![](https://aksharanews.in/wp-content/uploads/2024/05/DBAE5885-3FD3-4785-B1A3-4EE44D5D8E40-1024x768.jpeg)
ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ವಿವಿಧ ಕ್ಷೇತ್ರಗಳ ಐದು ಮಂದಿ ಸಾಧಕರಿಗೆ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2024/05/1B1CEE2A-4152-4B5B-AB99-558EB017D8D0-1024x768.jpeg)
![](https://aksharanews.in/wp-content/uploads/2024/05/824D034A-7A11-448D-AD37-19036480E306-1024x768.jpeg)
ಮಂಗಳವಾರ ಚೆಂಡ್ತಿಮಾರ್ ನ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಜೆಸಿಐ ನ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಎಎಸೈ ವಿಜಯ್, ಹೆಡ್ ಕಾನ್ಸ್ಟೇಬಲ್ ರಾಜು ಪೂಜಾರಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುರೇಶ್, ಬಂಟ್ವಾಳ ಅಗ್ನಿಶಾಮಕ ದಳದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ್ ಹಾಗೂ ಕಾರ್ಮಿಕ ಕಿಶನ್ ಪೂಜಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
![](https://aksharanews.in/wp-content/uploads/2024/05/1956BD2C-AF3A-4FE8-9370-1B9A88956BC5-1024x768.jpeg)
![](https://aksharanews.in/wp-content/uploads/2024/05/2935CEE3-C3BB-4639-B7CD-C00492D439D0-1024x768.jpeg)
![](https://aksharanews.in/wp-content/uploads/2024/05/2620CD51-6F8B-4938-96DC-D17B7C3A2D02-1024x768.jpeg)
ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷೆ ರಶ್ಮಿ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ರಾಜೇಂದ್ರ ಕೆ. ಕಾರ್ಯದರ್ಶಿ ಶ್ರೀನಿವಾಸ್ ಅರ್ಬಿಗುಡ್ಡೆ , ಶ್ರೀ ಮಹಾಲಿಂಗೇಶ್ವರ ಭಜನಾ ಮಂದಿರದ ಅಧ್ಯಕ್ಷ ಸಂಜೀವ, ಜೆಜೆಸಿ ಅಧ್ಯಕ್ಷೆ ವೀಕ್ಷಿತಾ ಉಪಸ್ಥಿತರಿದ್ದರು. ಬಳಿಕ ಜೆಸಿಐನ ವಲಯ ತರಬೇತುದಾರರಾದ ಶೈಲಜಾ ರಾಜೇಶ್ ಅವರಿಂದ ನಾಯಕತ್ವದ ಬಗ್ಗೆ ತರಬೇತಿ ಕಾರ್ಯಗಾರ ನಡೆಯಿತು
![](https://aksharanews.in/wp-content/uploads/2024/01/aksharanews-ad.jpg)