![](https://aksharanews.in/wp-content/uploads/2024/04/F2CE9C0A-B391-4EFE-8D5C-2AC6A241C882-1024x461.jpeg)
ಬಂಟ್ವಾಳ: ಕಾರ್ಮಿಕರಿಗೆ ಹಾಗೂ ಗುತ್ತಿಗೆದಾರರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಬಾಗಿಲು ಮುಚ್ಚಿರುವ ಫರಂಗಿಪೇಟೆಯ ಬೀಡಿ ಕಂಪೆನಿಯ ವಿರುದ್ಧ ಬುಧವಾರ ಡಿಪೋ ಮುಂಭಾಗ ಕಾರ್ಮಿಕರು ಹಾಗೂ ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2024/04/1B857344-14EB-4C1C-B6CE-7031216CF748-1024x462.jpeg)
![](https://aksharanews.in/wp-content/uploads/2024/04/F829EB84-292E-47D3-A276-BCA4BF430C1E-1024x461.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಡಿಪೋ ಫರಂಗಿಪೇಟೆಯಲ್ಲಿ ಕಳೆದ 60 ವರ್ಷಗಳಿಂದ ಬೀಡಿ ಉದ್ದಿಮೆಯನ್ನು ನಡೆಸುತ್ತಿದ್ದು 40 ಮಂದಿ ಬೀಡಿ ಗುತ್ತಿಗೆದಾರರು ಹಾಗೂ 3ಸಾವಿರಕ್ಕಿಂತಲೂ ಅಧಿಕ ಬೀಡಿ ಕಾರ್ಮಿಕರು ದುಡಿಯುತಿದ್ದಾರೆ. ಆದರೆ ಈ ಬೀಡಿ ಸಂಸ್ಥೆ ಯಾವುದೇ ಸೂಚನೆಯನ್ನು ನೀಡದೆ ಕಳೆದ ಏ.1ರಿಂದ ಕಂಪೆನಿಯನ್ನು ಮುಚ್ಚಿದ್ದು ಗುತ್ತಿಗೆದಾರರು ಹಾಗೂ ಕಾರ್ಮಿಕರು ಕೆಲಸ ಇಲ್ಲದೆ ಕಂಗಲಾಗಿದ್ದಾರೆ. ಈ ಬಗ್ಗೆ ಈಗಾಗಲೇ ದ.ಕ. ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಒತ್ತಾಯಿಸಿದರೂ ಕಂಪೆನಿ ಮಾಲೀಕರು ಹಠಮಾರಿ ಧೋರಣೆ ಅನುಸರಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿ ಕೆಲಸವಿಲ್ಲದ ದಿನಗಳ ಪರಿಹಾರ ವೇತನ ಹಾಗೂ ಕೆಲಸವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.
![](https://aksharanews.in/wp-content/uploads/2024/04/40E48A0D-C49F-45C8-9606-E2AFAF15CD99-1024x461.jpeg)
![](https://aksharanews.in/wp-content/uploads/2024/04/F57EB3D4-A151-4BBC-8F59-CA8730234D6D-1024x462.jpeg)
![](https://aksharanews.in/wp-content/uploads/2024/04/637000F7-ABE7-48AD-83DB-6820DDD38A3F-1024x461.jpeg)
ಕಾರ್ಮಿಕ ಸಂಘಟನೆಗಳ ಮುಖಂಡರಾದ ಜೆ. ಬಾಬು ಕೃಷ್ಣ ಶೆಟ್ಟಿ , ಸುರೇಶ್ ಕುಮಾರ್ , ಗುತ್ತಿಗೆದಾರರ ಸಂಘದ ಶಿವಪ್ಪ ಸುವರ್ಣ, ಗೋಪಾಲ ಪೂಜಾರಿ, ಲಕ್ಷ್ಮಣ್ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
—
![](https://aksharanews.in/wp-content/uploads/2024/01/aksharanews-ad.jpg)