ಬಂಟ್ವಾಳ: ನಮ್ಮ ವೃತ್ತಿ, ನಮ್ಮ ಹೆಮ್ಮೆ, ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ನಮ್ಮ ವೃತಿಯೇ ಶ್ರೇಷ್ಠ, ನಮ್ಮೆಲ್ಲರ ಬದುಕು ಎಲ್ಲರಂತೆಯೇ ಉತ್ತಮ ಗುಣಮಟ್ಟದ್ದಾಗಿದೆ, ನಮ್ಮ ವೃತಿಗೆ ಅವಹೇಳನ ಮಾಡುವರನ್ನು ಸಹಿಸಲ್ಲ ಎಂದು ದ ಕ ಜಿಲ್ಲಾ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕ ಕಾರ್ಯದರ್ಶಿ ಜನಾರ್ಧನ ಅತ್ತಾವರ ಹೇಳಿದರು.
ಅವರು ಲಯನ್ಸ್ ಸೇವಾ ಮಂದಿರ, ಬಿ. ಸಿ ರೋಡ್ ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ (ರಿ.) ( ದ. ಕ. ಮತ್ತು ಉಡುಪಿ ಜಿಲ್ಲೆ) ಬಂಟ್ವಾಳ ವಲಯ (ರಿ.) ಇದರ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಂಟ್ವಾಳ ವಲಯದ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಜಗದೀಶ್ ರೈ, ಶಶಿಧರ್ ಪೈ ಮಾರುರ್, ಯೋಗೀಶ್ ಜೆ , ದಿನಕರ್ ಕುಲಾಲ್, ದಿನಕರ್ ಎಂ, ಕಾರ್ಯದರ್ಶಿ ರಾಜೇಶ್ ಸಾಲಿಯಾನ್, ಕೋಶಾಧಿಕಾರಿ ಜನಾರ್ದನ ಕುಲಾಲ್,ಸುಧಾಕರ್ ಸಾಲಿಯಾನ್, ಶ್ರೀನಿವಾಸ್ ಸಪಲ್ಯ, ರಘು ಸಪಲ್ಯ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದ. ಕ ಜಿಲ್ಹಾ ಗ್ಯಾರೇಜ್ ಮಾಲಕರ ಸಂಘದ ಖಾಯಂ ಆಹ್ಹಾನಿತರು ಎಂ ನಾರಾಯಣ ಮಂಗಳೂರು ಹಾಗೂ ವಿನಾಯಕ ಆಟೋ ಗ್ಯಾರೇಜ್ ಬಂಟ್ವಾಳ ಇದರ ಮಾಲಕರ ಶ್ರೀ ಶ್ರೀನಿವಾಸ್ ಇವರನ್ನು ವಲಯದ ವತಿಯಿಂದ ಸಲ್ಮಾನಿಸಲಾಯಿತು.
ನೂತನ ಅಧ್ಯಕ್ಷರಾದ ಸುಧೀರ್, ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ಭಾಸ್ಕರ್ ಕುಲಾಲ್,ಉಪಾಧ್ಯಕ್ಷ ಉಮೇಶ್ ಶೆಟ್ಟಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸುಸ್ಮಿತಾ ಸೋಮನಾಥ ಸಾಲಿಯಾನ್ ಪ್ರಾರ್ಥಿಸಿ, ನವೀನ್ ಪೂಜಾರಿ .ಧನ್ಯವಾದವಿತ್ತರು,ಸಂತೋಷ ಕುಮಾರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು