ಬಂಟ್ವಾಳ: ಯುವಕರು ಕ್ರಿಯಾತ್ಮಕವಾಗಿ ಯೋಚಿಸಿ ತಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತಂದಾಗ ಸಮಾಜಕ್ಕೆ ಒಳಿತಾಗುವ ಬಹಳಷ್ಟು ಅವಕಾಶಗಳು ಒದಗಿಬರುತ್ತದೆ ಇಂತಹ ಯೋಚನಾಶೀಲ ಯುವಕರಿಗೆ ಅರ್ಜುನ್ ಪೂಂಜಾ ಮಾದರಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಕೈಯಿಂದ ಮುಟ್ಟದೇ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ (ನಿರ್ಮಲಿಕಾರಕ ಉಪಕರಣ) ವನ್ನು ಅಭಿವೃದ್ದಿ ಪಡಿಸಿರುವ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ, ಯುವ ಇಂಜಿನಿಯರ್ ಅರ್ಜುನ್ ಕೆ. ಪೂಂಜಾರನ್ನು ಅಭಿನಂದಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಸುರೇಶ್ ರೈ ಪೆಲಪಾಡಿ, ಕಾರ್ಯಕರ್ತರಾದ ಸುಕುಮಾರ್ ಬಂಗೇರ, ಸುಕೇಶ್ ಶೆಟ್ಟಿ ತೇವು, ವಿಕ್ರಮ್ ಬರ್ಕೆ, ಎಫ್ ಗಣೇಶ್ ಕುಮಾರ್, ಲೋಕೇಶ್ ಕಲ್ಲತಡಮೆ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉಮ್ಮರ್ ಫಾರೂಕ್,ಪುದು ಗ್ರಾಮ ಪಂಚಾಯತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಉಪಸ್ಥಿತರಿದ್ದರು.