ಬಂಟ್ವಾಳ: ದಿ.ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣ ಸಮಿತಿ ಇದರ ವತಿಯಿಂದ ಬೆಂಜನಪದವು ಸಮೀಪದ ಕಲ್ಪನೆಯಲ್ಲಿ ಸೇಸಪ್ಪ ಕೋಟ್ಯಾನ್ ಸ್ಮಾರಕ
ವೃತ್ತದ ಲೋಕಾರ್ಪಣೆ ಹಾಗೂ ಅವರ ಪುತ್ತಳಿ ಅನಾವರಣ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ
ವಿವೇಕಾ ಚೈತನ್ಯಾನಂದ ಸ್ವಾಮೀಜಿ, ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರುಗಳಾದ ವಂ. ಆಂಟನಿ ಲೋಬೋ, ಉದ್ದೊಟ್ಟು ಮಸೀದಿ ಧರ್ಮಗುರು ಕೆ.ವಿ. ಮಜೀದ್ ಧಾರಿಮಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸೇಸಪ್ಪ ಕೋಟ್ಯಾನ್ ಅವರು ವಿಶೇಷವಾದ ಜೀವನ ನಡೆಸಿದ್ದಾರೆ. ವಿದ್ಯಾಭ್ಯಾಸ ಇಲ್ಲದೆ ಇದ್ದರೂ ಕೂಡ ಉದಾರ ಮನಸ್ಸಿನ ವ್ಯಕ್ತಿತ್ವ ಹಾಗೂ
ದೈವಿಕ ಗುಣ ಅವರಲ್ಲಿತ್ತು, ಯಾವುದೇ ಜಾತಿ ಧರ್ಮದವರು ಕೈ ಚಾಚಿದಾಗ ನೆರವು ನೀಡುವ ಧೀಮಂತ ವ್ಯಕ್ತಿ ಅವರಾಗಿದ್ದರು ಎಂದರು. ಇಲ್ಲಿನ ಪುತ್ತಳಿಗೆ ಅವಮಾನ ಆಗಬಾರದು, ಉತ್ತಮವಾಗಿ ನಿರ್ವಹಣೆ ಹಾಗೂ ರಕ್ಷಣೆ ಮಾಡುವ ಜವಬ್ದಾರಿ ನಮ್ಮೆಲ್ಲರದ್ದಾಗಿದ್ದು ಅದು ನಾವು ಅವರಿಗೆ ನೀಡುವ ಗೌರವ ಎಂದರು.
ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ವಂದನೀಯ ಆಂಟನಿ ಲೋಬೋ ಮಾತನಾಡಿ
ಅನಾವರಣಗೊಂಡಿರುವ ಪುತ್ತಳಿ ನೆನೆಪು ಮಾತ್ರ ಅಲ್ಲ ನಮ್ಮ ಜೀವನಕ್ಕೆ ಸ್ಪೂರ್ತಿಯಾಗಬೇಕು ಎಂದರು.
ಉದ್ದೊಟ್ಟು ಮಸೀದಿ ಧರ್ಮಗುರು ಕೆ.ವಿ. ಮಜೀದ್ ದಾರಿಮಿ ಮಾತನಾಡಿ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ದೂಷಿಸುವುದಿಲ್ಲ, ಮಾನವರು ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಬದುಕಬೇಕು ಅಂತಹ ಬದಕನ್ನು ಸೇಸಪ್ಪ ಕೋಟ್ಯಾನ್ ಬಾಳಿದ್ದಾರೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ. ಮಾತನಾಡಿ ಸೇಸಪ್ಪ ಕೋಟ್ಯಾನ್ ಪ್ರಾಮಾಣಿಕ ಹಾಗೂ ನಿರ್ವಂಚನೆಯಿಂದ ಕೆಲಸ ನಿರ್ವಹಿಸಿದವರು. ಹಂತ ಹಂತವಾಗಿ ಮೇಲೇರಿ ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ.
ಆರಂಭದಲ್ಲಿ ತಾನು ಕಷ್ಟದ ಜೀವನ ನಡೆಸಿ ಇನ್ನೊಬ್ಬರ ಕಷ್ಟದ ಜೀವನಕ್ಕೆ ಬೆನ್ನೆಲುಬಾಗಿ ನಿಂತವರು ಎಂದರು.
ಸೇಸಪ್ಪ ಕೋಟ್ಯಾನ್ ಅವರ ಧರ್ಮಪತ್ನಿ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ನಿವೃತ್ತಿ ಶಿಕ್ಷಕ ಜಯರಾಮ ಶೆಟ್ಟಿ
ಉದ್ಯಮಿ ಕೆ.ಪಿ.ಶೆಟ್ಟಿ, ಗುತ್ತಿಗೆದಾರ ದಿವಾಕರ್ ಮಂಗಳೂರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಎಡ್ವರ್ಡ್ ಫೆರ್ನಾಂಡೀಸ್ , ಕಾರ್ಯದರ್ಶಿ ನವಾಝ್ ಬಡಕಬೈಲು, ಶಿವಪ್ರಸಾದ್ ಕನಪಾಡಿ ಪ್ರಮುಖರಾದ ಶಾಂತ ಭುವನೇಶ್ ಪಚ್ಚಿನಡ್
ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ
ಚಂದ್ರಹಾಸ ಶೆಟ್ಟಿ, ಸದಾನಂದ ಶೆಟ್ಟಿ, ಚಂದ್ರಹಾಸ ಪಲ್ಲಿಪ್ಪಾಡಿ, ದೇವಪ್ಪ ಪೂಜಾರಿ ಬಾಳಿಕೆ, ಕೃಷ್ಣಕುಮಾರ್ ಪೂಂಜ, ಗಂಗಾಧರ್, ರೂಪ, ನಾರಾಯಣ ನಾಯ್ಕ
ರಾಜು ಕೋಟ್ಯಾನ್ , ರಾಧಕೃಷ್ಣ ತಂತ್ರಿ
ಗಣೇಶ್ ಸುವರ್ಣ, ಗಣೇಶ್ ಸಾಲ್ಯಾನ್
ಕೊಡ್ಮಾನ್ ದೇವದಾಸ್ ಶೆಟ್ಟಿ, ಸದಾಶಿವ ಡಿ. ತುಂಬೆ ಮತ್ತಿತರು ಉಪಸ್ಥಿತರಿದ್ದರು.