![](https://aksharanews.in/wp-content/uploads/2024/04/0B704512-8733-488D-A41A-716AEEE7CE44-1024x454.jpeg)
ಬಂಟ್ವಾಳ:
ಈ ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಮತ್ತು ದುರ್ಬಲ ಸಮುದಾಯ ಕೂಡಾ ಬ್ಯಾಂಕಿನ ಮೆಟ್ಟಿಲು ಏರುವಂತೆ ಮಾಡಿದ ಹೆಗ್ಗಳಿಕೆ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಗೆ ಸಲ್ಲುತ್ತದೆ. ಕಳೆದ 33 ವರ್ಷಗಳಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ, ಯುವ ವಕೀಲ ಪದ್ಮರಾಜ್ ಆರ್.ಪೂಜಾರಿ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿ ಮತ್ತು ಸಮಸ್ತ ಹಿಂದುಳಿದ ವರ್ಗ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಹೇಳಿದ್ದಾರೆ.
![](https://aksharanews.in/wp-content/uploads/2023/05/ak-1.jpg)
![](https://aksharanews.in/wp-content/uploads/2024/04/69A98667-9CFB-4068-BE69-264E02BA8F97-1024x485.jpeg)
![](https://aksharanews.in/wp-content/uploads/2024/04/8A35BEBC-6962-4AF4-8D1B-7297A701544C-1024x485.jpeg)
ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
![](https://aksharanews.in/wp-content/uploads/2024/04/5F18ECB6-01FF-481F-9D75-41CE314DBC2B-1024x485.jpeg)
ಉರ್ವ ಚಿಲಿಂಬಿ ಶ್ರೀ ಸತ್ಯಸಾಯಿ ಬಾಬಾ ಮಂದಿರ ಬಳಿ ಬಿಜೆಪಿ ಶಾಸಕರೊಬ್ಬರು ಈಚೆಗೆ ಉದ್ದೇಶ ಪೂರ್ವಕವಾಗಿ ಚುನಾವಣಾ ನಿಯಮಾವಳಿ ಮೀರಿ ಮತಯಾಚನೆ ನಡೆಸಿ ಮಂದಿರದ ಆಡಳಿತ ಸಮಿತಿ ಜೊತೆಗೆ ದರ್ಪದಿಂದ ವರ್ತಿಸಿ ಸಂಘರ್ಷ ನಡೆಸಿದ್ದರು ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ಪಿಯೂಸ್ ಎಲ್.ರಾಡ್ರಿಗಸ್ ಮಾತನಾಡಿ, ಈ ಹಿಂದೆ ದೇಶದಲ್ಲಿ ಬಲಿಷ್ಟ ಪ್ರಧಾನಿ ಆಗಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಗೂ ಸೋಲು ಉಂಟಾಗಿದ್ದು, ಇದೀಗ ಸಂವಿಧಾನ ದುರ್ಬಲಗೊಳಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡಾ ಅಧಿಕಾರದಿಂದ ಕಿತ್ತೊಗೆಯಲು ಮತದಾರರು ಮುಂದಾಗಿದ್ದಾರೆ ಎಂದರು.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಪ್ರಚಾರ ಸಮಿತಿ ಸಹ ಸಂಚಾಲಕ
ಜಗದೀಶ ಕೊಯಿಲ ಪ್ರಾಸ್ತಾವಿಕ ಮಾತನಾಡಿ, ಗಣರಾಜ್ಯ ಪರೇಡ್ ನಲ್ಲಿ ನಾರಾಯಣ ಗುರು ಸ್ಥಬ್ಧಚಿತ್ರ ಕಡೆಗಣನೆ ಬಗ್ಗೆ ಪದ್ಮರಾಜ್ ಆರ್. ಮತ್ತು ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿರುವುದನ್ನು ನೆನಪಿಸಿಕೊಂಡರು.
ಪ್ರಮುಖರಾದ
ಚಿತ್ತರಂಜನ್ ಶೆಟ್ಟಿ, ಜನಾರ್ಧನ ಚೆಂಡ್ತಿಮಾರ್, ಉಮೇಶ್ ಬೋಳಂತೂರು, ಉಮೇಶ್ ಕುಲಾಲ್ ನಾವೂರು ಅನಿಸಿಕೆ ವ್ಯಕ್ತಪಡಿಸಿದರು.
ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ದಿವಾಕರ ಪಂಬದಬೆಟ್ಟು, ಕರೀಂ ಬೊಳ್ಳಾಯಿ, ದಿನೇಶ್ ಶೆಟ್ಟಿಗಾರ್ ಸಿದ್ಧಕಟ್ಟೆ, ಮಧುಸೂದನ್ ಮಡಿವಾಳ, ಕೆ.ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಚಂದ್ರಹಾಸ ನಾಯ್ಕ್, ಶೋಭಾ ಶೆಟ್ಟಿ, ರಮೇಶ್ ಕುಲಾಲ್ ಪಣೋಲಿಬೈಲು, ಹರೀಶ್ ಕೋಟ್ಯಾನ್, ಬಾಬು ಭಂಡಾರಿ ಅಮ್ಟಾಡಿ, ದೇವಪ್ಪ ಕುಲಾಲ್ ಪಂಜಿಕಲ್ಲು, ಭಾರತಿ ಪೂಜಾರಿ, ಶೈಲಜಾ ರಾಜೇಶ್ , ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ ಮತ್ತಿತರರು ಇದ್ದರು.
ಜಗದೀಶ್ ಕೊಯಿಲ ಸ್ವಾಗತಿಸಿ, ಕಾರ್ಯಕ್ರಮನಿರೂಪಿಸಿದರು, ಸುರೇಶ್ ಕುಮಾರ್ ನಾವೂರು ವಂದಿಸಿದರು.
![](https://aksharanews.in/wp-content/uploads/2024/01/aksharanews-ad.jpg)