ಬಂಟ್ವಾಳ: ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕರೆಂಕಿ ಮತ್ತು ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಇದರ ಸಹಯೋಗದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ದುರ್ಗಾ ಪೂಜೆ ಮತ್ತು ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.
ಬೆಳಿಗ್ಗೆ ಶ್ರೀ ಕ್ಷೇತ್ರದ ಗಣಪತಿ ದೇವರಿಗೆ ಗಣಪತಿ ಹವನ, ವಿಶೇಷ ಪಂಚಕಜ್ಜಾಯ ಹಾಗೂ ಸಂಜೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ದುರ್ಗಾ ಪೂಜೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಗುರುರಾಜ್ ಭಟ್ ಇವರ ನೇತೃತ್ವದಲ್ಲಿ ನೆರವೇರಿತು. ನಂತರ ಸ್ಥಳೀಯ ಪ್ರತಿಭೆಗಳಿಂದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಬಂಟ್ವಾಳ ಯುವ ವೇದಿಕೆ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ಉದ್ಘಾಟಿಸಿದರು, ವಕೀಲ ರಾಮಚಂದ್ರ ಶೆಟ್ಟಿ ದಂಡೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪ್ರಕಾಶ್ ಪೂಜಾರಿ ನರಹರಿ ನಗರ ಹಾಗೂ ದೇಜಮ್ಮ ಕರೆಂಕಿ ಇವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಭುವನೇಶ್ ಪಚ್ಚಿನಡ್ಕ, ಧರ್ಣಪ್ಪ ಪೂಜಾರಿ ರಾಮನಗರ, ಮಾಕ್ಸಿಂ ಸಿಕ್ವೇರಾ, ಧನಂಜಯ ಬಾಳಿಗಾ ಬಿ.ಸಿ.ರೋಡ್, ನೋಣಯ್ಯ ಬಂಜನ್ ನೆಕ್ಕರೆ, ಶರತ್ ಕೊಯಿಲ, ನಾರಾಯಣ ಗೌಡ ಕರೆಂಕಿ, ಉದಯ ಮೇನಾಡು, ಪೂವಪ್ಪ ಮೆಂಡನ್, ಭಾಸ್ಕರ್ ಕುಲಾಲ್, ಸುಮತಿ ಬನಿಪ್ಯಾರ್, ವಿನೋದ್ ಕರೆಂಕಿ, ತಿರುಮಲೇಶ್ ಕರೆಂಕಿ ಉಪಸ್ಥಿತರಿದ್ದರು.
ಆನಂದ ಕೆ. ಕರೆಂಕಿ ನಿರೂಪಿಸಿದರು.