
ಬಂಟ್ವಾಳ: ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಇಜ್ಜ ಶ್ರೀ ಸತ್ಯ ನಾರಾಯಣ ಭಟ್ ಇವರು ಚಪ್ಪರ ಮುಹೂರ್ತ ನಡೆಸಿದರು. ಕಾರ್ಯಕ್ರಮದಲ್ಲಿ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಭಂಡಾರಿ, ಪ್ರಮುಖರಾದ ಚೆನ್ನೇಶವ ಡಿ.ಆರ್., ಬೇಬಿ ಪೂಜಾರಿ, ಸುರೇಶ್ ಕುಲಾಲ್, ಉದಯಕುಮಾರ್ ರಾವ್, ಹರೀಶ್ ಶೆಟ್ಟಿ, ಹರೀಶ್ ಯಂ. ಅಶೋಕ್, ಸುರೇಶ್ ಕುಲಾಲ್ ಯಸ್., ಭವಾನಿ ಶಂಕರ ಶೆಟ್ಟಿ, ವಸಂತ ಭಂಡಾರಿ, ಪುಷ್ಪ, ಸುದೇಷ್ ಕುಮಾರ್ ಮೊದಲಾದವರು ಭಾಗವಹಿಸಿದರು.
