![](https://aksharanews.in/wp-content/uploads/2023/12/AF855639-4E3B-4C35-B2C2-5D4626AACD78-1024x768.jpeg)
ಬಂಟ್ವಾಳ: ಮೆಲ್ಕಾರ್ನ ನರಹರಿ ಪರ್ವತ ಶ್ರೀ ಸದಾಶಿವ ದೇವಾಲಯದ ಜೀರ್ಣೋದ್ಧಾರದ ಪ್ರಯುಕ್ತ ಸಹಸ್ರ ಸೀಯಾಳಾಭಿಷೇಕ ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.
![](https://aksharanews.in/wp-content/uploads/2023/05/ak-1.jpg)
![](https://aksharanews.in/wp-content/uploads/2023/12/74F0B8EC-D9D7-421B-BFA3-AF501026F799-1024x768.jpeg)
![](https://aksharanews.in/wp-content/uploads/2023/12/53338D11-7E26-4C0A-8228-412BA85AD01A-1024x768.jpeg)
ಕಳೆದ ಮೇ.೨೬ರಂದು ಶ್ರೀ ಕ್ಷೇತ್ರದಲ್ಲಿ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಪ್ರಶ್ನಾಚಿಂತನೆಯು ನಡೆದಿದ್ದು ಅದರಂತೆ ದೇವಸ್ಥಾನಕ್ಕೆ ಸಂಬಂಧಿಸಿದ ಅಮ್ಟೂರು, ಗೋಳ್ತಮಜಲು, ಬೊಂಡಾಲ, ಶಂಭೂರು, ಪಾಣೆಮಂಗಳೂರು ಗ್ರಾಮಗಳ ಪ್ರತೀ ಮನೆಗಳಲ್ಲಿ ನಗರ ಭಜನೆಯನ್ನು ನಡೆಸಿ ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಸಲಾಗಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಪ್ರಶಾಂತ ಮಾರ್ಲ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಉಪತಹಶೀಲ್ದಾರ್ ನವೀನ್ ಬೆಂಜನಪದವು ಆಡಳಿತ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2023/12/36C2EE22-20D5-4865-BBF1-7D30D684683D-1024x768.jpeg)
![](https://aksharanews.in/wp-content/uploads/2024/01/aksharanews-ad.jpg)