![](https://aksharanews.in/wp-content/uploads/2023/05/1C013210-D87A-4566-BCEC-70FE73B40FC3-1024x461.jpeg)
ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭವು ಆಸ್ಪತ್ರೆಯ ಆವರಣದಲ್ಲಿ ನೆರವೇರಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿ?ಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಆರೋಗ್ಯ ಸೇವೆಯನ್ನು ಪ್ರಮುಖ ಉದ್ದೇಶವನ್ನಾಗಿಸಿ ಬೆಳೆದು ಬಂದಿರುವ ಫಾದರ್ ಮುಲ್ಲರ್ ವೈದ್ಯಕೀಯ ಸಂಸ್ಥೆಗಳು ನಗುಮೊಗದ ಸ್ವಾಗತದೊಂದಿಗೆ ರೋಗಿಗಳ ಆರೈಕೆಯನ್ನು ಮಾಡಿದ್ದು, ಇಲ್ಲಿನ ವೈದ್ಯರು, ಸಿಬಂದಿಯ ಸೇವೆ ದೇವರ ಪ್ರೀತಿಗೆ ಪಾತ್ರವಾಗಿದೆ. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ನೀಡುವುದಕ್ಕೆ ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಕಠಿನ ಶ್ರಮ ಪಡುತ್ತಿದ್ದು, ನಿಮ್ಮ ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಎಂದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಮಾತನಾಡಿ, ವಿಶೇ? ವಿನ್ಯಾಸದಿಂದ ಬಿಎ ಗ್ರೂಪ್ನವರು ರೂಪಿಸಿದ ಆಸ್ಪತ್ರೆಯನ್ನು ಫಾದರ್ ಮುಲ್ಲರ್ ಸಂಸ್ಥೆಯು ಮುನ್ನಡೆಸಿ ಪ್ರಸ್ತುತ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಗ್ರಾಮೀಣ ಭಾಗದ ಜನತೆಯ ಜತೆಗೆ ಸ್ಥಳೀಯ ಪಂಚಾಯತ್ ಕೂಡ ಉತ್ತಮ ಸಹಕಾರ ನೀಡಿದ ಫಲವಾಗಿ ಆಸ್ಪತ್ರೆ ಬೆಳೆಯಲು ಸಾಧ್ಯವಾಗಿದೆ ಎಂದರು.
ಮೆಡಿಕಲ್ ಕಾಲೇಜು ಡೀನ್ ಡಾ| ???ಂಟನಿ ಸಿಲ್ವಿಯನ್ ಡಿಸೋಜ ಮಾತನಾಡಿ, ಆರೋಗ್ಯ ಕ್ಷೇತ್ರವು ಹಲವು ಸವಾಲುಗಳಿಂದ ಕೂಡಿದ್ದು, ಇಲ್ಲಿನ ನುರಿತ ವೈದ್ಯರು, ದಾದಿಯರು, ತಾಂತ್ರಿಕ ಸಿಬಂದಿಯ ಶ್ರಮದಿಂದ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಈಡೇರಿಸಿದ್ದೇವೆ. ಜತೆಗೆ ಆಡಳಿತ ಮಂಡಳಿಯೂ ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದರು.
![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಕಿರಣ್ ಶೆಟ್ಟಿ, ಫಾದರ್ ಮುಲ್ಲರ್ ನಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸಿ| ಧನ್ಯ ದೇವಸ್ಯ ವೇದಿಕೆಯಲ್ಲಿದ್ದರು. ವಂ| ಫಾ| ರೋಶನ್ ಕ್ರಾಸ್ತಾ, ವಂ| ಫಾ| ಅಜಿತ್ ಮೆನೇಜಸ್, ವಂ| ಫಾ| ರುಡಾಲ್ ಡೇಸಾ ಉಪಸ್ಥಿತರಿದ್ದರು.
ವೈದ್ಯಕೀಯ ಅಧೀಕ್ಷಕರು ಸೇರಿದಂತೆ ಆಸ್ಪತ್ರೆಯಲ್ಲಿ ಸುದೀರ್ಘ ಸಮಯ ಕರ್ತವ್ಯ ನಿರ್ವಹಿಸಿದವರನ್ನು ಗೌರವಿಸಲಾಗಿದ್ದು, ಸಿಲ್ವಿಯಾ ಲೋಬೊ ಅವರು ವಿವರ ನೀಡಿದರು. ದಶಮಾನೋತ್ಸವ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
![](https://aksharanews.in/wp-content/uploads/2023/04/E1DF6126-69B8-425F-AC1E-A6A5F5124EC0-655x1024.jpeg)
ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ| ಸರಿತಾ ಲೋಬೊ ವಂದಿಸಿದರು. ಡಾ| ದೀಕ್ಷಿತ್ ಶೆಟ್ಟಿ ಹಾಗೂ ಡಾ| ಸೌಮ್ಯ ಅರನ್ಹಾ ಕಾರ್ಯಕ್ರಮ ನಿರ್ವಹಿಸಿದರು.
![](https://aksharanews.in/wp-content/uploads/2024/01/aksharanews-ad.jpg)