ಬಂಟ್ವಾಳ: ಪೇಟೆಯಲ್ಲಿರುವ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಶ್ರೀ ದೇವರ ವರ್ಧಂತಿ ಹಾಗೂ ಶ್ರೀ ರಾಮನವಮಿ ರಥೋತ್ಸವ ಸಮಾರಂಭವು ಎ. 12ರಂದು ಆರಂಭಗೊಂಡಿದ್ದು ಎ. 18ರವರೆಗೆ ನಡೆಯಲಿದೆ.
ಬುಧವಾರ ಶ್ರೀರಾಮನವಮಿಯ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಸೀಯಾಳಾಭಿಷೇಕ ನಡೆಯಿತು. ಬಳಿಕ ಯಜ್ಞಾರಂಭಗೊಂಡು ಯಜ್ಞ ಪೂರ್ಣಾಹುತಿ ನಡೆಜu ಶ್ರೀ ದೇವರ ರಥಾರೋಹಣ, ಸಂತರ್ಪಣೆ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾತ್ರಿ ರಥೋತ್ಸವ, ವಸಂತ ಪೂಜೆ, ಅಷ್ಟಾವಧಾನ, ಪ್ರಸಾದ ವಿತರಣೆ ನಡೆಯಿತು.
Advertisement
Advertisement