
ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಯುವಕರ ಸಂಘ ಹಾಗೂ ಮಹಿಳಾ ಸಂಘ ದೇವಂದಬೆಟ್ಟು,ಇದರ 42ನೇ ವರ್ಷದ ವಾರ್ಷಿಕೋತ್ಸವವು ಎ.18ರಂದು ಶನಿವಾರ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆಯು ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿದಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರದಾನ ಅರ್ಚಕರಾದ ಕೆ ಶಿವರಾಮ ಶಿವರಾಯ, ಯುವಕರ ಸಂಘದ ಅಧ್ಯಕ್ಷರಾದ ಶಶಿಧರ್ ಕನಪಾಡಿ,ಕೋಶಾಧಿಕಾರಿ ಪ್ರಶಾಂತ್ ಕನಪಾಡಿ, ಪ್ರಮುಖರಾದ ಮನೋಜ್ ಕನಪಾಡಿ, ಜಗದೀಶ್ ಬಂಗೇರ ಕಂಜತ್ತೂರು,ಚೇತನ್ ದೇವಂದಬೆಟ್ಟು, ಉದಯ ದೇವಂದಬೆಟ್ಟು, ಚಂದ್ರಹಾಸ ಕರ್ಕೇರ ದೇವಂದಬೆಟ್ಟು ಮತ್ತಿತರರು ಉಪಸ್ಥಿತರಿದ್ದರು


Advertisement







