![](https://aksharanews.in/wp-content/uploads/2024/01/BA292903-736E-450C-BF0A-3E66FA82F124-684x1024.jpeg)
ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಭಾನುವಾರ ಬ್ರಹ್ಮ ಶ್ರೀ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ನೆರವೇರಿತು.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2024/01/D5ACBE8F-401D-4D18-9128-1A855B8EDE73-1024x684.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಬೆಳಿಗ್ಗೆ ೧೦.೦೫ರ ಮೀನ ಲಗ್ನ ಸುಮೂಹೂರ್ತದಲ್ಲಿ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಷೇಕ ನಡೆದು ಧಾರ್ಮಿಕ ಸಭೆ ನಡೆಯಿತು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳೀನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು.
![](https://aksharanews.in/wp-content/uploads/2024/01/7CBD9E4B-8B6D-493E-8E98-830A8DDC9BF7-1024x684.jpeg)
![](https://aksharanews.in/wp-content/uploads/2024/01/09B8A567-6AEA-4D30-984F-04AA445739B7-684x1024.jpeg)
![](https://aksharanews.in/wp-content/uploads/2024/01/41E6C753-7ED9-49FD-8FDD-72C1F3A4664C-1024x684.jpeg)
ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಕೃಷ್ಣಕುಮಾರ ಪೂಂಜ, ಸಂತೋಷ್ ಶೆಟ್ಟಿ, ರಂಗನಾಥ್ ಶೆಟ್ಟಿ, ರವೀಂದ್ರ ಶೆಟ್ಟಿ, ಲಕ್ಷ್ಮೀಪ್ರಸಾದ್ ಶೆಟ್ಟಿ, ಡಾ. ಮಂಜಯ್ಯ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ದಕ್ಷರಾಜ್ ಶೆಟ್ಟಿ, ಸುದೇಶ್ ರೈ ಬಾರಿಂಜೆ, ಸಂಪತ್ ಕುಮಾರ್ ಶೆಟ್ಟಿ, ದೇವದಾಸ್ ಹೆಗ್ಡೆ ಅಮುಂಜೆಗುತ್ತು, ನಿಕ್ಷಾ ನಾಯ್ಕ್ , ಪ್ರಫುಲ್ಲ ವಿ. ಶೆಟ್ಟಿ, ಜ್ಯೋತಿ ಎ. ಶೆಟ್ಟಿ, ನಾಗವೇಣಿ ಡಿ. ಶೆಟ್ಟಿ, ವನಿತಾ ಎಸ್. ರೈ, ರಕ್ಷಾ ಮಲ್ಲಿ ಅಮುಂಜೆಗುತ್ತು ಉಪಸ್ಥಿತರಿದ್ದರು.
ಮ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ ಸಂಕೀರ್ತನೆ ನಡೆಯಿತು. ರಾತ್ರಿ ಶ್ರೀದೇವರಿಗೆ ರಂಗಪೂಜೆ ನಡೆದು ಬಲಿ ಉತ್ಸವ ಜರುಗಿತು.
![](https://aksharanews.in/wp-content/uploads/2024/01/B2230DFF-44EE-45ED-8620-4F7A00326196-684x1024.jpeg)
![](https://aksharanews.in/wp-content/uploads/2024/01/aksharanews-ad.jpg)