ಮಂಗಳೂರು :ಇಂಟರ್ ನ್ಯಾಷನಲ್ಯೂತ್ ಸೊಸೈಟಿ (ಐವೈಎಸ್) ಮತ್ತು ನ್ಯಾಷನಲ್ಯೂತ್ಅವಾರ್ಡ್ ಫೆಡರೇಶನ್ಆಫ್ಇಂಡಿಯಾಇವರು ಸಾಧಕಯುವಕರಿಗೆಕೊಡಮಾಡುವ 2019 ನೇ ಸಾಲಿನ ರಾಷ್ಟ್ರೀಯಯುವ ಪ್ರಶಸ್ತಿಗೆ ಪತ್ರಕರ್ತ, ಯುವವಾಹಿನಿ (ರಿ) ಕೇಂದ್ರ ಸಮಿತಿಯಅಧ್ಯಕ್ಷ ನರೇಶ್ಕುಮಾರ್ ಸಸಿಹಿತ್ಲು ಆಯ್ಕೆಯಾಗಿದ್ದಾರೆ.
ದೇಶದಾದ್ಯಂತ 20 ಮಂದಿ ಸಾಧಕಯುವಕ-ಯುವತಿಯರಿಗೆ ಪ್ರತಿ ವರುಷ ಈ ಪ್ರಶಸ್ತಿ ನೀಡಲಾಗುತ್ತಿದ್ದು ಈ ಬಾರಿಕರ್ನಾಟಕದಿಂದಐದು ಮಂದಿ ಆಯ್ಕೆಗೊಂಡಿದ್ದಾರೆ.
ಅ.13ರಂದು ನವದೆಹಲಿಯ ಇಂಡಿಯಾಗೇಟ್ ಬಳಿ ಇರುವ ಆಂಧ್ರ ಭವನದ ಡಾ. ಬಿ.ಆರ್ಅಂಬೇಡ್ಕರ್ ಅಡಿಟೋರಿಯಂನಲ್ಲಿ ನಡೆಯುವ ಸಮಾರಂಭದಲ್ಲಿಕೇಂದ್ರ ಸಚಿವರಾದರಾಮದಾಸ್ ಅಠವಳೆ, ಜಿ.ಕೃಷ್ಣಾರೆಡ್ಡಿ, ಪ್ರತಾಪ್ಚಂದ್ರ ಸಾರಂಗಿ, ಕಿರಣ್ರಿಜುಲು, ಅಂತರಾಷ್ಟ್ರೀಯ ಶಾಂತಿ ಪ್ರತಿಪಾದಕರಾದ ನೇಪಾಳದ ಆಚಾರ್ಯ ಗುರುಕರ್ಮತನ್ಪಾಲ್, ರಾಷ್ಟ್ರೀಯಯುವ ನೀತಿಯ ಸ್ಥಾಪಕ ಡಾ. ಎಸ್.ಎನ್ ಸುಬ್ಬರಾವ್, ರಾಜ್ಯ ಸಭಾ ಸದಸ್ಯಡಾ. ನರೇಂದ್ರಜಾಧವ್, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯಧ್ಯಾನೇಶ್ವರ್ ಮುಳೆ, ಸಂಸದ ಮನೋಜ್ತಿವಾರಿ ಮುಂತಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ನರೇಶ್ಕುಮಾರ್ಅವರಿಗೆ ಈಗಾಗಲೇ ದಕ್ಷಿಣಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಜಿಲ್ಲಾಯುವ ಪ್ರಶಸ್ತಿ ನೀಡಿ ಗೌರವಿಸಿದೆ, ಇದಲ್ಲದೆ ಬಸವಶ್ರೀ ರಾಜ್ಯಯುವ ಪ್ರಶಸ್ತಿ, ಯುಗಪುರುಷರಾಜ್ಯೋತ್ಸವ ಪ್ರಶಸ್ತಿ ಮತ್ತುಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಲೇಖಕ, ನಾಟಕಕಾರ, ನಿರ್ದೇಶಕ, ನೃತ್ಯಪಟುವಾಗಿ ಗುರುತಿಸಿಕೊಂಡಿರುವ ನರೇಶ್ಕುಮಾರ್ಇವರು ಮೂಲ ಜಾನಪದ ಕುಣಿತಗಳ ಅಧ್ಯಯನ, ತರಭೇತಿ ಮತ್ತು ಪ್ರದರ್ಶನ ನೀಡುತ್ತಿದ್ದಾರೆ. ನೇಪಾಳ, ಅಸ್ಸಾಂ, ಒರಿಸ್ಸಾ, ದೆಹಲಿ ಸಹಿತದೇಶದ ಹತ್ತಕ್ಕೂಅಧಿಕರಾಜ್ಯದಲ್ಲಿ ಮತ್ತುರಾಜ್ಯದಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಒರಿಸ್ಸಾದ ಭುವನೇಶ್ವರದಲ್ಲಿ ನಡೆದಿದ್ದಅಂತರ್ರಾಜ್ಯ ಸಾಂಸ್ಕೃತಿಕ ವಿನಿಮಯಕಾರ್ಯಕ್ರಮದಲ್ಲಿಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಇವರು, ಫೇಸ್ಎನ್ನುವಟ್ರಸ್ಟ್ಕಟ್ಟಿ ಈ ಮೂಲಕ ಹತ್ತಾರುಕಾರ್ಯಕ್ರಮಉಚಿತಕೌನ್ಸಿಲಿಂಗ್ ಸೆಂಟರ್ ನಡೆಸುತ್ತಿದ್ದಾರೆ. ತಿಂಗೋಳ್ದ ಬೊಲ್ಪುಎನ್ನುವ ತುಳು ಕಥಾ ಸಂಕಲನ ಪ್ರಕಟಿಸಿರುವ ಇವರು, ಬೀರೆದಡೆನ್ನಾನಎನ್ನುವ ತುಳು ಜಾನಪದ ಶೈಲಿಯ ಹಾಡುಗಳ ಸಿ.ಡಿ ನಿರ್ಮಾಣ ಮಾಡಿದ್ದಾರೆ. ಜ್ಯೋತಿರ್ನಾದ, ಬ್ರಹ್ಮಶ್ರೀ ನಾರಾಯಣಗುರು ಮುಂತಾದ ಭಜನಾ ಸಿ.ಡಿಗಳಿಗೆ ಗೀತಾ ಸಾಹಿತ್ಯ ಒದಗಿಸಿದ್ದು, ೧೨ ತುಳು ನಾಟಕ ರಚಿಸಿದ್ದಾರೆ. ಐದು ತುಳು ಸಿನಿಮಾದಲ್ಲಿ ನಟಿಸಿರುವ ಇವರು, ಕರ್ನಾಟಕ ತುಳು ಸಾಹಿತ್ಯಅಕಾಡೆಮಿಯ ಮಾಜಿ ಸದಸ್ಯರೂ ಹೌದು. ಯುವವಾಹಿನಿ (ರಿ) ಕೇಂದ್ರ ಸಮಿತಿಯಅಧ್ಯಕ್ಷರಾಗಿದ್ದು, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ
ನರೇಶ್ಕುಮಾರ್ ಸಸಿಹಿತ್ಲುಗೆ ರಾಷ್ಟ್ರೀಯಯುವ ಪ್ರಶಸ್ತಿ
