![](https://aksharanews.in/wp-content/uploads/2023/04/77B4CC92-45E7-4363-ACE7-F2253A3854C3-1024x682.jpeg)
ಬಂಟ್ವಾಳ: ಮುಂದಿನ ಅವಧಿಯಲ್ಲಿ ಬಿಜೆಪಿಯ ಶಾಸಕರೇ ಆಯ್ಕೆಯಾಗುವ ದೃಷ್ಟಿಯಿಂದ ಹಿರಿಯರ, ಮತದಾರರ,ಕಾರ್ಯಕರ್ತರ ಆಶೀರ್ವಾದ ಪಡೆಯಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ, ನೀವು ನನ್ನ ಜೊತೆಯಾಗಿ ನಿಂತು ಬೆಂಬಲ ನೀಡಿದರೆ ಅದುವೇ ದೊಡ್ಡ ಶಕ್ತಿ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದರು.
ಕೊಳ್ನಾಡು ಶಕ್ತಿ ಕೇಂದ್ರದ ಮುಂಡಪ್ಪ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಜಧರ್ಮದ ರಾಜಕಾರಣದ ಮೂಲಕ ಕ್ಷೇತ್ರದಲ್ಲಿ ಸರ್ವರಿಗೂ ಸಮಾನವಾದ ರೀತಿಯ ಜನಪರವಾದ ಆಡಳಿತವನ್ನು ಮಾಡಿದ್ದೇನೆ, ನನ್ನ ಅಧಿಕಾರಕ್ಕೆ ಕ್ಷೇತ್ರದ ಜನತೆ ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ವೇದಿಕೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಜಿ.ಪಂ.ನಿಕಟಪೂರ್ವ ಸದಸ್ಯ ರವೀಂದ್ರ ಕಂಬಳಿ,
ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಮಾಧವ ಮಾವೆ, ಜಯರಾಮ ಕುಟ್ರಕಲ , ಪುಷ್ಪರಾಜ ಚೌಟ, ಪ್ರಕಾಶ್ ಅಂಚನ್, ಅಭಿಷೇಕ್ ರೈ,ವಿಶ್ವನಾಥ ಪೂಜಾರಿ ಕೋಡಿ, ಗ್ರಾ.ಪಂ.ಸದಸ್ಯರಾದ ರಾಜಾರಾಂ ಹೆಗ್ಡೆ ಕುದ್ರಿಯಾ, ಹರೀಶ್ ಕುಡ್ತಮುಗೇರು,ಪ್ರಶಾಂತ್ ಶೆಟ್ಟಿ, ಲೋಹಿತ್ ಕೆಳಗಿನ ಅಗರಿ, ಕೃಷ್ಣಪ್ಪ ಪೂಜಾರಿ ಕುಡ್ತಮುಗೇರು, ಸೌಮ್ಯಲತಾ ಕಾಡುಮಠ, ಅನಿತಾ ಶೆಟ್ಟಿಗಾರ್, ಕಿಶೋರ್ ದೇವಾಡಿಗ, ಶಶಿಕಲಾ ಕುದ್ರಿಯಾ, ಪ್ರಮುಖರಾದ ನಾರಾಯಣ ಶೆಟ್ಟಿ ಕುಲ್ಯಾರು, ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಕಾಂಗ್ರೆಸ್ ಬೆಂಬಲಿತ ಗ್ರಾಮಪಂಚಾಯತ್ ಮಾಜಿ ಸದಸ್ಯ ಜಗದೀಶ್ ರೈ, ಗ್ರಾ.ಪಂ.ಸದಸ್ಯೆ ವಸಂತಿ , ಕಾರ್ಯಕರ್ತೆ ಮೋಹಿನಿ ಕಾಡುಮಠ ಅವರು ಬಿಜೆಪಿ ಪಕ್ಷದ ಸಿದ್ದಾಂತ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಶಾಸಕ ರಾಜೇಶ್ ನಾಯ್ಕ್ ಅವರು ಬಿಜೆಪಿಯ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
![](https://aksharanews.in/wp-content/uploads/2024/01/aksharanews-ad.jpg)