249928-E384-4176-8D71-B1A895741468.jpeg)
ಬಂಟ್ವಾಳ: ಅಂಗನವಾಡಿ ಕೇಂದ್ರದ ಬೀಗ ಮುರಿದ ಕಳ್ಳರು ಪಾತ್ರೆ ವಸ್ತುಗಳು ಸಹಿತ ದಿನಸಿ ಹಾಗೂ ನಗದು ಕಳವು ನಡೆಸಿದ ಘಟನೆ ತಾಲೂಕಿನ ಬೊಂಡಾಲ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಕುಕ್ಕರ್, 1 ಸಾವಿರ ರೂಪಾಯಿ ನಗದು ಹಾಗೂ ದಿನಸಿ ಸಾಮಾಗ್ರಿ ಕಳ್ಳರ ಪಾಲಾಗಿದೆ.
![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದ ದೇವಕಿಯವರು ಬುಧವಾರ ಕಚೇರಿಯಲ್ಲಿ ಮಿಟಿಂಗ್ ಇದ್ದ ಕಾರಣ ಅಂಗನವಾಡಿಗೆ ಬಾರದೇ, ಅಡುಗೆ ಸಹಾಯಕಿಯಾದ ವಿಜಯಶ್ರೀಯವರು ಅಂಗನವಾಡಿಯಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4.00 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಿ ಅಂಗನವಾಡಿಗೆ ಬೀಗ ಹಾಕಿ ತೆರಳಿದ್ದಾರೆ.
![](https://aksharanews.in/wp-content/uploads/2023/10/F6A1C0F9-F074-49C6-A1BC-FA24B19DEB85-512x1024.jpeg)
ಗುರುವಾರ ಬೆಳಿಗ್ಗೆ 9 ಗಂಟೆಗೆ ಅಡುಗೆ ಸಹಾಯಕಿ ವಿಜಯಶ್ರೀ ಅಂಗನವಾಡಿಗೆ ಬಂದಾಗ, ಕಳ್ಳರು ಬಾಗಿಲ ಬೀಗ ಮುರಿದು ಅಂಗನವಾಡಿ ಒಳಗೆ ಇದ್ದ 2 ಅಲ್ಯುಮಿನಿಯಂ ಕುಕ್ಕರ್ 1ಅಲ್ಯುಮಿನಿಯಂ ಡಬ್ಬ , ರೂ, 1000ನಗದು ಹಾಗೂ ದಿನಸಿ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://aksharanews.in/wp-content/uploads/2024/01/aksharanews-ad.jpg)