ಬಂಟ್ವಾಳ: ಯೋಗನಿಧಿ ಪತಂಜಲಿ ಪ್ರತಿಷ್ಠಾನ ಮಂಗಳೂರು ಇದರ ಬಂಟ್ವಾಳ ಘಟಕ
ಆಶ್ರಯದಲ್ಲಿ ಡಿಸೆಂಬರ್ 25 ರಂದು ನಢೆಯಲಿರುವ ಗೀತಾ ಜಯಂತಿ ಆಚರಣೆಯ ಅಂಗವಾಗಿ ವಿವಿಧ ಹಂತದ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆ ಆಧಾರಿತ ಪ್ರಬಂಧ ಸ್ಪರ್ಧೆ ನಡೆಯಲಿದೆ.
ಪ್ರಾಥಮಿಕ ಹಂತ (5 ರಿಂದ 8ನೇ ತರಗತಿಯ ಮಕ್ಕಳು) : ಯಶೋದೆಯ ಮಡಿಲಲ್ಲಿ ಶ್ರೀ ಕೃಷ್ಣ , ಪ್ರೌಢಶಾಲಾ ಹಂತ (9ರಿಂದ 12ತರಗತಿಯ ಮಕ್ಕಳಿಗೆ) ಶ್ರೀ ಕೃಷ್ಣನ ಬಾಲ ಲೀಲೆಗಳ ಸಂದೇಶ, ಪದವಿ ಹಂತದ
ವಿದ್ಯಾರ್ಥಿಗಳಿಗೆ ಸರ್ವ ಸ್ಪರ್ಶಿ ಭಗವದ್ಗೀತಾ, ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ, ಗೀತಾಧ್ಯಯನ ಶೀಲಸ್ಯ ಪ್ರಾಣಾಯಾಮ ಪರಸ್ಯ ಚ ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮ ಕೃತಾನಿ ಚ ಈ ಶ್ಲೋಕವನ್ನು ಆಧರಿಸಿದ ವಿಶ್ಲೇಷಣಾತ್ಮಕ ಪ್ರಬಂಧ.
ಪ್ರಬಂಧಗಳು ಎ4 ಅಳತೆಯ ಪೇಪರ್ ನಲ್ಲಿ ೪ ಪುಟಗಳ ಮಿತಿಯಲಿ ಇರಬೇಕು. ಪ್ರಬಂಧಗಳನ್ನು ಬರೆದು ಅಂಚೆ ಮೂಲಕ ಅಥವಾ ಖುದ್ದಾಗಿ ಅಧ್ಯಕ್ಷರು. ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ (ರಿ). ಶ್ರೀ ಲಕ್ಷ್ಮೀ ನರಸಿಂಹ ಕ್ಲಿನಿಕ್, ಉಪೇಂದ್ರ ಸೌಧ. ಬಿ.ಸಿ.ರೋಡ್. ಬಂಟ್ವಾಳ ತಾಲೂಕು. ದ.ಕ. 574219 ಇಲ್ಲಿಗೆ ಕಳುಹಿಸ ಬೇಕು. ಅಥವಾ ಪ್ರಬಂಧಗಳನ್ನು ಎ4 ಅಳತೆಯ ಪೇಪರ್ ನಲ್ಲಿ ಬರೆದು ಸ್ಕ್ಯಾನ್ ಮಾಡಿ ಇಲ್ಲವೇ ನೇರವಾಗಿ
ಇ-ಮೈಲ್ ಮೂಲಕವೂ ಕಳುಹಿಸಬಹುದಾಗಿದೆ. E-Mail address : damodar.e1@gmail.com.
ಯೋಗನಿಧಿ ಪತಂಜಲಿ ಪ್ರತಿಷ್ಠಾನ ಇದರ ಬಂಟ್ವಾಳ ಘಟಕ ಆಶ್ರಯದಲ್ಲಿ ಗೀತಾ ಜಯಂತಿ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆ ಆಧಾರಿತ ಪ್ರಬಂಧ ಸ್ಪರ್ಧೆ
