ಬಂಟ್ವಾಳ : ಇಲ್ಲಿನ ವಿಧಾನಸಭಾ ಕ್ಷೇತ್ರದ ಗೋಳ್ತಮಜಲು ಗ್ರಾಮಪಂಚಾಯತ್ ವ್ಯಾಪ್ತಿಯ ಅಮ್ಟೂರು ಗ್ರಾಮದ 181, 182 ಬೂತ್ ಸಮಿತಿಯ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ, ಗೋಳ್ತಮಜಲ್ ಗ್ರಾಮ ಪಂಚಾಯತ್ ನ ನಿಕಟಪೂರ್ವ ಸದಸ್ಯರಾದ ಗೋಪಾಲ ಪೂಜಾರಿ ಹಾಗೂ ಗೋಪಾಲಕೃಷ್ಣ ಪೂವಳ ಹಾಗೂ ಮಹಮ್ಮದ್ ಮುಸ್ತಫಾ ಇವರ ಅನುದಾನದಲ್ಲಿ ರಾಯಪ್ಪ ಕೋಡಿ ಕ್ವಾಟ್ರಸ್ ರಸ್ತೆ ಹಾಗೂ ರಾಯಪ್ಪ ಕೋಡಿ ರಮೇಶ್ ಶೆಟ್ಟಿಗಾರ್ ಅವರ ಅಂಗಡಿ ಬಳಿಯಿಂದ ನಾರಾಯಣರವರ ಮನೆಯವರೆಗಿನ ರಸ್ತೆಗೆ ಇಂಟರ್ಲಾಕ್ ಅಳವಡಿಕೆ ಹಾಗೂ ರಾಯಪ್ಪ ಕೋಡಿ ಕೃಷ್ಣನಾಯ್ಕ ಮನೆ ಬಳಿ ಕಾಂಕ್ರೀಟ್ ಚರಂಡಿ ರಚನೆ ಹಾಗೂ ಅಮ್ಟೂರು ಗ್ರಾಮದ ತಾರಾ ಬರಿ ಎಂಬಲ್ಲಿ ಹಿಂದೂ ರುದ್ರಭೂಮಿಗೆ ನೀರಿನ ಟ್ಯಾಂಕ್ ಹಾಗೂ ವಿದ್ಯುತ್ ದೀಪ ಅಳವಡಿಕೆ ಅಮ್ಟೂರು ಗ್ರಾಮದ ಹೋಯಿಗೆ ಗದ್ದೆ ಜಗದೀಶ್ ಶೆಟ್ಟಿಗಾರ್ ಅವರ ಮನೆಯಿಂದ ಚಾಮುಂಡಿ ಕಟ್ಟೆಯವರೆಗೆ ರಸ್ತೆಯ ಕಾಂಕ್ರೀಟಿಕರಣ ಹಾಗೂ ಅಮ್ಟೂರು ಗ್ರಾಮದ ಹೊಯಿಗೆ ಗದ್ದೆ ಕೃಷ್ಣಪ್ಪ ಪೂಜಾರಿಯವರ ಮನೆಯಿಂದ ಬಾಬು ಪೂಜಾರಿಯವರ ಮನೆತನಕ ರಸ್ತೆ ಕಾಂಕ್ರೀಟಿಕರಣ ಹಾಗೂ ಕಾಂತು ನಲಿಕೆ ಇವರ ಮನೆ ಬಳಿ ತಡೆಗೋಡೆ ರಚನೆ, ಹೋಯಿಗೆ ಗದ್ದೆ ಎಂಬಲ್ಲಿ ಮನೆಗಳ ಮೇಲೆ ಹಾದು ಹೋಗಿರುವ ಎಚ್ ಟಿ ಮತ್ತು ಎಲ್ ಟಿ ವಿದ್ಯುತ್ತು ಲೈನ್ ಗಳ ಸ್ಥಳಾಂತರ ಹಾಗೂ ರಘುನಾಥ ಅವರ ಮನೆ ಬಳಿಯಿಂದ ಕೂಸಪ್ಪ ನವರ ಮನೆಯಾ ಹಿಂದೆ ಕಾಂಕ್ರೀಟ್ ತಡೆ ಗೋಡೆ ರಚನೆ ಹಾಗೂ ಅಮ್ಟೂರ್ ಮುಖ್ಯರಸ್ತೆಯಿಂದ ತಾರನಾಥ ಪೂಜಾರಿಯವರ ಮನೆಯವರೆಗೆ ರಸ್ತೆ ಕಾಂಕ್ರೀಟಿಕರಣ ಹಾಗೂ ಅಮ್ಟೂರು ಗ್ರಾಮದ ನೆಲ್ಲಿಗುಡ್ಡೆ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗಳನ್ನು ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಪದ್ಮನಾಭ ಕೊಟ್ಟಾರಿ ಹಾಗೂ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ ಉದ್ಘಾಟಿಸಿದರು. ಈ ಸಂದರ್ಭತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಹಾಗೂ ಬೂತ್ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಬೈದರಾಡ್ಕ ಹಾಗೂ ಶ್ರೀಧರ ಸುವರ್ಣ ನಿಕಟಪೂರ್ವ ಪಂಚಾಯತ್ ಸದಸ್ಯರಾದ ಗೋಪಾಲ ಪೂಜಾರಿ ಹಾಗೂ ಗೋಪಾಲಕೃಷ್ಣ ಪೂವಳ ಜಯಂತ ಗೌಡ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾಬಲ ಸಾಲ್ಯಾನ್ ಉಪಸ್ಥಿತರಿದ್ದರು.
ಭಜನಾ ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿಗಾರ್ ಮಹಾಬಲ ಕುಲಾಲ್ , ಜಗದೀಶ ಬಜಾರ್, ಮನೋಜ್ ಕಟ್ಟೆಮಾರ್, ಕೌಶಲ್ ಶೆಟ್ಟಿ ಹಾಗೂ ಭಾರತೀಯ ಜನತಾ ಪಾರ್ಟಿಯ ಬೂತ್ ಸಮಿತಿಯ ಪದಾಧಿಕಾರಿಗಳು ಹಾಗೂ ಭಾರತೀಯ ಜನತಾ ಪಾರ್ಟಿಯ ಸದಸ್ಯರು, ಪಕ್ಷದ ಕಾರ್ಯಕರ್ತರು ಊರಿನ ಪ್ರಮುಖರು ಭಾಗವಹಿಸಿದ್ದರು.
ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿದರು. ಗೋಪಾಲ ಪೂಜಾರಿ ವಂದಿಸಿದರು.