
ನಿತಿನ್ ಪೂಜಾರಿ ನಂದರಬೆಟ್ಟು ಆಯ್ಕೆ
ಬಂಟ್ವಾಳ : ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 2023-24 ನೇ ಸಾಲಿನ
ವಾರ್ಷಿಕ ಮಹಾ ಸಭೆಯು ಭಾನುವಾರ ಅಲೆತ್ತೂರು ಮಂಗಳಾ ಭವನದಲ್ಲಿ ನೇಮಿರಾಜ ಶೆಟ್ಟಿ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ನಿತಿನ್ ಪೂಜಾರಿ ನಂದರಬೆಟ್ಟು ಉಪಾದ್ಯಕ್ಷರಾಗಿ ದಿನೇಶ್ ಸುವರ್ಣ , ಕಾರ್ಯದರ್ಶಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಂಘಟನನಾ ಕಾರ್ಯದರ್ಶಿಯಾಗಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಅಕ್ಷಯ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಲೋಹಿತ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ್ ಕುಮಾರ್ ಭಾಸ್ಕರ್ ಕುಲಾಲ್, ವಾಸುದೇವ, ವಿಶ್ವನಾಥ ಪೈ ಆಯ್ಕೆಯಾದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ, ಹಿಮಕರ ಪೂಜಾರಿ, ವಿಶ್ವನಾಥ ಪೂಜಾರಿ, ನಾರಾಯಣ ಪೂಜಾರಿ
ಉಪಸ್ಥಿತರಿದ್ದರು.

