![](https://aksharanews.in/wp-content/uploads/2023/08/28AB9A47-3AFF-4D70-876B-CC1E312EA192-702x1024.jpeg)
ಬಂಟ್ವಾಳ: ಕುಲಾಲ ಸುಧಾರಕ ಸಂಘ ಪುಣೆ ಇದರ ೪೫ನೇ ವಾರ್ಷಿಕ ಮಹಾಸಭೆಯು ಸೆ. 17ರಂದು ಬೆಳಿಗ್ಗೆ 10 ಗಂಟೆಗೆ ಪುಣೆಯ ಡಾ. ಶಾಮರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್ ಸಭಾಭವನದಲ್ಲಿ ನಡೆಯಲಿದೆ.
![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2023/07/B7471F87-2D08-4C18-B9B6-CD443B2D62C5.jpeg)
ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಂಗಳೂರು ಕುಲಾಲ ಭವನದ ಆರ್ಥಿಕ ಸಮಿತಿ ಉಪಾಧ್ಯಕ್ಷ ಸುನೀಲ್ ರಾಜು ಸಾಲ್ಯಾನ್, ಆರ್ಯ ಭಟ ಪ್ರಶಸ್ತಿ ವಿಜೇತರಾದ ಪ್ರವೀಣ್ ಶೆಟ್ಟಿ ಪುತ್ತೂರು, ಉದ್ಯಮಿ ದಯಾನಂದ ಸಿ. ಮೂಲ್ಯ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ , ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ನಿಕಟಪೂರ್ವಾಧ್ಯಕ್ಷ ನಾರಾಯಣ ಸಿ. ಪೆರ್ನೆ, ಮೊದಲಾದವರು ಭಾಗವಹಿಸಲಿರುವರು.
ಮಹಾಸಭೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಗೌರವಾರ್ಪಣೆ, ಕುಸಾಲ್ದ ಮಸಾಲೆ ಹಾಸ್ಯ ಪ್ರಹಸನ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
![](https://aksharanews.in/wp-content/uploads/2023/08/A2A87294-0896-4922-92B5-944893FAB6B0-1024x1021.jpeg)
![](https://aksharanews.in/wp-content/uploads/2024/01/aksharanews-ad.jpg)