![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/04/245552A4-8F7E-4116-8795-2322C27BDE1E-1024x768.jpeg)
ಬಂಟ್ವಾಳ : ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಇಂದು ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ್ ಎಸ್.ಬಿ ಕೂಡಲಗಿ ಅವರು ದೀಪ ಪ್ರಜ್ವಲಿಸಿ ಸರ್ವಧರ್ಮ ಸಮಭಾವ ಇರುವ ನಮ್ಮ ದೇಶದಲ್ಲಿ ಅಹಿಂಸೆಯ ಮೂಲಕ ಸಮನ್ವಯತೆಯಿಂದ ಬಾಳ ಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ದೀಪಕ್ ಕುಮಾರ್ ಅವರು ಮಾತನಾಡಿ ಬದುಕು, ಬದುಕಲು ಬಿಡು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತ. ಅಹಿಂಸೆಯಿಂದ ಸುಖ , ತ್ಯಾಗದಿಂದ ಶಾಂತಿ ಈ ಸಂದೇಶವು ಎಂದಿಗೂ ಸತ್ಯವಾಗಿರುತ್ತದೆ ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
![](https://aksharanews.in/wp-content/uploads/2023/04/4D2BF4E3-A09E-48C6-BC62-0688833AAAE7-1024x576.jpeg)
ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಲಯ ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ವಿಜಯ ಕುಮಾರಿ ಇಂದ್ರ, ಸನ್ಮತಿ ಇಂದ್ರ, ಗೀತಾ ಜಿನಚಂದ್ರ,ಚಂದನಾ ಬ್ರಿಜೇಶ್ ಬಾಳ್ತಿಲ, ಹೇಮಂತ್ ಜೈನ್, ಜಿನೇಂದ್ರ ಜೈನ್,
ಅಜಿತ್ ಕುಮಾರ್, ರಾಜೇಂದ್ರ ಜೈನ್, ಪ್ರವೀಣ್ ಕುಮಾರ್, ಸುರೇಶ್ ಜೈನ್, ಭೋಜರಾಜ್ ಜೈನ್ ವಗ್ಗ, ರಾಜೇಂದ್ರ ಪೆರ್ಲ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್
ಉಪಸ್ಥಿತರಿದ್ದರು.
![](https://aksharanews.in/wp-content/uploads/2024/01/aksharanews-ad.jpg)