
ಬಂಟ್ವಾಳ: ಇತ್ತೀಚೆಗೆ ಜೆಸಿಐ ಮಡಂತ್ಯಾರು ಅತಿಥ್ಯದಲ್ಲಿ ನಡೆದ ಜೆಸಿಐ ವಲಯ 15 ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ ಮೃದಿನಿ -2026 ಕಾರ್ಯಕ್ರಮದಲ್ಲಿ ಜೆಸಿಐ ಬಂಟ್ವಾಳ ಘಟಕ ಹಲವು ಪುರಸ್ಕಾರಗಳನ್ನು ಗೆದ್ದುಕೊಂಡಿದೆ. ಶೇ. 100% ಎಫಿಶಿಯನ್ಸಿಯಲ್ಲಿ 87.5 ಅಂಕ ಪಡೆದು ವಲಯದಲ್ಲಿ ನಂ.1 ಸ್ಥಾನ ಹಾಗೂ ಜಿ&ಡಿ ಪಾಯಿಂಟ್ ಟೇಬಲ್ ನಲ್ಲಿ 3ನೇ ಸ್ಥಾನ ಕಾಯ್ದುಕೊಂಡು ಸಾಧನೆ ಮಾಡಿದೆ. ಜೆಸಿಐ ಬಂಟ್ವಾಳದ ವಿಶೇಷ ಸಾಧನೆಗೆ ವ್ಯವಹಾರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಂಟ್ವಾಳ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಅವರಿಗೆ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ವಲಯ ನಿರ್ದೇಶಕ ವಿಕೇಶ್ ಮಾನ್ಯ, ರಂಜಿತ್ ಎಚ್ ಡಿ.ಮತ್ತಿತರರು ಉಪಸ್ಥಿತರಿದ್ದರು.

Advertisement







