![](https://aksharanews.in/wp-content/uploads/2023/07/DD8D78B3-67CA-444F-A79C-CA66234AE0FF-1024x685.jpeg)
ಬಂಟ್ವಾಳ: ಹಿಂದುಳಿದ ಜಾತಿ ಸಮುದಾಯಕ್ಕೂ ಐಎಎಸ್. ಐಪಿಎಸ್ ಮತ್ತು ಕೆಎಎಸ್ ಉಚಿತ ತರಬೇತಿ ಅವಕಾಶ ನೀಡುವಂತೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ, ನಿ. ಅಧ್ಯಕ್ಷ ಪ್ರಭಾಕರ ಪ್ರಭು ಮುಖ್ಯಮಂತ್ರಿಯವರನ್ನು ಪತ್ರದ ಮೂಲಕ ಆಗ್ರಹಿಸಿದಾರೆ.
![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
2023-24ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ನಲ್ಲಿ ರಾಜ್ಯದ ಅಲ್ಪಸಂಖ್ಯಾತ ಜಾತಿಗೆ ಸೇರಿದ ಮುಸ್ಲಿಂ ರಿಗೆ ಐಎಎಸ್, ಐಪಿಎಸ್, ಕೆಎಎಸ್, ಮುಂತಾದ ಪದವಿ ಪಡೆಯಲು ಉಚಿತ ವಸತಿ ಸಹಿತ ಉಚಿತ ತರಬೇತಿ ನೀಡುವ ಬಗ್ಗೆ ಉಲ್ಲೇಖ ಮಾಡಿರುತ್ತೀರಿ.ಆದರೆ ಕರ್ನಾಟಕದಲ್ಲಿ ಶೇ.40 ರಷ್ಟು ಜನ ಹಿಂದುಳಿದ ವರ್ಗಗಳ ಜಾತಿಗೆ ಸೇರಿದವರಾಗಿದ್ದು ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಬಗ್ಗೆ ಯಾವುದೇ ವಿಷಯ ಪ್ರಕಟಿಸಿವುದಿಲ್ಲವಾದ್ದರಿಂದ ಹಿಂದುಳಿದ ವರ್ಗದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ.
![](https://aksharanews.in/wp-content/uploads/2023/05/D4611538-B39D-4E5E-9556-CB5EB83F682B-798x1024.jpeg)
ಆದುದರಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಮತ್ತು ಕೆಎಎಸ್ ಪದವಿ ಪಡೆಯಲು ನೀಡುವ ಉಚಿತ ವಸತಿ ಸಮೇತ ತರಬೇತಿಯನ್ನು ರಾಜ್ಯದ ಇತರೇ ಹಿಂದುಳಿದ ವರ್ಗದವರಿಗೂ ವಿಸ್ತರಣೆ ಮಾಡುವಂತೆ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.
![](https://aksharanews.in/wp-content/uploads/2024/01/aksharanews-ad.jpg)