![](https://aksharanews.in/wp-content/uploads/2024/05/A5600D78-F701-492F-85DE-B64B8F4EDE32-1024x484.jpeg)
ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಗುರುಸದನ , ಕುಮ್ಡೇಲು ಪುದು ಇದರ ದಶಮಾನೋತ್ಸವ ಸಂಭ್ರಮ ನಡೆಯಿತು. ಸಂಘದ ಅಧ್ಯಕ್ಷ ಬಾಬು ಪೂಜಾರಿ ಸುಜೀರು ಕೊಡಂಗೆ ಅಧ್ಯಕ್ಷತೆ ವಹಿಸಿದ್ದರು.
![](https://aksharanews.in/wp-content/uploads/2023/05/ak-1.jpg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಮಾಣಿಲ ಕುಕ್ಕಾಜೆಯ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಆಶೀರ್ವಚನ ನೀಡಿ ಜಾತಿಗಿಂತ ನೀತಿ ಮುಖ್ಯ. ಬಿಲ್ಲವರು ಸ್ವಾಭಿಮಾನಿಗಳು, ಎಲ್ಲ ಧರ್ಮದವರನ್ನು ಗೌರವಿಸಿ ಬದುಕಿದಾಗ ಭಾವೈಕ್ಯತೆಯ ಜೀವನ ನಮ್ಮದಾಗುತ್ತದೆ. ಧರ್ಮನಿಷ್ಠರಾಗಿ, ಸತ್ಯವಂತರಾಗಿ ಬದುಕೊಣ. ಮಕ್ಕಳಿಗೆ ಸಂಸ್ಕಾರ ನೀಡೋಣ ಎಂದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅನ್ಯಾಯ, ತೊಂದರೆಗೊಳಗಾದಾಗ ಎದುರಿಸಲು ಸಂಘಟನೆ ಅಗತ್ಯ ಎಂದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸಂಘಟನೆಯಿಂದ ಬಲಯುತರಾಗಲು ಸಾಧ್ಯವಿದೆ, ಪ್ರತಿಯೊಬ್ಬರಿಗೂ ವಿದ್ಯೆ ನೀಡಿದಾಗ ಉನ್ನತ ಗುರಿ ಮುಟ್ಟಲು ಸಾಧ್ಯವಿದೆ, ಆದರೆ ನಮ್ಮೊಳಗಿನ ಒಗ್ಗಟ್ಟಿನ ಕೊರತೆಯಿದೆ ಸಂಘಟತಾಗಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
![](https://aksharanews.in/wp-content/uploads/2024/05/7B69AB3B-11D0-43DC-BB46-B76F097D333B-1024x484.jpeg)
ಯುವ ವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ಮಾತನಾಡಿ ಸಂಘಟನೆ ಕಟ್ಟುವುದು ಸುಲಭ. ಅದನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟ. ಪುದು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಗ್ರಾಮೀಣ ಭಾಗದಲ್ಲಿ ಉತ್ತಮ ರೀತಿಯಲ್ಲಿ ಸಂಘಟನೆಯನ್ನು ನಡೆಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
![](https://aksharanews.in/wp-content/uploads/2024/05/74C6576A-BBB4-4C72-ADB9-4F034571220E-1024x484.jpeg)
![](https://aksharanews.in/wp-content/uploads/2024/05/311D8D3D-71DF-4435-B976-BD48D5895031-1024x484.jpeg)
ನಾರಾಯಣ ಗುರು ಯುವ ವೇದಿಕೆ ಇದರ ಕೇಂದ್ರ ಸಮಿತಿಯ ಸಲಹಾ ನಿರ್ದೇಶಕ ಪ್ರೊ. ಎಂ.ಎಸ್. ಕೋಟ್ಯಾನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು, ಸಾಧಕರನ್ನು ಗೌರವಿಸಲಾಯಿತು, ಸಹಾಯಧನ ವಿತರಿಸಲಾಯಿತು.
ವಕೀಲೆ ಸುಚಿತ್ರಾ ಅವಿನಾಶ್, ಪ್ರಮುಖರಾದ ಮೋನಪ್ಪ ಪೂಜಾರಿ , ಸತೀಶ್ ಪೂಜಾರಿ, ಗೌರವಾಧ್ಯಕ್ಷ ನಾಗಪ್ಪ ಪೂಜಾರಿ ಕಬೇಲ, ಮಹಿಳಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸೀತಾ ರಾಜೇಶ್ ಕೋಟ್ಯಾನ್ ಉಪಸ್ಥಿತರಿದ್ದರು. ಬ್ರಿಜೇಶ್ ಅಂಚನ್ ಸ್ವಾಗತಿಸಿದರು. ಕಾರ್ಯದರ್ಶಿ ಕಿಶೋರ್ ಸುಜೀರು ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಜ್ಞಾ ಪೂಜಾರಿ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಿತು.
![](https://aksharanews.in/wp-content/uploads/2024/01/aksharanews-ad.jpg)