ಬಂಟ್ವಾಳ: ಬಿಜೆಪಿ ಕಾರ್ಯಕರ್ತರ ನಡುವೆ ಬಂಟ್ವಾಳದ ಸಭೆಯಲ್ಲಿ ಹೊಡೆದಾಟ ನಡೆದಿದೆ ಎಂದು ತುಮಕೂರು ಪಾವಗಡದ ಘಟನೆಯ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ದುರುದ್ದೇಶದೊಂದಿಗೆ ಪ್ರಸಾರ ಮಾಡಿದ ಬಗ್ಗೆ ಬಂಟ್ವಾಳ ಬಿಜೆಪಿಯ ನಿಯೋಗ ಸೋಮವಾರ ಉಪ ಚುನಾವಣಾಧಿಕಾರಿ ಹಾಗೂ ಬಂಟ್ವಾಳ ನಗರ ಠಾಣಾಧಿಕಾರಿಗಳಿಗೆ ಮಾದರಿ ನೀತಿಸಂಹಿತೆಯ ಉಲ್ಲಂಘನೆಯ ಬಗ್ಗೆ ದೂರು ನೀಡಿದೆ.
Advertisement
ಬಿಜೆಪಿ ನಿಯೋಗದಲ್ಲಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಪ್ರಮುಖರಾದ ಗೋವಿಂದ ಪ್ರಭು, ದೇವಪ್ಪ ಪೂಜಾರಿ, ರಾಮದಾಸ ಬಂಟ್ವಾಳ್, ರವೀಶ್ ಶೆಟ್ಟಿ , ಡೊಂಬಯ ಅರಳ, ಮೋನಪ್ಪ ದೇವಸ್ಯ, ದಿನೇಶ್ ಶೆಟ್ಟಿ ದಂಬೆದಾರ್ ಉಪಸ್ಥಿತರಿದ್ದರು.
Advertisement