ಬಂಟ್ವಾಳ: ರಾರಸಂ ಫೌಂಡೇಶನ್, ಲಯನ್ಸ್ ಕ್ಲಬ್ ಬಂಟ್ವಾಳ, ಜೇಸಿಐ ಬಂಟ್ವಾಳ, ಜೇಸಿಐ ಮಡಂತ್ಯಾರ್, ಜೇಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ನಿವೃತ್ತ ಶಿಕ್ಷಕ ಬಿ. ರಾಮಚಂದ್ರ ರಾವ್ ಅವರಿಗೆ ಗೌರವಾಭಿನಂದನೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಶಿಕ್ಷಕ ರಾಜೇಂಂದ್ರ ಭಟ್ ಕೆ., ಅಭಿನಂದನಾ ಭಾಷಣ ಮಾಡಿ ರಾಮಚಂದ್ರ ರಾವ್ ನುಡಿದಂತೆ ನಡೆದವರು, ನಡೆದಂತೆ ನುಡಿದವರು, ನೇರ, ದಿಟ್ಟ, ನಿರಂತರ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು ಎಂದು ತಿಳಿಸಿದರು. ವಿದ್ಯಾರ್ಥಿಗಳು, ಸಾರ್ವಜನಿಕರು ನೀಡುವ ಪ್ರೀತಿಯ ಮುಂದೆ ಯಾವುದೇ ಪ್ರಶಸ್ತಿ ದೊಡ್ಡದಲ್ಲ, ಒಳ್ಳೆಯ ಶಿಕ್ಷಕರು ಯಾವತ್ತೂ ನಿವೃತ್ತಿಯಾಗುವುದಿಲ್ಲ, ಶಿಕ್ಷಣ ಇಲಾಖೆಗೆ ರಾಮಚಂದ್ರ ರಾವ್ ಅವರ ಸೇವೆ ಇನ್ನು ಮುಂದೆಯೂ ಸಿಗಬೇಕು ಎಂದರು. ಸಮಾಜದ ಆಸ್ತಿಯಾಗಿ ಗುರುತಿಸಿಕೊಂಡ ರಾಮಚಂದ್ರ ರಾವ್ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡವರು, ನಂ.೧ ಕಾರ್ಯಕ್ರಮ ನಿರೂಪಕನಾಗಿ ಅವರು ಗೆದ್ದಿದ್ದಾರೆ, ಗುರು ಶಿಷ್ಯ ಸಂಬಂಧ ಉಳಿಬೇಕಾದರೆ ರಾಮಚಂದ್ರ ರಾವ್ ಅವರಂತಹ ಶಿಕ್ಷಕರು ಬೇಕು. ಸ್ವಾಭಿಮಾನಿಯಾಗಿ ಬದುಕಿ ಅದನ್ನೇ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ರಾಮಚಂದ್ರ ರಾವ್ ಅವರು ಅಧ್ಯಾಪಕ ವೃತ್ತಿ ನನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿ, ಮಾರ್ಗದರ್ಶನ ಮಾಡಿದೆ. ಜೇಸಿ ಸಂಸ್ಥೆಯ ಮೂಲಕ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದ್ದು ಜೇಸಿ ಸಂಸ್ಥೆಗೆ ಆಭಾರಿಯಾಗಿದ್ದೇನೆ ಎಂದರು.
ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜನ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ. ಬಿ.ರಮೇಶಾನಂದ ಸೋಮಯಾಜಿ, ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಹರ್ಷಾ ಸಂಪಿಗೆತ್ತಾಯ, ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ನಿರ್ಮಲ ಹೃದಯ ಲಯನ್ಸ್ ವಿಶೇಷ ಚೇತನ ಮಕ್ಕಳ ಪಾಲನ ಕೇಂದ್ರದ ಸಂಚಾಲಕ ದಾಮೋದರ ಬಿ.ಎಂ. ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೆರಾ, ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷ ಹರ್ಷರಾಜ್, ಲಯನಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಜೇಸಿಐ ಮಡಂತ್ಯಾರ್ ಅಧ್ಯಕ್ಷ ಅರುಣ್ ಮೊರಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾರಾಸಂ ಫೌಂಡೇಶನ್ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಸ್ವಾಗತಿಸಿ, ಪ್ರಸ್ತಾಪಿಸಿದರು. ನಿರ್ದೇಶಕರಾದ ಕೇಶವ ಮಾಸ್ತರ್ ವಂದಿಸಿದರು. ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು.