ಬಂಟ್ವಾಳ: ಪವಿತ್ರ ಹಜ್ ಯಾತ್ರೆಯಲ್ಲಿ ತೊಡಗಿರುವ ಅಸಂಖ್ಯಾತ ಯಾತ್ರಿಕರ ರಕ್ಷಣೆ ಹಾಗೂ ಇತರ ಪ್ರಮುಖ ಸೇವೆಗಳಿಗೆ ಸ್ವಯಂ ಸೇವಕರಾಗಿ ಹಲವಾರು ವರ್ಷಗಳಿಂದ ಐಒಸಿ ತೊಡಗಿಸಿಕೊಂಡು ಬಂದಿದೆ. ಯಾತ್ರಿಕರಿಗೆ ಸೇವೆಯನ್ನು ಒದಗಿಸುವ ಮೂಲಕ ಶ್ಲಾಘನೆಗೆ ಪಾತ್ರವಾಗಿರುವುದರ ಜೊತೆಗೆ ಅನಾರೋಗ್ಯ ಪೀಡಿತ ಹಾಗೂ ತೀರಾ ಅಸೌಖ್ಯದಿಂದಿರುವ ಹಿರಿಯ ಹಜ್ ಯಾತ್ರಿಕರ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಆ ಕಾರಣಕ್ಕಾಗಿ ಇಂದು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
Advertisement
ಇಂಡಿಯನ್ ಓವರ್ ಶೀಶ್ ಕಾಂಗ್ರೆಸ್ (ಐ.ಓ.ಸಿ)ಇದರ ರಾಷ್ಟ್ರೀಯ ಅಧ್ಯಕ್ಷ ಜಾವೆದ್ ಕಲ್ಲಡ್ಕ ಹಾಗೂ ರಾಜ್ಯ ಕೋ-ಆರ್ಡಿನೇಟರ್ ಇಬ್ರಾಹಿಂ ಕನ್ನಂಗಾರ್ ಇವರ ನೇತೃತ್ವದಲ್ಲಿ ಸಂಘಟನೆ ಮುನ್ನಡೆಯುತ್ತಿದ್ದು ಸಂಘಟನೆ ಯಶಸ್ಸು ಕಾಣಲಿ ಎಂದು ಮೂಲರಪಟ್ನ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ. ಬಿ. ಅಶ್ರಫ್ ಮೂಲರಪಟ್ಣ ಆಶಿಸಿದ್ದಾರೆ.
Advertisement