![](https://aksharanews.in/wp-content/uploads/2023/04/D4A14D46-0377-4073-AD4E-F2EB4ECCC9FB-1024x485.jpeg)
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
ಬಂಟ್ವಾಳ: ಏಪ್ರಿಲ್ 15ರಂದು ಪೊಳಲಿಯಿಂದ ಪಾದಯಾತ್ರೆ ಮೂಲಕ ಬಂಟ್ವಾಳ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪಕ್ಷ ನನ್ನನ್ನು ಮೂರನೇ ಬಾರಿ ಕಣಕ್ಕಿಳಿಸಿದ್ದು, 2013ರಲ್ಲಿ ಸೋತರೂ 2018ರಲ್ಲಿ ವಿಜಯಿಯಾಗಿದ್ದೇನೆ. ಇದೀಗ ಮತ್ತೆ ಚುನಾವಣೆಗೆ ಕಣಕ್ಕಿಳಿಸಿದ್ದು, ಕಾರ್ಯಕರ್ತರ ಆಶೀರ್ವಾದ ಮತ್ತು ಸಹಕಾರ ಇದಕ್ಕೆ ಕಾರಣ ಎಂದರು.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಬಂಟ್ವಾಳ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂದು ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಹೇಳಿದರು. ಬೆಳಗ್ಗೆ 8 ಗಂಟೆಗೆ ಅಭಿಮಾನಿಗಳು ಪೊಳಲಿಯಿಂದ 15 ರಂದು ಹೆಜ್ಜೆ ಹಾಕಲಿದ್ದು, ಮಧ್ಯಾಹ್ನ 12.15ರ ವೇಳೆ ನಾಮ ಪತ್ರ ಸಲ್ಲಿಸಲಿದ್ದಾರೆ. ಪಕ್ಷ ಕಾರ್ಯಕರ್ತರ ಸಭೆಗಳಲ್ಲಿ ಈಗಾಗಲೇ ಉತ್ತಮ ಬೆಂಬಲ ವ್ಯಕ್ತಗೊಂಡಿದೆ ಎಂದರು. ಕ್ಷೇತ್ರ ಪ್ರಭಾರಿ ರವಿಶಂಕರ ಮಿಜಾರ್, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ ಉಪಸ್ಥಿತರಿದ್ದರು.
![](https://aksharanews.in/wp-content/uploads/2024/01/aksharanews-ad.jpg)