ಬಂಟ್ವಾಳ: ಶಾಂತಿ ಸಾಮರಸ್ಯದ ಬಂಟ್ವಾಳ ನಿರ್ಮಾಣ ನನ್ನ ಮೊದಲ ಆದ್ಯತೆಯಾಗಿದೆ. ಶಾಸಕ
ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಕಾವಳಮೂಡೂರು ಗ್ರಾಮದಲ್ಲಿ ರೂ.೮.೪೦ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
![](https://aksharanews.in/wp-content/uploads/2023/05/ak-1.jpg)
![](https://aksharanews.in/wp-content/uploads/2023/03/CCC53146-EE6D-499E-9F86-62010EF2686A-1024x682.jpeg)
ಕಾರ್ಯಕರ್ತರ ಮೇಲೆ ನಡೆಯುವ ದಬ್ಬಾಳಿಕೆ, ಸುಳ್ಳು ಕೇಸು ದಾಖಲು, ದೊಂಬಿಯ ರಾಜಕಾರಣವನ್ನು ಕೊನೆಗಾಣಿಸಬೇಕು ಎಂಬ ಕನಸು, ಆಸೆಗೆ ಕ್ಷೇತ್ರದ ಜನರು ಸಹಕಾರ ನೀಡಿದರು, ಹಾಗಾಗಿ ಕಳೆದ ಐದು ವರ್ಷಗಳಿಂದ ಶಾಂತಿಯ ನವ ಬಂಟ್ವಾಳ ನಿರ್ಮಾಣವಾಯಿತು ಎಂದರು.
ಮತ ನೀಡಿ ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಿದ ಆತ್ಮ ತೃಪ್ತಿ ಇದೆ ಎಂದ ಅವರು ಜಗತ್ತು ಮೆಚ್ಚಿದ ನಾಯಕನ ಜೊತೆಗೆ ನಾವು ಇದ್ದೇವೆ ಎಂಬುದೇ ಖುಷಿಯ ವಿಚಾರ. ವೈಯಕ್ತಿಕ ವಿಚಾರದಲ್ಲಿ ನಾನು ಈವರೆಗೆ ರಾಜಕೀಯ ಮಾಡಿಲ್ಲ. ಪಕ್ಷದ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಆದರೆ ಕಳೆದ ಐದು ವರ್ಷಗಳಲ್ಲಿ ಜನತೆ ನೀಡಿದ ಪ್ರೀತಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದು ತಿಳಿಸಿದರು.
![](https://aksharanews.in/wp-content/uploads/2023/03/FAC3EA3C-38BE-434B-8F3B-74FD1C59F233-1024x682.jpeg)
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿದರು.
ಗ್ರಾಮಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮಿ ದೇವಾಡಿಗ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
![](https://aksharanews.in/wp-content/uploads/2023/03/AC67CB48-C0A3-4016-B615-DF12E022F094-1024x682.jpeg)
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಅಜಿತ್ ಶೆಟ್ಟಿ, ಸದಸ್ಯರಾದ ಶೇಷಗಿರಿ ಕೋಡಿಮಾನ್ಯ, ಪ್ರಶಾಂತ್ ಶೆಟ್ಟಿ ಪೆರುವಾರ್, ವೀಣಾ ನಾಯ್ಕ್, ಗಣೇಶ್ ದೇವಾಡಿಗ, ರಾಜ್ ಗೋಪಾಲ್ ನಾಯಕ್, ರೇವತಿ ಮಡಿವಾಳ ಕರಂಬಾರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರಮನಾಥ ರಾಯಿ, ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರಮುಖರಾದ ಗಣೇಶ್ ಭಟ್ , ಗಣಪತಿ ಭಟ್ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ಮೋಹನ್ ಆಚಾರ್, ದಿನೇಶ್ ಶೆಟ್ಟಿ ದಂಬೆದಾರ್, ರಾಜಾರಾಂ ನಾಯ್ಕ್ , ಶರ್ಮಿತ್ ಜೈನ್, ಶುಭಕರ ಶೆಟ್ಟಿ, ಶಂಕರ್ ಶೆಟ್ಟಿ , ಸೀತಾರಾಮ್ ಶೆಟ್ಟಿ, ಖಾದರ್ ಸಾಹೇಬ್ ಇಚ್ಚಿಲ, ಲೋಕಯ್ಯ ಮಾಸ್ಟರ್, ಗಿರಿಯಪ್ಪ ಪೂಜಾರಿ ಕೊಂಬೆಲು, ರವಿ ಐತಾಳ್, ಹರೀಶ್ ಪ್ರಭು, ಲೋಹಿತ್ ಕುಮಾರ್, ರಂಜಿತ್ ಮೈರ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಮಲ ಕಲ್ಲಂಜ ಅವರಿಗೆ ಧನ ಸಹಾಯ ಮಾಡಲಾಯಿತು. ದಿನೇಶ್ ಶೆಟ್ಟಿ ಸ್ವಾಗತಿಸಿದರು. ದೇವದಾಸ್ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2024/01/aksharanews-ad.jpg)